Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು


Team Udayavani, Jul 5, 2024, 12:48 PM IST

Kalki

ಸಿನಿಮಾವೊಂದರ ಗೆಲುವು, ದೊಡ್ಡ ಮಟ್ಟದ ಕಲೆಕ್ಷನ್‌ ಚಿತ್ರರಂಗಗಳಿಗೆ ಒಂದು ಬೂಸ್ಟರ್‌ ಡೋಸ್‌ನಂತೆ ಕಾರ್ಯನಿರ್ವಹಿಸುತ್ತದೆ. ಅದು ಯಾವುದೇ ಭಾಷೆಯ ಚಿತ್ರವಿರಬಹುದು. ಆದರೆ, ಗೆಲುವನ್ನು ಮಾತ್ರ ಎಲ್ಲಾ ಭಾಷೆಯ ಚಿತ್ರರಂಗ ಸಂಭ್ರಮಿಸುತ್ತದೆ. ತಮಗೆ ಗೊತ್ತಿಲ್ಲದಂತೆ ಒಂದು ಹುರುಪು, ಜೋಶ್‌ ಮೂಡುತ್ತದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಸಿನಿಮಾ ಕಾರ್ಯಗಳಿಗೆ ವೇಗ ಸಿಗುತ್ತದೆ. ಅದರಲ್ಲೂ ಸತತ ಸೋಲುಗಳನ್ನೇ ಕಂಡ ಚಿತ್ರರಂಗಗಳಂತೂ ಇಂತಹ ಗೆಲುವನ್ನು ಸಂಭ್ರಮಿಸುವುದರಲ್ಲಿ ಎರಡು ಮಾತಿಲ್ಲ. ಈಗ “ಕಲ್ಕಿ’ ಅಂತಹ ಸಂಭ್ರಮವನ್ನು ತಂದಿದೆ. ಜನ ಚಿತ್ರಮಂದಿರಕ್ಕೆ ಬರುವುದನ್ನೇ ಮರೆತಿದ್ದಾರೆ. ಓಟಿಟಿಯನ್ನೇ ಎದೆಗೊತ್ತಿಕೊಂಡಿದ್ದಾರೆಂದು ಬೇಸರದಲ್ಲಿದ್ದ ಸಿನಿಮಾ ಮಂದಿಗೆ ಸದ್ಯ ಭರವಸೆ ಮೂಡಿಸಿದ್ದು “ಕಲ್ಕಿ’ ಮತ್ತು ಅದರ ಕಲೆಕ್ಷನ್‌.

ಪ್ರಭಾಸ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾದ “ಕಲ್ಕಿ’ ಚಿತ್ರ ಬರೋಬ್ಬರಿ 750 ಕೋಟಿ ರೂಪಾಯಿ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಇದು ವಿಶ್ವದಾದ್ಯಂತ ಚಿತ್ರ ಏಳು ದಿನಗಳಲ್ಲಿ ಬಾಚಿಕೊಂಡಿರುವ ಕಲೆಕ್ಷನ್‌. ಈ ಕಲೆಕ್ಷನ್‌ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಹುರುಪು ಕೊಟ್ಟಿದ್ದು ಸುಳ್ಳಲ್ಲ. ಮಲಯಾಳಂ ಹೊರತುಪಡಿಸಿ ಹಿಂದಿ, ತಮಿಳು, ತೆಲುಗು, ತೆಲುಗು ಹಾಗೂ ಕನ್ನಡ ಚಿತ್ರರಂಗಗಳು ಒಂದು ಗೆಲುವಿಗಾಗಿ ಎದುರು ನೋಡುತ್ತಿವೆ. ಬಿಡುಗಡೆಯಾದ ಸಿನಿಮಾಗಳು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಫ‌ಲ ನೀಡುತ್ತಿಲ್ಲ. ಹೀಗಿರುವಾಗ ಪ್ರೇಕ್ಷಕ ಸಿನಿಮಾ ಬಗ್ಗೆ ಆಸಕ್ತಿ ಕಳೆದುಕೊಂಡನಾ ಎಂಬ ಸಂದೇಹ ಬಂದಿದ್ದು ಸುಳ್ಳಲ್ಲ.

ಈಗ “ಕಲ್ಕಿ’ ಆ ಸಂದೇಹವನ್ನು ದೂರ ಮಾಡಿದೆ. ಜೊತೆಗೊಂದು ಸಂದೇಶವನ್ನು ನೀಡಿದೆ. “ಕೇವಲ ಸ್ಟಾರ್‌ ಸಿನಿಮಾ ಅಥವಾ ಅದ್ಧೂರಿ ಬಜೆಟ್‌ನಲ್ಲಿ ಸಿನಿಮಾ ಮಾಡಿದರೆ ಜನ ಬರಲ್ಲ, ಬದಲಾಗಿ ಕಥೆಯಲ್ಲಿ ಒಂದಷ್ಟು ಹೊಸತನ ಹಾಗೂ ಪ್ರೇಕ್ಷಕ ಊಹಿಸಿಕೊಳ್ಳಲಾಗದ ದೃಶ್ಯವೈಭವವಿದ್ದರಷ್ಟೇ ಪ್ರೇಕ್ಷಕ ಸಿನಿಮಾಕ್ಕೆ ಜೈ ಎನ್ನುತ್ತಾನೆ’ ಎಂಬ ಸಂದೇಶ.

ಹಾಗೆ ನೋಡಿದರೆ “ಕಲ್ಕಿ’ಯ ಸಿನಿಮಾದ ಅವಧಿಯೂ ಸ್ವಲ್ಪ ಹೆಚ್ಚೇ ಇದೆ. ಆದರೂ ಜನ ಸಿನಿಮಾವನ್ನು ನೋಡುತ್ತಿದ್ದಾರೆ. ಅಲ್ಲಿನ ದೃಶ್ಯ ವೈಭವಕ್ಕೆ ಫಿದಾ ಆಗುತ್ತಿದ್ದಾರೆ. ಪಾತ್ರಗಳ ಪೋಷಣೆಯಲ್ಲಿ ಹೊಸತನ ಕಾಣುತ್ತಿದೆ. ಇವೆಲ್ಲವೂ “ಕಲ್ಕಿ’ಯ ನಾಗಾಲೋಟಕ್ಕೆ ಕಾರಣವಾಗಿದೆ. ಸತತ ಸೋಲಿನಲ್ಲಿದ್ದ ಪ್ರಭಾಸ್‌ “ಸಲಾರ್‌’ನಿಂದ ಸ್ವಲ್ಪ ಮಟ್ಟಿಗೆ ಮೈಕೊಡವಿಕೊಂಡಿದ್ದರು. ಈಗ “ಕಲ್ಕಿ’ಯಿಂದ ಮತ್ತೆ ಎದ್ದು ನಿಂತಿದ್ದಾರೆ.

ಸ್ಟಾರ್‌ಗಳಿಗೆ ವಿಶ್ವಾಸ

“ಕಲ್ಕಿ’ ಸಿನಿಮಾ ಮೂಲ ತೆಲುಗು ಚಿತ್ರರಂಗದಿಂದ ತಯಾರಾದ ಚಿತ್ರವಾದರೂ ಅದರ ಗೆಲುವು ಮಾತ್ರ ಈಗ ಎಲ್ಲಾ ಚಿತ್ರರಂಗಗಳಿಗೆ ವಿಸ್ತರಿಸುವ ಜೊತೆಗೆ ವಿಶ್ವಾಸ ಮೂಡಿಸಿರುವುದು ಸುಳ್ಳಲ್ಲ. ಅದರಲ್ಲೂ ಬಿಗ್‌ ಬಜೆಟ್‌ನ ಸ್ಟಾರ್‌ ಸಿನಿಮಾಗಳಿಗೆ “ಕಲ್ಕಿ’ಯ ಕಲೆಕ್ಷನ್‌ ವಿಶ್ವಾಸ ತಂದಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್‌ ಸಿನಿಮಾಗಳ ರಿಲೀಸ್‌, ಪ್ರಮೋಶನ್‌ ಪ್ಲ್ರಾನ್‌ ಎಲ್ಲದರಲ್ಲೂ ಒಂದಷ್ಟು ಬದಲಾವಣೆಯಾಗುವ ಸಾಧ್ಯತೆಯಂತೂ ಇದೆ. ಸದ್ಯ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸ್ಟಾರ್‌ ಸಿನಿಮಾಗಳು ಆಗಸ್ಟ್‌ನಿಂದ ಬಿಡುಗಡೆಯಾಗಲಿವೆ. ಸದ್ಯ “ಕಲ್ಕಿ’ಯನ್ನು ಕಣ್ತುಂಬಿಕೊಂಡ ಪ್ರೇಕ್ಷಕ ಅದೇ ಮೂಡ್‌ನ‌ಲ್ಲಿ ತಮ್ಮ ಸಿನಿಮಾಕ್ಕೂ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ಸಿನಿಮಂದಿ ಎದುರು ನೋಡುತ್ತಿರುವುದು ಸುಳ್ಳಲ್ಲ. ಆದರೆ, ಇಲ್ಲಿ ಸ್ಟಾರ್‌ ಸಿನಿಮಾಗಳು ಒಂದನ್ನು ಗಮನಿಸಬೇಕು. ಅದು ಸಿನಿಮಾದ ಕಥೆ. ತಮ್ಮ ಕಥೆ ಹೇಗಿದೆ ಮತ್ತು ಯಾವ ವರ್ಗದ ಜನ ಬರಬಹುದು ಎಂಬುದು. ಆ ನಿಟ್ಟಿನಲ್ಲಿ ಸಿನಿಮಾದ ಪ್ರಚಾರ ಇದ್ದರೆ ಒಳಿತು. ಅದು ಬಿಟ್ಟು ಸಿನಿಮಾಕ್ಕೆ ಜನ ಬರಲಿಲ್ಲ ಎಂದು ಕೊರಗಿದರೆ ಅದಕ್ಕೆ ಅರ್ಥವಿರಲ್ಲ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.