Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು
Team Udayavani, Jul 4, 2024, 11:09 PM IST
ಮಣಿಪಾಲ: ಆನ್ಲೈನ್ನಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ನಕಲಿ ಜಾಹೀರಾತು ಮೂಲಕ ಗಮನ ಸೆಳೆದು ಹಣ ಹೂಡಿಕೆ ಮಾಡಿಸಿ ವಂಚನೆ ಮಾಡಲಾಗಿದೆ ಎಂದು ಮಣಿಪಾಲ ವ್ಯಕ್ತಿ ದೂರು ದಾಖಲಿಸಿದ್ದಾರೆ.
ಶೇರ್ಖಾನ್ ಇನ್ವೆಸ್ಟ್ ಮೆಂಟ್ ಕ್ಲಬ್ ಸಾಂಸ್ಥಿಕ ಷೇರು ವಹಿವಾಟು ಬಗ್ಗೆ ಜಾಹೀರಾತು ನೋಡಿದ ಮಣಿಪಾಲ ನಿವಾಸಿ ಪ್ರೇಮಾನಂದ (61) ಅವರು ಆ್ಯಪ್ ಇನ್ಸ್ಟಾಲ್ ಮಾಡಿ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಆರಂಭದಲ್ಲಿ 1 ಲಕ್ಷ ರೂ. ಅವರ ವರ್ಗಾವಣೆ ಮಾಡಿದ್ದು, ಕ್ರಮೇಣ ಇನ್ನಷ್ಟು ಹೂಡಿಕೆಯೊಂದಿಗೆ 4.99 ಲಕ್ಷ ರೂ. ಒಟ್ಟು ಹೂಡಿಕೆ ಮಾಡಿದ್ದಾರೆ.
ಈ ಹೂಡಿಕೆಗೆ 4.60 ಲಕ್ಷ ರೂ. ಲಾಭಾಂಶ ತೋರಿಸಿ, 42 ಲಕ್ಷ ರೂ ಷೇರು ಹಂಚಿಕೆ ಮಾಡಿ, 32 ಲಕ್ಷ ರೂ. ಪಾವತಿಸುವಂತೆ ಆರೋಪಿಗಳು ಸೂಚಿಸಿದ್ದಾರೆ. ಇದರಿಂದ ಅನುಮಾನಗೊಂಡ ಪ್ರೇಮಾನಂದ ಅವರು ಉಡುಪಿಗೆ ಶೇರ್ಖಾನ್ ಕಚೇರಿಗೆ ತೆರಳಿ ಪರಿಶೀಲಿಸಿದಾಗ ಇದು ತಮ್ಮ ಸಂಸ್ಥೆಯ ಹೆಸರಲ್ಲಿರುವ ನಕಲಿ ಸಂಸ್ಥೆ ಎಂದು ಅಲ್ಲಿನ ಪ್ರತಿನಿಧಿಗಳು ತಿಳಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.