Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್ ಖರೀದಿಸಿ
ಮೊದಲಾರ್ಧ ಸಿನೆಮಾ ಉಚಿತವಾಗಿ ನೋಡಿ; ಇಂಟರ್ವಲ್ ಅನಂತರ ಟಿಕೆಟ್ ಪಡೆಯಿರಿ
Team Udayavani, Jul 8, 2024, 1:29 AM IST
ಬೆಂಗಳೂರು: ಬಸವಳಿದಿರುವ ಕನ್ನಡ ಚಿತ್ರರಂಗಕ್ಕೆ ಹೊಸ ಟಾನಿಕ್ ನೀಡುವ ನಿಟ್ಟಿನಲ್ಲಿ ಚಿತ್ರತಂಡವೊಂದು ಜಗತ್ತಿನಲ್ಲೇ ಮೊದಲು ಎನ್ನಬಹುದಾದ ಪ್ರಯೋಗಕ್ಕೆ ಮುಂದಾಗಿದೆ.
ಹೊಸಬರ ತಂಡ ರೂಪಿಸಿರುವ ನಾಕ್ಔಟ್ ಚಿತ್ರ ಜು. 19ರಂದು ಬಿಡುಗಡೆ ಕಾಣಲಿದ್ದು, ಇದನ್ನು ನೋಡಬೇಕಾದರೆ ಮೊದಲಿಗೇ ಟಿಕೆಟ್ ಖರೀದಿಸಬೇಕಿಲ್ಲ. ಮೊದಲಾರ್ಧವನ್ನು ಉಚಿತವಾಗಿ ನೋಡಬಹುದು. ಅನಂತರ ಸಿನೆಮಾ ಇಷ್ಟ ಆದರೆ ಮಾತ್ರ ಇಂಟರ್ವಲ್ನಲ್ಲಿ ಟಿಕೆಟ್ ಖರೀದಿಸಬಹುದು.
ಸೆಕೆಂಡ್ ಹಾಫ್ನಲ್ಲಿ ಚತ್ರಮಂದಿರಕ್ಕೆ ಮರುಪ್ರವೇಶಿಸಬೇಕಾದರೆ ಟಿಕೆಟ್ ತೋರಿಸಬೇಕು. ಅಂಬರೀಷ್ ಚಿತ್ರವನ್ನು ನಿರ್ದೇಶಿಸಿದರೆ, ಅಜಯ್ ಪೃಥ್ವಿ ಹಾಗೂ ರಚನಾ ಇಂದರ್ ನಾಯಕ-ನಾಯಕಿಯಾಗಿದ್ದಾರೆ.
ಈ ಕಾನ್ಸೆಪ್ಟ್ ಹಿಂದಿನ ಉದ್ದೇಶ ಸಿನಿಮಾದ ಗುಣಮಟ್ಟ ಖಾತ್ರಿಪಡಿಸುವುದು. ವಾರ ವಾರ ತೆರೆ ಕಾಣುವ ಬಹುತೇಕ ಸಿನೆಮಾಗಳು ತಮ್ಮ ಗುಣಮಟ್ಟದ ಕೊರತೆಯಿಂದ ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ. ಇದೇ ಕಾರಣದಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ “ನಾಟ್ ಔಟ್’ ತಂಡ ಹೀಗೊಂದು ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದೆ. ಇದು ಯಶಸ್ಸು ಕಾಣುವ ವಿಶ್ವಾಸ ತಂಡಕ್ಕಿದೆ.
ಸಿನೆಮಾದ ನಿರ್ಮಾಣ ಸುಲಭ ಆಗಿರುವ ಈ ಸಮಯದಲ್ಲಿ ಚಿತ್ರತಂಡಗಳಿಗೆ ಸವಾಲಾಗಿರುವುದು ಸಿನೆಮಾದ ಪ್ರಮೋಶನ್. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಪ್ರತಿ ತಂಡಗಳು ಹೊಸ ಹೊಸ ಐಡಿಯಾ ಮಾಡುತ್ತಿವೆ. ತೆರೆಕಂಡ ಸಿನೆಮಾಗಳು ಕೂಡಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣದೇ ಇರುವ ಈ ಹೊತ್ತಿನಲ್ಲಿ ಏನಾದರೂ ಒಂದು ಆಕರ್ಷಕವಾದ ಯೋಜನೆ ಮಾಡಲೇಬೇಕು ಎಂದು ಸಿನಿಮಾ ತಂಡ ಹೇಳುತ್ತದೆ.
“ಸಿನೆಮಾದ ಗುಣಮಟ್ಟವನ್ನು ಮೊದಲರ್ಧ ಸಿನೆಮಾದಲ್ಲಿ ನಿರ್ಧರಿಸುವ ಪ್ರೇಕ್ಷಕರು ಉಚಿತವಾಗಿ ನೋಡಬಹುದು. ಅನಂತರ ಸೆಕೆಂಡ್ ಆಫ್ ಸಿನೆಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಇರುತ್ತದೆ.”
– ಅಂಬರೀಷ್ ಎಂ, ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.