Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ
Team Udayavani, Jul 5, 2024, 1:05 AM IST
ಸಿದ್ದಾಪುರ: ಕರಾವಳಿ ಸಹಿತ ಮಲೆನಾಡು ಪ್ರದೇಶದಲ್ಲಿ ಜು. 3ರಂದು ನಿರಂತರವಾಗಿ ಸುರಿದ ಮಳೆಗೆ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿಯುವ ಕುಬ್ಜಾ ನದಿ ಉಕ್ಕಿ ಹರಿದು, ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಗೆ ನುಗ್ಗಿದೆ.
ಕುಬ್ಜಾ ನದಿ ಮತ್ತು ನಾಗತೀರ್ಥ ಸಮಾಗಮಗೊಂಡು ನೀರು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದೆ.
ಕುಬ್ಜೆಯು ಬ್ರಾಹ್ಮಿ ದುರ್ಗಾಪರ ಮೇಶ್ವರಿ ದೇವಿಯನ್ನು ಸ್ನಾನ ಮಾಡಿಸುವುದು ಪ್ರತಿವರ್ಷದ ವಾಡಿಕೆ. ವರ್ಷಕ್ಕೊಮ್ಮೆ ಈ ರೀತಿ ಸ್ನಾನ ಮಾಡಿಸುವುದು ಪುರಾಣ ಕಾಲದಿಂ ದಲೂ ನಡೆದು ಬಂದಿದೆ ಎಂಬ ನಂಬಿಕೆ ಇದೆ. ಶ್ರೀದೇವಿಗೆ ಸ್ನಾನ ಆಗುತ್ತಿದ್ದಂತೆ ನಾನಾ ಮೂಲೆಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ನೀರಿನಲ್ಲಿ ಮಿಂದು ಪುಳಕಗೊಂಡರು. ಈ ನೀರಿನಲ್ಲಿ ಸ್ನಾನ ಮಾಡಿದರೆ ರೋಗ- ರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಗರ್ಭಗುಡಿಯ ಉದ್ಭವಲಿಂಗದ ಮೇಲ್ಭಾಗದಲ್ಲಿ ಸುಮಾರು ಒಂದೂವರೆ ಅಡಿಗೂ ಹೆಚ್ಚು ನೀರು ನಿಂತಿರುವುದು 34 ವರ್ಷದಲ್ಲೇ ಪ್ರಥಮ. ನನ್ನ ಆಡಳಿತದ 35 ವರ್ಷಗಳಲ್ಲಿ ದೇವಸ್ಥಾನದ ಒಳಗೆ ಇಷ್ಟು ನೀರು ನುಗ್ಗಿದ್ದನ್ನು ನೋಡಿಲ್ಲ. ಬುಧವಾರ ಮಧ್ಯರಾತ್ರಿ 1.30ರಿಂದ ಗುರುವಾರ ಬೆಳಗ್ಗಿನ ಜಾವದ ತನಕ ಒಂದೇ ಮಟ್ಟದಲ್ಲಿ ಗರ್ಭಗುಡಿಯಲ್ಲಿ ನೀರು ನಿಂತಿದೆ. ರಾತ್ರಿ 8.30ರ ತನಕ ಕುಬ್ಜಾ ನದಿಯಲ್ಲಿ ಅಷ್ಟೊಂದು ನೀರು ಇರಲಿಲ್ಲ.
-ಎಸ್. ಸಚ್ಚಿದಾನಂದ ಚಾತ್ರ, ಆನುವಂಶಿಕ ಆಡಳಿತ ಧರ್ಮದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್ ಭೇಟಿ
Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು
Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.