ಶೀಘ್ರದಲ್ಲೇ ಕಿಚ್ಚ ಸುದೀಪ್ ʼಹುಚ್ಚʼ, ಶಿವರಾಜ್ ಕುಮಾರ್ ʼಜೋಗಿʼ ಸಿನಿಮಾ ರೀ-ರಿಲೀಸ್
Team Udayavani, Jul 4, 2024, 6:35 PM IST
ಬೆಂಗಳೂರು: ಕನ್ನಡ ಸೇರಿದಂತೆ ಚಿತ್ರರಂಗದಲ್ಲಿ ಕ್ಲಾಸ್ ಹಳೆಯ ಸಿನಿಮಗಳು ರೀ ರಿಲೀಸ್(Re-Release) ಆಗುವ ಟ್ರೆಂಡ್ ಶುರುವಾಗಿದೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ʼಜಾಕಿʼ, ದರ್ಶನ್ ಅವರ ʼರಾಬರ್ಟ್ʼ ಸಿನಿಮಾಗಳು ರಿಲೀಸ್ ಆಗಿತ್ತು. ಇನ್ನು ಕಾಲಿವುಡ್ , ಟಾಲಿವುಡ್ ಹಾಗೂ ಮಾಲಿವುಡ್ನಲ್ಲೂ ಸೂಪರ್ ಹಿಟ್ ಸಿನಿಮಾಗಳು ಮರು ಬಿಡುಗಡೆ ಆಗಿವೆ.
ಇದೀಗ ಕನ್ನಡ ಇಬ್ಬರು ಸೂಪರ್ ಸ್ಟಾರ್ ಗಳ ಚಿತ್ರಗಳು ಮರು ಬಿಡುಗಡೆ ಆಗಲಿದೆ. ಕಿಚ್ಚ ಸುದೀಪ್( Kiccha Sudeep) ಹಾಗೂ ಶಿವರಾಜ್ ಕುಮಾರ್ (Shiva Rajkumar) ಸಿನಿಕೆರಿಯರ್ಗೆ ಟರ್ನಿಂಗ್ ಪಾಯಿಂಟ್ ಎಂದೇ ಹೇಳಲಾಗುವ ಸಿನಿಮಾಗಳು ಹತ್ತಾರು ವರ್ಷದ ಬಳಿಕ ಮರುಬಿಡುಗಡೆ ಆಗಲಿದೆ.
ಜೋಗಿ ರೀ- ರಿಲೀಸ್.. ಜೋಗಿ ಪ್ರೇಮ್ ನಿರ್ದೇಶನದಲ್ಲಿ 2005, ಆಗಸ್ಟ್ 19ರಂದು ರಿಲೀಸ್ ಆದ ಶಿವರಾಜ್ ಕುಮಾರ್ ಅವರ ʼಜೋಗಿʼ(Jogi Movie) ಸಿನಿಮಾ ಇಂದಿಗೂ ಎವರ್ ಗ್ರೀನ್. ಕಥೆ, ಹಾಡು, ಅಭಿನಯ ಎಲ್ಲ ವಿಭಾಗದಲ್ಲೂ ಈ ಸಿನಿಮಾ ಚಂದನವನದಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು.
ಅರುಂಧತಿ ನಾಗ್ ಮತ್ತು ಶಿವರಾಜ್ಕುಮಾರ್ ಅಭಿನಯ ನೋಡಿ ಪ್ರೇಕ್ಷಕರು ಭಾವುಕರಾಗಿದ್ದರು. ಜನ್ನಿಫರ್ ಕೊತ್ವಾಲ್ ನಾಯಕಿಯಾಗಿದ್ದರು. ಗುರುಕಿರಣ್ ಅವರ ಮ್ಯೂಸಿಕ್ ಮೋಡಿ ಮಾಡಿತ್ತು.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..
ಈ ಸಿನಿಮಾ ರಿಲೀಸ್ ಆಗಿ 19 ವರ್ಷಗಳು ಕಳೆದಿದೆ. ಇದೀಗ ಸಿನಿಮಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು(ಜು.12 ರಂದು) ʼಜೋಗಿʼ ಮರು ಬಿಡುಗಡೆ ಆಗಲಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಕಿಚ್ಚನ ʼಹುಚ್ಚʼ ಮತ್ತೆ ಥಿಯೇಟರ್ಗೆ: ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ 2001, ಜುಲೈ 6 ರಂದು ʼಹುಚ್ಚʼ(Huchcha) ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ರಿಲೀಸ್ 23 ವರ್ಷಗಳು ಕಳೆದಿದೆ. ಇಷ್ಟು ವರ್ಷಗಳ ಇದೀಗ ಸಿನಿಮಾ ಹೊಸ ರೂಪದಲ್ಲಿ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ.
ಕಿಚ್ಚ ಸುದೀಪ್ ಜೊತೆ ರೇಖಾ,ಅವನಾಶ್ ಮುಂತಾದವರು ನಟಿಸಿದ್ದರು.
ʼಹುಚ್ಚʼ ಶೀಘ್ರದಲ್ಲಿಯೇ ರೀ-ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. DTS 5.1 ಸೌಂಡ್ ಅಪ್ಗ್ರೇಡ್ ಮಾಡಲಾಗಿದೆ. ಹೊಸ ರೂಪದಲ್ಲಿ ರಿಲೀಸ್ ಆಗಲಿರುವ ʼಹುಚ್ಚʼ ಸಿನಿಮಾದಲ್ಲಿ ಸಿನಿಮಾದಲ್ಲಿ 5 ನಿಮಿಷದ ವಿಶೇಷ ವಿಡಿಯೋ ಕೂಡ ಸೇರಿರಲಿದೆ. ಇದು ಅತಿಥಿಗಳೊಂದಿಗೆ ಮಾತನಾಡಿರುವ ಕ್ಲಿಪಿಂಗ್ ನ್ನು ಒಳಗೊಳ್ಳಲಿದೆ.
ʼಹುಚ್ಚʼ 1999ರಲ್ಲಿ ಬಂದ ವಿಕ್ರಮ್ ಅವರ ʼಸೇತುʼ ಸಿನಿಮಾದ ರಿಮೇಕ್ ಆಗಿತ್ತು. ಇದಾದ ಬಳಿಕ ಓಂ ಪ್ರಕಾಶ್ 2005 ರಲ್ಲಿ ಬಂದ ತಮಿಳು ʼರಾಮ್ʼ ಸಿನಿಮಾವನ್ನು ರಿಮೇಕ್ ಮಾಡಿ, 2018ರಲ್ಲಿ ʼಹುಚ್ಚ-2ʼ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಕೃಷ್ಣ, ಮಾಳವಿಕಾ ಅವಿನಾಶ್, ಶ್ರಾವ್ಯ ಮತ್ತು ಪಿ ಸಾಯಿ ಕುಮಾರ್ ಮುಂತಾದವರು ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್ ಅರವಿಂದ ಸ್ವಾಮಿ ಹಾಡು ಹಬ್ಬ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.