Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ
ಜಿಲ್ಲಾಧಿಕಾರಿ, ಎಸ್ ಪಿ ಮುಂದೆ ಆಕ್ರೋಶದ ಮಾತಾಡಿದ ಜೆಡಿಎಸ್ ಶಾಸಕ
Team Udayavani, Jul 4, 2024, 7:04 PM IST
ಯಾದಗಿರಿ: ಗುರುಮಠಕಲ್ ತಾಲೂಕಿನಲ್ಲಿ ಪೊಲೀಸರಿಂದ ನಡೆಯುವ ಭ್ರಷ್ಟಾಚಾರದಿಂದ ನಿಜಕ್ಕೂ ಬೇಸರಗೊಂಡಿದ್ದೇನೆ. ತಮ್ಮ ವೈಯಕ್ತಿಕ ಕೆಲಸ ಹಾಗೂ ಅಕ್ರಮ ದಂಧೆಗೆ ಶಾಮೀಲಾಗಿರುವುದು ನೋವು ತರಿಸುತ್ತದೆ. ಸ್ವತಃ ಶಾಸಕನಾಗಿ ನಾನೇ ಕರೆ ಮಾಡಿದರೂ ತಾಲೂಕಿನ ಪೊಲೀಸರು ಸರಿಯಾದ ಉತ್ತರ ನೀಡುವುದಿಲ್ಲ, ಪೊಲೀಸರ ನಡೆಯಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಬೇಸರ ವ್ಯಕ್ತಪಡಿಸಿದರು.
ಗುರುಮಠಕಲ್ ನಗರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಹಾಗೂ ಎಸ್ಪಿ ಸಂಗೀತಾ ಜಿ. ಅವರ ಮುಂದೆ ತಾಲೂಕಿನ ಪೊಲೀಸರ ಬಗ್ಗೆ ಆರೋಪಿಸಿ, ನೋವಿನ ಮಾತುಗಳಾಡಿದ ಅವರು, ತಾಲೂಕಿನ ತುಂಬೆಲ್ಲಾ ಪೊಲೀಸರು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಬೇಕೆ ಹೊರತು, ಕಾನೂನು ಬಾಹೀರಕ್ಕೆ ಎಂದಿಗೂ ಕುಮ್ಮಕ್ಕು ನೀಡಬಾರದು. ಒಬ್ಬ ಶಾಸಕನ ಕಣ್ಣು ತಪ್ಪಿಸಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದರೆ, ರಕ್ಷಣೆ ಮಾಡುವ ಪೊಲೀಸರು ಕಣ್ಣು ಮುಚ್ಚಿಕೊಂಡಿದ್ದಾರಾ ಎಂದು ಕೋಪಗೊಂಡರು.
ಬಡವರು ಪೊಲೀಸ್ ಠಾಣೆಗೆ ಹೋದರೆ ಸರಿಯಾದ ಸ್ಪಂದನೆ ನೀಡುವುದಿಲ್ಲ ಎಂದು ಅನೇಕರು ದೂರಿದ್ದಾರೆ. ಠಾಣೆಯಲ್ಲಿ ನ್ಯಾಯ ಸಿಗದೆ ಜನರು ಯಾರ ಹತ್ತಿರ ಕಾನೂನು ಪರಿಹಾರಕ್ಕೆ ಹೋಗಬೇಕು ನೀವೇ ಹೇಳಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ. ಅವರಿಗೆ ಶಾಸಕ ಶರಣಗೌಡ ಕಂದಕೂರು ಪ್ರಶ್ನೆ ಮಾಡಿದರು.
ಪೊಲೀಸರ ಮೇಲೆ ಮೇಲಾಧಿಕಾರಿಗಳು ದಯವಿಟ್ಟು ಹಿಡಿತ ಸಾಧಿಸಿ, ಕ್ರಮ ವಹಿಸುವಂತೆ ಈ ಕಾರ್ಯಕ್ರಮದ ಮೂಲಕ, ತಾಲೂಕಿನ ನೊಂದ ಜನರ ಪರವಾಗಿ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಇಟ್ಟಿದ್ದೇನೆ, ಸರಿ ಮಾಡುವುದು ನಿಮ್ಮ ಮೇಲಿದೆ, ಇಲ್ಲವಾದಲ್ಲಿ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಗದ್ದುಗೆಗೆ ರಾಜೀನಾಮೆ ಪತ್ರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ
Dr G Parameshwar: ಸೆನ್ ಠಾಣೆಗಳಿಗೂ ಎಸ್ಪಿ ಕೇಡರ್: ಗೃಹ ಸಚಿವ
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.