ಮಂಗಳೂರು: ಬ್ರಹ್ಮಕಲಶಕ್ಕೆ ಮನೆಯಲ್ಲೇ ಬೆಳೆದ ಸಾವಯವ ತರಕಾರಿ!


Team Udayavani, Jul 5, 2024, 2:31 PM IST

ಮಂಗಳೂರು: ಬ್ರಹ್ಮಕಲಶಕ್ಕೆ ಮನೆಯಲ್ಲೇ ಬೆಳೆದ ಸಾವಯವ ತರಕಾರಿ!

ಮಹಾನಗರ: ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅಗತ್ಯವಿರುವ ತರಕಾರಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಭಕ್ತರು ಮನೆ ಯಲ್ಲೇ ಸಾವಯವ ಪದ್ಧತಿಯಲ್ಲಿ ಬೆಳೆದು ಕಾಣಿಕೆ ನೀಡುವ ವಿನೂತನ ಪರಿಕಲ್ಪನೆಗೆ ಇದೀಗ ಸಿದ್ಧತೆ ನಡೆಯುತ್ತಿದೆ.

ಮಂಗಳೂರು ಹೊರವಲಯದ ಮಂಚಿ ಸಮೀಪದ ಮೋಂತಿ ಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆ ಊರಿನ ಹಲವಾರು ಮನೆಯಲ್ಲಿ ವಿವಿಧ ತರಕಾರಿ ಬೇಸಾಯ ಮಾಡಿ ಬ್ರಹ್ಮಕಲಶದ ಅಡುಗೆಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗಿದೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಈ ಯೋಜನೆ ಕಾರ್ಯಗತಗೊಳ್ಳಲಿದೆ.

ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರು ತಮ್ಮ ಮನೆಯಲ್ಲಿ ಬೀಜಾಂಕುರ ಮಾಡಿದ 20 ಸಾವಿರದಷ್ಟು ಸಾವಯವ ತರಕಾರಿ ಗಿಡಗಳನ್ನು ದೇವಾಲಯಕ್ಕೆ ನೀಡುತ್ತಾರೆ. ಅಲ್ಲಿಂದ ಸ್ಥಳೀಯ ರೈತರು-ಭಕ್ತರು ನಿಗದಿತ ಗಿಡಗಳನ್ನು ಪಡೆದು ತಮ್ಮ ಮನೆಯಲ್ಲಿಯೇ ಆ ಗಿಡ ನೆಟ್ಟು ತರಕಾರಿ ಬೆಳೆಯಬೇಕಾಗುತ್ತದೆ. ಹೀಗೆ ಬೆಳೆದ ತರಕಾರಿಯನ್ನು ದೇಗುಲದ
ಬ್ರಹ್ಮಕಲಶೋತ್ಸವಕ್ಕೆ ಬಳಸಲಾಗುತ್ತದೆ.

ಆಗಸ್ಟ್‌ ಕೊನೆಗೆ ಬೀಜಾಂಕುರ
ದೇವಸ್ಥಾನದ ಬ್ರಹ್ಮಕಲಶೋತ್ಸವವು 2025ರ ಜ. 6ರಿಂದ 13ರ ವರೆಗೆ ನಡೆಯಲಿದೆ. ಇದಕ್ಕಾಗಿ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಬೀಜಾಂಕುರ ಕಾರ್ಯಕ್ರಮ ಆಗಸ್ಟ್‌ ಕೊನೆ ವಾರದಲ್ಲಿ ನಡೆಯಲಿದೆ. ಗಿಡ ಬೆಳೆದು ನಾಟಿಗೆ 20 ದಿನ ಬೇಕಾಗುತ್ತದೆ. ಸೆಪ್ಟಂಬರ್‌ ಕೊನೆಯ ವಾರದೊಳಗೆ ಗಿಡಗಳ ವಿತರಣೆ ನಡೆಯಲಿದೆ. ವಿವಿಧ ತರಕಾರಿ ಬೇಸಾಯದ ಒಟ್ಟು ಅವಧಿ 90 ದಿನ.

ಯಾವುದೆಲ್ಲ ತರಕಾರಿ?
ಟೊಮೇಟೊ, ಬದನೆ, ಚೀನಿಕಾಯಿ, ಸೌತೆಕಾಯಿ, ಮುಳ್ಳು ಸೌತೆ, ಕುಂಬಳ ಕಾಯಿ, ಕಾಯಿ ಮೆಣಸು ಬೆಳೆಯಲಾಗುತ್ತದೆ. 250ಕ್ಕೂ ಅಧಿಕ ಮನೆಗಳನ್ನು ನಿಗದಿ ಮಾಡಲಾಗುತ್ತದೆ.

ಸಾವಯವ ಕೃಷಿಕ ಗ್ರಾಹಕ ಬಳಗ ಸದಸ್ಯರು 20 ಸಾವಿರ ವಿವಿಧ ತರಕಾರಿ ಗಿಡಗಳನ್ನು ಸಿದ್ಧಮಾಡಿ ಕೊಡುವ ನಿಟ್ಟಿನಲ್ಲಿ ತಯಾರಿ ಆಗುತ್ತಿದೆ. ವಿವಿಧ ತರಕಾರಿ ಬೀಜ ಮತ್ತು ಪ್ರೋ ಟ್ರೇ, ಕೊಕ್ಕೊಪೀಟ್‌ಗಳನ್ನು ಬಳಗ ಸದಸ್ಯರಿಗೆ ವಿತರಿಸಲಿದೆ. ಒಪ್ಪಿಗೆ ಕೊಟ್ಟ ಸದಸ್ಯರ ಮನೆಯಲ್ಲಿ ಬೀಜಾಂಕುರ ಕಾರ್ಯಕ್ರಮ ನಡೆಯಲಿದೆ. ಬೀಜಾಂಕುರ ಆಗಸ್ಟ್‌ ಕೊನೆಯ ವಾರ ಅಥವಾ ಸೆಪ್ಟಂಬರ್‌ ಮೊದಲ ವಾರ ನಡೆಸಲಾಗುತ್ತದೆ. 20 ದಿನದ ಬಳಿಕ ಗಿಡ ಗಳನ್ನು ದೇವಾಲಯಕ್ಕೆ ಹಸ್ತಾಂತರಿಸುತ್ತೇವೆ. *ರತ್ನಾಕರ ಕುಳಾಯಿ,
ಕಾರ್ಯದರ್ಶಿ, ಸಾವಯವ ಕೃಷಿಕ ಗ್ರಾಹಕ ಬಳಗ

ನಮ್ಮ ವ್ಯಾಪ್ತಿಯ ರೈತರು, ಭಕ್ತರಿಗೆ ಮುಂಚಿತವಾಗಿಯೇ ತರಕಾರಿ ಗಿಡವನ್ನು ನೀಡಿ ಸಾವಯವ ರೀತಿಯಲ್ಲಿಯೇ ಬೆಳೆಸಿ ಬ್ರಹ್ಮಕಲಶ ಸಂದ ರ್ಭದಲ್ಲಿ ಅನ್ನಪ್ರಸಾದ ಕಾರ್ಯಕ್ರಮಕ್ಕೆ ಸಮರ್ಪಿಸುವ ಹೊಸ ಸಂಕಲ್ಪ ಇರಿಸಲಾಗಿದೆ. ದೇವಾಲಯ ಪರಿಸರದಲ್ಲಿ ಸಾವಯವ ಕೃಷಿ ಜಾಗೃತಿ, ಧಾರ್ಮಿಕ ಒಗ್ಗಟ್ಟು ಬೆಳೆಸುವುದು ಇದರ ಉದ್ದೇಶ.
*ಎಸ್‌.ಆರ್‌. ಸತೀಶ್ಚಂದ್ರ, ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಮೋಂತಿಮಾರು

*ದಿನೇಶ್‌ ಇರಾ

ಟಾಪ್ ನ್ಯೂಸ್

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.