Dandeli: ತಂಡದಿಂದ ಮನೆಗೆ ನುಗ್ಗಿ ಮೂವರ ಮೇಲೆ ಮರಣಾಂತಿಕ ಹಲ್ಲೆ
Team Udayavani, Jul 6, 2024, 7:06 PM IST
ದಾಂಡೇಲಿ : ತಂಡವೊಂದು ಮನೆಯ ಒಳಗಡೆ ನುಗ್ಗಿ ಮೂವರ ಮೇಲೆ ಮರಣಾಂತಿಕ ನಡೆಸಿದ ಘಟನೆಯ ಕುರಿತಂತೆ ಶನಿವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಂಡೇಲಿಯ ಗಾಂಧಿನಗರದ ನಿವಾಸಿಗಳಾದ ಮಾರುತಿ ಶಿನ್ನೂರು ಆತನ ತಂದೆ ಸಂಗಪ್ಪ ಈರಪ್ಪ ಶಿನ್ನೂರು, ತಾಯಿ ಮಹದೇವಿ ಸಂಗಪ್ಪ ಶಿನ್ನೂರು ಎಂಬವರೇ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡವರಾಗಿದ್ದಾರೆ.
ಶುಕ್ರವಾರ ರಾತ್ರಿ ಗಾಂಧಿನಗರದ ಮನೆಯಲ್ಲಿ ಮಾರುತಿ ಶಿನ್ನೂರು ಒಬ್ಬನೇ ಇದ್ದ ಸಂದರ್ಭದಲ್ಲಿ ಸ್ಥಳೀಯರಾದ ಚಂದ್ರನ್ ಮಲ್ನಾಡ್, ಸಂತೋಷ್ ಚಂದ್ರನ್ ಮಲ್ನಾಡ್ ಸೇರಿದಂತೆ ಮೂರ್ನಾಲ್ಕು ಜನರ ತಂಡವೊಂದು ಏಕಾಏಕಿ ಮಾರುತಿ ಶಿನ್ನೂರು ಮೇಲೆ ಹಲ್ಲೆ ನಡೆಸಿದೆ. ಮನೆಯಿಂದ ಎಳೆತಂದು ಹತ್ತಿರದಲ್ಲಿರುವ ಮೈದಾನದಲ್ಲಿ ಮತ್ತೆ ಈ ತಂಡ ಹೊಡೆದಿದೆ. ಅಷ್ಟೊತ್ತಿಗಾಗುವಾಗಲೇ ಹೊರಗಡೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಮಾರುತಿ ಶಿನ್ನೂರು ಅವರ ತಂದೆ ಮತ್ತು ತಾಯಿ ತತ್ ಕ್ಷಣವೇ ಅಲ್ಲಿಂದ ಕರೆದುಕೊಂಡು ಬಂದು ಮನೆಯ ಒಳಗಡೆ ಕಳುಹಿಸಿ ಬಾಗಿಲು ಮುಚ್ಚಿ ಚಿಲಕ ಹಾಕಿದ್ದಾರೆ. ಆದರೆ ಸಂತೋಷ್ ಮತ್ತೆ ಚಂದ್ರನ್ ಅವರ ತಂಡ ಬಾಗಿಲ ಚಿಲಕ ತೆಗೆದು ಮತ್ತೆ ಮಾರುತಿ ಶಿನ್ನೂರು ಮೇಲೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಸಂಗಪ್ಪ ಈರಪ್ಪ ಶಿನ್ನೂರು ಮತ್ತು ಮಹಾದೇವಿ ಸಂಗಪ್ಪ ಶಿನ್ನೂರು ಇವರ ಮೇಲೆ ಹಲ್ಲೆ ನಡೆಸಿದೆ. ಗಂಭೀರ ಗಾಯಗೊಂಡಿದ್ದ ಮೂವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಮೂವರಿಗೂ ತಲೆಗೆ ಹಾಗೂ ದೇಹದ ಇನ್ನಿತರ ಭಾಗಗಳಿಗೆ ಗಾಯವಾಗಿದೆ.
ಈ ಘಟನೆಯ ದೃಶ್ಯಾವಳಿ, ಸಿಸಿ ಕೆಮರದಲ್ಲಿ ದಾಖಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಮಾರುತಿ ಶಿನ್ನೂರು ಅವರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರನ್ನು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.