Wimbledon: ಕ್ವಾರ್ಟರ್ ಫೈನಲ್ಗೆ ಪೌಲಿನಿ, ಅಲ್ಕರಾಜ್
Team Udayavani, Jul 8, 2024, 12:41 AM IST
ಲಂಡನ್: ಇಟಲಿಯ ಜಾಸ್ಮಿನ್ ಪೌಲಿನಿ ಗೆಲುವಿನ ಓಟ ಮುಂದುವರಿಸಿ 2024ರ ವಿಂಬಲ್ಡನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರವಿವಾರದ ಮುಖಾಮುಖಿಯಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ 3ನೇ ಸೆಟ್ ವೇಳೆ ಗಾಯಳಾಗಿ ಹಿಂದೆ ಸರಿದ ಕಾರಣ ಪೌಲಿನಿಗೆ ಅದೃಷ್ಟ ಒಲಿಯಿತು. ಆಗ ಸ್ಪರ್ಧೆ 6-3, 6-7 (6-8), 5-5 ಸಮಬಲದಲ್ಲಿ ನೆಲೆಸಿತ್ತು. ಪೌಲಿನಿ ಮೊದಲ ಸೆಟ್, ಕೀಸ್ ದ್ವಿತೀಯ ಸೆಟ್ ಜಯಿಸಿದ್ದರು.
ಅಲ್ಕರಾಜ್ ಗೆಲುವು
ಕಾರ್ಲೋಸ್ ಅಲ್ಕರಾಜ್ ಫ್ರಾನ್ಸ್ನ ಯುಗೊ ಹಂಬರ್ಟ್ ಅವರನ್ನು 6-3, 6-4, 1-6, 7-5 ಅಂತರ ದಿಂದ ಮಣಿಸಿ ಪುರುಷರ ವಿಭಾಗದಿಂದ ಮೊದಲಿಗರಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ನಂ.1 ಸ್ವಿಯಾಟೆಕ್ಗೆ ಸೋಲು
ವಿಶ್ವದ ನಂ.1 ಆಟಗಾರ್ತಿ, ಪೋಲೆಂಡ್ನ ಇಗಾ ಸ್ವಿಯಾಟೆಕ್ ಅವರ ವಿಂಬಲ್ಡನ್ ಆಟ 3ನೇ ಸುತ್ತಿನಲ್ಲಿ ಕೊನೆಗೊಂಡಿದೆ. 35ನೇ ರ್ಯಾಂಕ್ನ ಕಜಾಕ್ ಆಟಗಾರ್ತಿ ಯುಲಿಯಾ ಪುಟಿನ್ಸೇವಾ ವಿರುದ್ಧ ಮೊದಲ ಸೆಟ್ ಜಯಿಸಿದ ಹೊರತಾಗಿಯೂ ಸ್ವಿಯಾಟೆಕ್ ಮೇಲುಗೈ ಸಾಧಿಸಲು ವಿಫಲರಾದರು. ಪುಟಿನ್ಸೇವಾ ಗೆಲುವಿನ ಅಂತರ 3-6, 6-1, 6-2.
ವನಿತಾ ಸಿಂಗಲ್ಸ್ನ ಮತ್ತೂಂದು ಪಂದ್ಯದಲ್ಲಿ ಚೀನದ ಕ್ಸಿನ್ಯೂ ವಾಂಗ್ ಆತಿಥೇಯ ಬ್ರಿಟನ್ನ ಹ್ಯಾರೀಟ್ ಡಾರ್ಟ್ ಅವರನ್ನು ಭಾರೀ ಹೋರಾಟದ ಬಳಿಕ 2-6, 7-5, 6-3ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಇವರ ಪ್ರಿ ಕ್ವಾರ್ಟರ್ ಫೈನಲ್ ಎದುರಾಳಿ ಉಕ್ರೇನ್ನ ಎಲೆನಾ ಸ್ವಿಟೋಲಿನಾ. ಇವರು ಓನ್ಸ್ ಜೆಬ್ಯೂರ್ ವಿರುದ್ಧ 6-1, 7-6 (7-4) ಅಂತರದ ಜಯ ಸಾಧಿಸಿದರು.
ಕಜಾಕ್ನ ಎಲೆನಾ ರಿಬಾಕಿನಾ ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನ್ ವೋಜ್ನಿಯಾಕಿ ಅವರನ್ನು 6-0, 6-1 ಅಂತರದಿಂದ ಸುಲಭದಲ್ಲಿ ಸೋಲಿಸಿದರು.
ಜೊಕೋವಿಕ್ ಜಯ
ಪುರುಷರ ಸಿಂಗಲ್ಸ್ನಲ್ಲಿ ನೊವಾಕ್ ಜೊಕೋವಿಕ್ 3ನೇ ಸುತ್ತು ದಾಟಿದ್ದಾರೆ. ಅವರು ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡ ಬಳಿಕ ನೈಜ ಸಾಮರ್ಥ್ಯ ಪ್ರದರ್ಶಿಸಿದರು. ಗೆಲುವಿನ ಅಂತರ 4-6, 6-3, 6-4, 7-6 (7-3). ಸೋಮವಾರದ ಮುಖಾ ಮುಖೀ ಯಲ್ಲಿ ಡೆನ್ಮಾರ್ಕ್ನ ಹೋಲ್ಜರ್ ರುನೆ ವಿರುದ್ಧ ಆಡಲಿದ್ದಾರೆ. ರುನೆ ಫ್ರಾನ್ಸ್ನ ಕ್ವಿಂಟಿನ್ ಹ್ಯಾಲಿಸ್ ವಿರುದ್ಧ 5 ಸೆಟ್ಗಳ ಜಿದ್ದಾಜಿದ್ದಿ ಹೋರಾಟದಲ್ಲಿ ಮೇಲುಗೈ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
ISSF Junior World Championship: ಕಿರಿಯರ ಶೂಟಿಂಗ್; ಭಾರತಕ್ಕೆ ಸಮಗ್ರ ಪ್ರಶಸ್ತಿ
ಗ್ವಾಲಿಯರ್ ಮಸೀದಿಗೆ ಭೇಟಿ ನೀಡದೆ ಹೋಟೆಲ್ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.