Puri ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭ; ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು
ಐದು ದಶಕಗಳ ಬಳಿಕ ಎರಡು ದಿನಗಳ ಉತ್ಸವ
Team Udayavani, Jul 7, 2024, 7:17 PM IST
ಪುರಿ(ಒಡಿಶಾ) : ವಾರ್ಷಿಕ ಭಗವಾನ್ ಜಗನ್ನಾಥ ರಥಯಾತ್ರೆಯು ಒಡಿಶಾದ ಕಡಲತೀರದ ಯಾತ್ರಿಕ ಪಟ್ಟಣವಾದ ಪುರಿಯಲ್ಲಿ ಭಾನುವಾರ ಪ್ರಾರಂಭವಾಗಿದೆ. 1971ರ ನಂತರ ಮೊದಲ ಬಾರಿಗೆ ಈ ವರ್ಷ ಎರಡು ದಿನಗಳ ಉತ್ಸವ ನಡೆಯುತ್ತಿದೆ. ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ರಥಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸಂಜೆ 5.30ಕ್ಕೆ ರಥಗಳ ಮೆರವಣಿಗೆ ಆರಂಭವಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ರಘುಬರ್ ದಾಸ್, ಒಡಿಶಾ ಸಿಎಂ ಮೋಹನ್ ಮಾಝೀ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಥವನ್ನೆಳೆದು ಯಾತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ರಥಗಳಿಗೆ ರಾಷ್ಟ್ರಪತಿ ಮುರ್ಮು ಅವ ರು ಪ್ರದಕ್ಷಿಣೆ ಹಾಕಿ, ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ಮೋಹನ್ ಮಾಝಿ ನೇತೃತ್ವದ ಒಡಿಶಾ ಸರಕಾರ ದ್ರೌಪದಿ ಮುರ್ಮು ಅವರ ಭೇಟಿಗೆ ವಿಶೇಷ ವ್ಯವಸ್ಥೆ ಮಾಡಿತ್ತು.
ಸಾಮಾನ್ಯವಾಗಿ ಒಂದೇ ದಿನ ಆಯೋಜಿಸಲಾಗುವ ರಥಯಾತ್ರೆ ಈ ವರ್ಷ ಈ ಬಾರಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಲೆಕ್ಕಾಚಾರದ ಅನ್ವಯ 2 ದಿನದ ಯಾತ್ರೆ ನಡೆಯುತ್ತಿದೆ. ಇದಕ್ಕೂ ಮುನ್ನ 53 ವರ್ಷಗಳ ಹಿಂದೆ ಅಂದರೆ 1971ರಲ್ಲಿ ಇದೇ ರೀತಿ 2 ದಿನಗಳ ಕಾಲ ರಥಯಾತ್ರೆ ನಡೆದಿತ್ತು.ಸಂಪ್ರದಾಯಕ್ಕೆ ಹೊರತಾಗಿ, ಹಬ್ಬಕ್ಕೆ ಸಂಬಂಧಿಸಿದ ಕೆಲವು ಆಚರಣೆಗಳು ಒಂದೇ ದಿನದಲ್ಲಿ ನಡೆಯಲಿವೆ.
ರಥಯಾತ್ರೆಯ ಆಕರ್ಷಣೆ ಭಗವಾನ್ ವಿಷ್ಣುವಿನ ಅವತಾರ ಜಗನ್ನಾಥನಿಗೆ(ಕೃಷ್ಣ) ಸಮರ್ಪಿತವಾದ ಮಹತ್ವದ ಹಿಂದೂ ಹಬ್ಬವಾಗಿದೆ. ಉತ್ಸವದ ವೇಳೆ ಜಗನ್ನಾಥನ ವಿಗ್ರಹಗಳನ್ನು ಅವನ ಒಡಹುಟ್ಟಿದ ಭಗವಾನ್ ಬಲಭದ್ರ ಮತ್ತು ಸುಭದ್ರ ದೇವಿಯ ಜತೆಗೆ ಭವ್ಯವಾದ ರಥಗಳ ಮೇಲೆ ಇರಿಸಲಾಗುತ್ತದೆ. ಲಕ್ಷಾಂತರ ಭಕ್ತರು ಬೀದಿಗಳಲ್ಲಿ ರಥಗಳನ್ನುಎಳೆಯುತ್ತಾರೆ. ಈ ಮೆರವಣಿಗೆಯು ಜಗನ್ನಾಥ ದೇವಾಲಯದಿಂದ ಪ್ರಾರಂಭವಾಗಿ ಸುಮಾರು 3 ಕಿಲೋಮೀಟರ್ ದೂರದ ಗುಂಡಿಚಾ ದೇವಾಲಯದಲ್ಲಿ ಕೊನೆಗೊಳ್ಳುತ್ತದೆ.
ಈ ಆಚರಣೆಗಳಲ್ಲಿ ‘ನಬಜೌಬನ್ ದರ್ಶನ’ ಮತ್ತು ‘ನೇತ್ರ ಉತ್ಸವ’ ಸೇರಿವೆ, ಇವುಗಳನ್ನು ಸಾಮಾನ್ಯವಾಗಿ ರಥಯಾತ್ರೆಯ ಮುಂಚೆ ನಡೆಸಲಾಗುತ್ತದೆ.
ಭದ್ರತಾ ವ್ಯವಸ್ಥೆಗಳು
ಉತ್ಸವವನ್ನು ಸುಗಮವಾಗಿ ಮತ್ತು ಸಮಯೋಚಿತವಾಗಿ ನಡೆಸಲು ಒಡಿಶಾ ಸರಕಾರ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.
“ಎಲ್ಲಾ ಧಾರ್ಮಿಕ ಕ್ರಿಯೆಗಳು ಸುಗಮವಾಗಿ ನಡೆಯುತ್ತಿವೆ, ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ, ಎಲ್ಲಾ ಇತರ ಧಾರ್ಮಿಕ ಕ್ರಿಯೆಗಳನ್ನು ಸಹ ಕ್ರಮ ಪ್ರಕಾರ ಪ್ರಕಾರ ನಡೆಸಲಾಗುತ್ತಿದೆ ” ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಸುದ್ದಿ ಸಂಸ್ಥೆ PTI ಗೆ ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಜನಸಂದಣಿಯನ್ನು ನಿರ್ವಹಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳ ಭದ್ರತಾ ಸಿಬಂದಿಗಳನ್ನೊಳಗೊಂಡ 180 ಪ್ಲಟೂನ್ಗಳನ್ನು (5400 ಮಂದಿ) ನಿಯೋಜಿಸಲಾಗಿದೆ ಎಂದು ಪುರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕ್ ಮಿಶ್ರಾ ಹೇಳಿದ್ದಾರೆ.
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ವಿಐಪಿ ವಲಯ ನಿರ್ಮಾಣ ಮಾಡಿ ಒಡಿಶಾ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ಇತರ ಗಣ್ಯರಿಗೆ ಬಫರ್ ವಲಯವನ್ನು ಯೋಜಿಸಲಾಗಿದೆ.
10ರಿಂದ 15 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷಿಸಲಾಗಿದ್ದು, ಅಗ್ನಿಶಾಮಕ ದಳದಿಂದಲೂ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ವಿವಿಧೆಡೆ ಹಾಗೂ ಸಮುದ್ರ ತೀರದಲ್ಲಿ ಒಟ್ಟು 46 ಆಧುನಿಕ ಅಗ್ನಿಶಾಮಕ ಟೆಂಡರ್ಗಳನ್ನು ನಿಯೋಜಿಸಲಾಗಿದೆ.
ಕಾಲ್ತುಳಿತ ಸ್ಥಿತಿಯಿಂದ ವ್ಯಕ್ತಿ ಗಂಭೀರ
ಯಾತ್ರೆ ಶುರುವಾದ ಕೆಲವೇ ಕ್ಷಣಗಳಲ್ಲಿ ಪುರಿಯಲ್ಲಿ ಕಾಲ್ತುಳಿತದ ಪರಿಸ್ಥಿತಿ ಎದುರಾಗಿದೆ. ರಥವನ್ನೆಳೆಯಲು ಭಕ್ತರು ಧಾವಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲ ಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್
Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.