Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ
Team Udayavani, Jul 5, 2024, 7:28 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ಸಾಮಾನ್ಯ ತೃಪ್ತಿ. ಉದ್ಯಮಕ್ಕೆ ಹೊಸ ವಿಭಾಗಗಳ ಸೇರ್ಪಡೆ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶ ಲಭ್ಯ. ಅವಿವಾಹಿತರಿಗೆ ವಿವಾಹ ಯೋಗ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದದ ವಾತಾವರಣ.
ವೃಷಭ: ಭಾರೀ ನಿರೀಕ್ಷೆ, ಭರವಸೆಗಳೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ರಖಂ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಕೈತುಂಬಾ ವ್ಯಾಪಾರ.
ಮಿಥುನ: ಆಯ್ಕೆಯಲ್ಲಿ ಎಡವದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿ ಕಾರ್ಯ ದಕ್ಷತೆಗೆ ಗೌರವ. ದೂರದಲ್ಲಿರುವ ಬಂಧು ಗಳ ಭೇಟಿ. ಸ್ವಂತ ಉದ್ಯಮದ ಪ್ರಗತಿಯ ವೇಗಕ್ಕೆ ತಡೆ. ಅವಿವಾಹಿತ ಪುತ್ರನಿಗೆ ವಿವಾಹ ಯೋಗ.
ಕರ್ಕಾಟಕ: ಉದ್ಯೋಗ ಕ್ಷೇತ್ರದ ಆತಂಕ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ. ಹೊಸ ಉದ್ಯಮ ಆರಂಭಿಸಲು ಸಮಾಲೋಚನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಪ್ರೋತ್ಸಾಹ. ಮನೆಯಲ್ಲಿ ದೇವತಾರಾಧನೆಯ ಸಂಭ್ರಮ.
ಸಿಂಹ: ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ. ಉದ್ಯಮ ಸ್ಥಳದಲ್ಲಿ ದೇವತಾ ಕಾರ್ಯ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಹಿರಿಯರ ಆರೋಗ್ಯ ವೃದ್ಧಿ. ಧ್ಯಾನ, ಭಜನೆ, ಸತ್ಸಂಗಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ.
ಕನ್ಯಾ: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ.
ತುಲಾ: ಉದ್ಯೋಗದಲ್ಲಿ ಸಂತೃಪ್ತಿ. ಉದ್ಯಮ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗುರುಮಂದಿರ, ದೇವಮಂದಿರಕ್ಕೆ ಭೇಟಿ. ವ್ಯವಹಾರದ ನಿಮಿತ್ತ ಸಣ್ಣ ಪ್ರವಾಸ.
ವೃಶ್ಚಿಕ: ಉದ್ಯೋಗದಲ್ಲಿ ಆಂತರಿಕ ಬದ ಲಾವಣೆ. ಉದ್ಯಮದಲ್ಲಿ ಹೊಸ ವಿಭಾಗ ಆರಂಭ. ಊರಿನ ದೇವಾಲಯ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ.
ಧನು: ಹಲವು ದಿನಗಳ ಪ್ರಯತ್ನಕ್ಕೆ ಫಲ ಲಭ್ಯ. ಉದ್ಯೋಗದಲ್ಲಿ ಹೊಸ ಬಗೆಯ ಹೊಣೆಗಾರಿಕೆ. ಆದಾಯ ವೃದ್ಧಿ ಯೋಜನೆಗಳ ಕುರಿತು ಸಹಚರರೊಡನೆ ಸಮಾಲೋಚನೆ. ಬಾಲ್ಯದ ಗುರುಗಳ ಭೇಟಿ. ತೋಟಗಾರಿಕೆಯಲ್ಲಿ ಸಂತೃಪ್ತಿ.
ಮಕರ: ಉದ್ಯಮ ಸಂಸ್ಥೆಗೆ ಗಣ್ಯರ ಭೇಟಿ. ವಧೂ ವರಾನ್ವೇಷಣೆಯಲ್ಲಿ ನಿರತರಾಗಿ ರುವವರಿಗೆ ಶುಭ ಸಮಾಚಾರ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ವಸ್ತ್ರ, ಸಿದ್ಧವಸ್ತ್ರ, ಆಭರಣ ವ್ಯಾಪಾರಿಗಳಿಗೆ ಹೇರಳ ಲಾಭ.
ಕುಂಭ: ಉದ್ಯೋಗ ಸ್ಥಾನದಲ್ಲಿ ಮುಂದಿನ ವ್ಯವಸ್ಥೆಗಳ ಚಿಂತನೆ. ಉದ್ಯಮ ನಿರ್ವಹಣೆ ನಿರಾತಂಕ. ಮುದ್ರಣ ಸಾಮಗ್ರಿಗಳ ಮಾರಾಟ ವೃದ್ಧಿ. ಸೇವಾಕಾರ್ಯಗಳಲ್ಲಿ ಪಾಲುಗೊಳ್ಳುವಿಕೆಗೆ ಮನೆ ಮಂದಿಯ ಸಹಕಾರ.
ಮೀನ: ಸಪ್ತಾಹ ಮುಗಿಯುತ್ತಿದ್ದಂತೆ ಶುಭ ಸೂಚನೆಗಳು. ಸಹೋದ್ಯೋಗಿಗಳ ಉತ್ತಮ ಸಹಕಾರ. ಸರಕಾರಿ ಅಧಿಕಾರಿಗಳ ಪೂರ್ಣ ಸಹಾಯ. ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ. ಸ್ವಂತ ಉದ್ಯಮ ಕೈಗೊಳ್ಳುವವರಿಗೆ ಮಾರ್ಗದರ್ಶನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.