Wimbledon ಟೆನಿಸ್ : ಜೊಕೋವಿಕ್ 3ನೇ ಸುತ್ತಿಗೆ
ನವಾರೊ ಹೊಡೆತಕ್ಕೆ ಹೊರಬಿದ್ದ ನವೋಮಿ ಒಸಾಕಾ
Team Udayavani, Jul 5, 2024, 12:58 AM IST
ವಿಂಬಲ್ಡನ್: ನೊವಾಕ್ ಜೊಕೋವಿಕ್ ಅವರು ಗುರುವಾರ ನಡೆದ ವಿಂಬಲ್ಡನ್ ಟೆನಿಸ್ ಕೂಟದ ದ್ವಿತೀಯ ಸುತ್ತಿನಲ್ಲಿ ಬ್ರಿಟನ್ನ ಜೇಕಬ್ ಫಿಯರ್ನ್ಲೆ ಅವರನ್ನು ನಾಲ್ಕು ಸೆಟ್ಗಳ ಹೋರಾಟದಲ್ಲಿ ಸೋಲಿಸಿ ಮುನ್ನಡೆದಿದ್ದಾರೆ. ಮೊದಲೆರಡು ಸೆಟ್ ಸುಲಭವಾಗಿ ಗೆದ್ದ ಜೊಕೋವಿಕ್ ಮೂರನೇ ಸೆಟ್ನಲ್ಲಿ ಎದರಾಳಿಯಿಂದ ಪ್ರತಿರೋಧ ಎದುರಿಸಿದ್ದರು. ಅಂತಿಮವಾಗಿ 6-3, 6-4, 5-7, 7-5 ಸೆಟ್ಗಳಿಂದ ಪಂದ್ಯ ಗೆದ್ದು ಮೂರನೇ ಸುತ್ತಿಗೇರಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಸ್ಟಾನ್ ವಾವ್ರಿಂಕ ಅವರು ಗಾಲ್ ಮೊನ್ಫಿಲ್ಸ್ ಅವರ ವಿರುದ್ಧ 7-6 (5), 6-4, 7-6 (3) ಸೆಟ್ಗಳಿಂದ ಸೋತು ಹೊರಬಿದ್ದರು.
ಸಿನ್ನರ್ ಮೂರನೇ ಸುತ್ತಿಗೆ
ನಾಲ್ಕು ಬಾರಿಯ ಗ್ರ್ಯಾನ್ ಸ್ಲಾಮ್ ನವೋಮಿ ಒಸಾಕಾ ಅವರು ದ್ವಿತೀಯ ಸುತ್ತಿನ ಹೋರಾಟದಲ್ಲಿ 19ನೇ ಶ್ರೇಯಾಂಕದ ಎಮ್ಮಾ ನವಾರೊ ಅವರ ಕೈಯಲ್ಲಿ ನೇರ ಸೆಟ್ಗಳಿಂದ ಸೋತು ಹೊರಬಿದ್ದಿದ್ದಾರೆ. ಸೆಂಟರ್ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಜಾನ್ನಿಕ್ ಸಿನ್ನರ್ ನಾಲ್ಕು ಸೆಟ್ಗಳ ಕಠಿನ ಸೆಣಸಾಟದಲ್ಲಿ 2021ರ ರನ್ನರ್ ಅಪ್ ಮಾಟೆಯೊ ಬರೆಟಿನಿ ಅವರನ್ನು ಸೋಲಿಸಿ ಮುನ್ನಡೆದಿದ್ದಾರೆ.
15 ತಿಂಗಳ ವಿಶ್ರಾಂತಿ ಬಳಿಕ ಕಳೆದ ಜನವರಿನಲ್ಲಿ ಟೆನಿಸ್ ರಂಗಕ್ಕೆ ಮರಳಿದ್ದ ಒಸಾಕಾ 4-6, 1-6 ಸೆಟ್ಗಳಿಂದ ನವಾರೊ ಅವರಿಗೆ ಶರಣಾಗಿ ಹೊರಬಿದ್ದರು. ಈ ಗೆಲುವಿನ ಮೂಲಕ ನವಾರೊ ಮೊದಲ ಬಾರಿ ಇಲ್ಲಿ ಮೂರನೇ ಸುತ್ತಿಗೇರಿದರು.
ರಾಡುಕಾನು 3ನೇ ಸುತ್ತಿಗೆ
ದಿನದ ಇನ್ನೊಂದು ಪಂದ್ಯದಲ್ಲಿ ಎಮ್ಮಾ ರಾಡುಕಾನು ಅವರು ಬೆಲ್ಜಿಯಂದ ಎಲಿಸೆ ಮಾರ್ಟೆನ್ಸ್ ಅವರನ್ನು 6-1, 6-2 ಸೆಟ್ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು.
ಇಟಲಿ ಆಟಗಾರರ ಹೋರಾಟ
ಇಟಲಿ ಆಟಗಾರರ ನಡುವಣ ಹೋರಾ ಟದಲ್ಲಿ ಸಿನ್ನರ್ 2021ರ ರನ್ನರ್ ಅಪ್ ಮಾಟೆಯೊ ಬರೆಟನಿ ಅವರನ್ನು 7-6 (3), 7-6 (4), 2-6, 7-6 (4) ಸೆಟ್ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು. ಎದುರಾಳಿಯ ಆಟದ ತೀವ್ರತೆಯನ್ನು ಗಮನಿಸಿದಾಗ ನಾನಿಂದು ಆಟದ ಮಟ್ಟವನ್ನು ಏರಿಸಲೇಬೇ ಕಿತ್ತು ಎಂದು ಗೆಲುವಿನ ಬಳಿಕ ಸಿನ್ನರ್ ಹೇಳಿದರು.
ರೂಡ್ಗೆ ಸೋಲು
ಇಟಲಿಯ ಫ್ಯಾಬಿಯೊ ಫಾಗ್ನಿನಿ ಅಮೋಘ ಆಟ ಪ್ರದರ್ಶಿಸಿ ಎಂಟನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಅವರನ್ನು 6-4, 7-5, 6-7 (1), 6-3 ಸೆಟ್ಗಳಿಂದ ಸೋಲಿಸಿ ಮುರನೇ ಸುತ್ತು ತಲುಪಿದರು. ಇನ್ನೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೇವ್ 6-7 (3), 7-6 (4), 6-4, 7-5 ಸೆಟ್ಗಳಿಂದ ಅಲೆಕ್ಸಾಂಡ್ರೆ ಮುಲ್ಲರ್ ಅವರನ್ನು ಸೋಲಿಸಿ ಮೂರನೇ ಸುತ್ತು ತಲುಪಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
ISSF Junior World Championship: ಕಿರಿಯರ ಶೂಟಿಂಗ್; ಭಾರತಕ್ಕೆ ಸಮಗ್ರ ಪ್ರಶಸ್ತಿ
ಗ್ವಾಲಿಯರ್ ಮಸೀದಿಗೆ ಭೇಟಿ ನೀಡದೆ ಹೋಟೆಲ್ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.