![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jul 8, 2024, 11:54 PM IST
ರಾಂಚಿ: ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಿದ್ದಾರೆ. ಅವರಿಗೆ 45 ಮತಗಳು ಪ್ರಾಪ್ತವಾಗಿವೆ. ಈ ವೇಳೆ ವಿಪಕ್ಷ ಬಿಜೆಪಿ ಮತ್ತು ಎಐಜೆಎಸ್ಯು ಪಕ್ಷಗಳ ಶಾಸಕರು ಸಭಾತ್ಯಾಗ ಮಾಡಿದ್ದಾರೆ. ಬೆನ್ನಲ್ಲೇ ಮಾಜಿ ಸಿಎಂ ಚಂಪೈ ಸೊರೇನ್ ಸೇರಿ 11 ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಂಚನೆ ಪ್ರಕರಣದಲ್ಲಿ 5 ತಿಂಗಳ ಕಾಲ ಜೈಲಲ್ಲಿದ್ದ ಸೊರೇನ್ ಜಾಮೀನು ಪಡೆದು ಬಂದ ಬಳಿಕ ಜು.4ರಂದು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದರು.
ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಇ.ಡಿ. ಅರ್ಜಿ
ಭೂ ಅಕ್ರಮ ಪ್ರಕರಣದಲ್ಲಿ ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್ರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಇ.ಡಿ. ಸೋಮವಾರ ಸುಪ್ರೀಂಗೆ ಅರ್ಜಿ ಸಲ್ಲಿಸಿದೆ. ಸೊರೇನ್ರಿಗೆ ಜಾಮೀನು ನೀಡಿರುವ ಝಾರ್ಖಂಡ್ ಹೈಕೋರ್ಟ್ ಆದೇ ಶವು “ಕಾನೂನು ಬಾಹಿರ’ ಎಂದೂ ಇ.ಡಿ. ಆರೋಪಿಸಿದೆ ಜೆಎಂಎಂ ಮುಖ್ಯಸ್ಥನ ವಿರುದ್ಧ ಮೇಲ್ನೋಟಕ್ಕೆ ಯಾವ ಕೇಸೂ ಕಾಣಿಸುತ್ತಿಲ್ಲ ಎಂಬ ಹೈಕೋರ್ಟ್ ಹೇಳಿಕೆ “ತಪ್ಪು’. ಹೀಗಾಗಿ ಅವರಿಗೆ ನೀಡಲಾದ ಜಾಮೀನನ್ನು ರದ್ದು ಮಾಡಬೇಕು ಎಂದು ಇ.ಡಿ. ಮನವಿ ಮಾಡಿದೆ. ಭೂ ಹಗರಣ ಸಂಬಂಧ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಸೊರೇನ್ಗೆ ಜಾಮೀನು ನೀಡಲಾಗಿತ್ತು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.