Belve ಕೆನರಾ ಬ್ಯಾಂಕ್ ಪ್ರಬಂಧಕರಿಂದ ವಂಚನೆ: ದೂರು ದಾಖಲು
Team Udayavani, Jul 4, 2024, 11:06 PM IST
ಸಿದ್ದಾಪುರ: ಬೆಳ್ವೆ ಕೆನರಾ ಬ್ಯಾಂಕ್ನಲ್ಲಿ ಮಾಡಿದ್ದ 50 ಸಾವಿರ ರೂಪಾಯಿ ಸಾಲವನ್ನು ತೀರಿಸಿದರೂ ಬ್ಯಾಂಕ್ ಪ್ರಬಂಧಕ ದಿನೇಶ್ ಕೋಟ್ಯಾನ್ 5 ಲಕ್ಷ ರೂ. ಸಾಲ ಬಾಕಿ ಇದೆ ಎಂದು ಪಹಣಿ ಪತ್ರದಲ್ಲಿ ನಮೂದು ಮಾಡಿ ವಂಚಿಸಿದ್ದಾರೆ ಎಂದು ಉಡುಪಿ ಕೆಮ್ಮಣ್ಣು ಗುಜ್ಜರಬೆಟ್ಟು ಕೆ. ಸಕುಬಾಯಿ (74) ಪೊಲೀಸರಿಗೆ ದೂರು ನೀಡಿದ್ದಾರೆ.
ಸಕುಬಾಯಿ ಅವರು ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಸರ್ವೇ ನಂಬರ್ 203/6ಎ ಯಲ್ಲಿರುವ 0.40 ಎಕರೆ ಜಾಗದ ಮೇಲೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2013-14ನೇ ಸಾಲಿನಲ್ಲಿ ಬೆಳ್ವೆ ಕೆನರಾ ಬ್ಯಾಂಕ್ನಲ್ಲಿ 50 ಸಾವಿರ ರೂ. ಸಾಲ ಮಾಡಿದ್ದು, ಬಳಿಕ ಮರುಪಾವತಿ ಮಾಡಿದ್ದರು. ಇತ್ತೀಚೆಗೆ ಪಹಣಿ ಪತ್ರ ತೆಗೆಸಿದಾಗ 50 ಸಾವಿರ ರೂ. ಜತೆಯಲ್ಲಿ 5 ಲಕ್ಷ ರೂ. ಹೆಚ್ಚುವರಿಯಾಗಿ ಋಣಭಾರ ಇರುವುದಾಗಿ ದಾಖಲಾಗಿರುವುದು ತಿಳಿದು ಬಂದಿತು.
ಪ್ರಬಂಧಕ ದಿನೇಶ್ ಕೋಟ್ಯಾನ್ ಅವರು ತನ್ನ ಸಹೋದರ ಮತ್ತು ಸಹೋದರಿಯ ಸಹಿ ಫೋರ್ಜರಿ ಮಾಡಿ, ಫಾರಂ ನಂಬರ್ 3 ಡಿಕ್ಲರೇಶನ್ ಫಾರಂ ಸೃಷ್ಟಿಸಿ ಅದನ್ನು ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ನೀಡಿ ಪಹಣಿಯಲ್ಲಿ ಸಾಲ ನಮೂದಿಸುವ ಮೂಲಕ ವಂಚಿಸಿದ್ದಾರೆ ಎಂದು ಕೆ. ದೂರಿನಲ್ಲಿ ತಿಳಿಸಲಾಗಿದೆ.
ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್ ಭೇಟಿ
Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು
Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.