Childhood Days: ಸದಾ ಕಾಡುವ ಬಾಲ್ಯದ ದಿನಗಳು ಮರಳಿ ಬರುವುದುಂಟೇ?


Team Udayavani, Jul 9, 2024, 7:40 PM IST

6-uv-fusion

ಬಾಲ್ಯ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?  ಬಾಲ್ಯದ ದಿನಗಳನ್ನು ನೆನೆಸಿಕೊಂಡರೆ  ಥಟ್ಟನೆ ಕಣ್ಣ ಮುಂದೆ ಬಂದುಬಿಡುತ್ತದೆ. ಬಾಲ್ಯದ ದಿನಗಳು ಎಷ್ಟು  ಸುಂದರವಾಗಿತ್ತು. ಆ ದಿನಗಳಲ್ಲಿ ನಾವು ನಾವಾಗಿಯೇ ಇದ್ದ ಕ್ಷಣಗಳಿವು… ಬಾಲ್ಯವು ಸದಾ ಉಲ್ಲಾಸದಿಂದ ಕೂಡಿತ್ತು. ಅಲ್ಲಿ ಯಾವಾಗಲೂ ಪ್ರೀತಿ ಎಂಬ ಭಾವನೆಯು ನೆಲೆಸಿತ್ತು. ಅಜ್ಜ,ಅಜ್ಜಿ, ಅಪ್ಪ, ಅಮ್ಮ, ಮುಂತಾದವರು  ಕೊಡುತ್ತಿದ್ದ ಪ್ರೀತಿಗೆ  ಬೆಲೆ ಕಟ್ಟಲು ಸಾಧ್ಯವಿಲ್ಲ .

ಶಾಲೆಗೆ ಹೋಗುವ ದಾರಿಯಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಅಂಗಡಿಗಳಿಗೆ ಓಡೋಡಿ ಹೋಗಿ  ರಾಶಿ ಚಾಕಲೇಟುಗಳನ್ನು  ಬ್ಯಾಗಿಗೆ ತುಂಬಿಸಿ  ದಾರಿಯಲ್ಲಿ ಹೋಗುವಾಗ   ನಮ್ಮ ಗೆಳೆಯರು ಎಲ್ಲಿ ಚಾಕಲೇಟುಗಳನ್ನು  ಕೇಳುತ್ತಾರೋ..  ಎಂಬ ಭಯದಲ್ಲಿ  ಅರ್ಧ ಚಾಕಲೇಟುಗಳನ್ನು ದಾರಿಯಲ್ಲಿ ಹೋಗುತ್ತಾ ಇದ್ದಂತೆ  ಖಾಲಿ ಮಾಡಿ ಹೋಗುತ್ತಿದ್ದೆವು.

ಅನಂತರ ಶಾಲೆಗೆ ತಲುಪಿದ ಮೇಲೆ ತರಗತಿ ಕೊನೆಗೆ ಹೋಗಿ ಬ್ಯಾಗ್‌ ಇಟ್ಟು ಗೆಳೆಯರ ಜತೆ ಸಮಯ ಕಳೆಯುತ್ತಿದ್ದೆವು. ಒಂದು ಲಾಂಗ್‌ ಬೆಲ್‌ ಆದ ಅನಂತರ  ತರಗತಿಗಳು ಪ್ರಾರಂಭವಾಗುತ್ತಿದ್ದವು. ತರಗತಿಗಳು ಪ್ರಾರ್ಥನೆಯ ಮೂಲಕ ಪ್ರಾರಂಭವಾಗುತ್ತಿದ್ದವು. ಅನಂತರ  ಕನ್ನಡ ಮೇಷ್ಟ್ರು  ಪ್ರಶ್ನೆಯನ್ನು ಕೇಳುತ್ತೇನೆ  ನೀವು ಹೇಳದಿದ್ದರೆ ನಾಗರ ಬೆತ್ತ ತರಿಸುತ್ತೇನೆ ಎಂದು ಹೇಳಿ ಪ್ರಶ್ನೆಯನ್ನು ಕೇಳಲು ಶುರು ಮಾಡಿದಾಗ ನನಗೆ ಎಲ್ಲಿ ಪ್ರಶ್ನೆ ಕೇಳುತ್ತಾರೆ ಎಂಬ ಭಯದಲ್ಲಿ ಅವರ ಮುಖವನ್ನು ನೋಡದೆ  ಹೆದರಿಕೆಯಿಂದ ಬೆಂಚಿನ ಕೆಳಗೆ  ತಲೆ ಬಗ್ಗಿಸಿ   ಕುಳಿತುಕೊಳ್ಳುತ್ತಿದ್ದೆವು. ಒಂದು ವೇಳೆ ಪ್ರಶ್ನೆ ಕೇಳದಿದ್ದಾಗ  ಹಬ್ಬ ನಾನು ಬದುಕಿದೆ ಎಂಬ  ಸಂತೋಷದ  ಭಾವನೆ ಕಾಡುತ್ತಿತ್ತು.

ಶಾಲೆ ಬಿಟ್ಟ ಅನಂತರ ಮನೆಗೆ ಹೋಗುವಾಗ  ಅಮ್ಮ ಇವತ್ತು ಕೋಳಿ ಸಾರ ಮಾಡಿರುತ್ತಾರೆ ಎಂದು ಬೇಗ-ಬೇಗ  ಓಡೋಡಿ ಹೋಗುತ್ತಿದ್ದೆವು. ಬ್ಯಾಗನ್ನು ಬಿಸಾಡಿ  ಕೈಕಾಲುಗಳನ್ನು ತೊಳೆದು ಅಮ್ಮ ಮಾಡಿದ ಬಿಸಿ ಬಿಸಿ  ಕೋಳಿಸಾರನ್ನು ಅನ್ನದೊಂದಿಗೆ ಸವಿಯುತ್ತಾ. ತಿನ್ನುತ್ತಿದ್ದ ಆ ಖುಷಿಯೇ ಬೇರೆ ಇತ್ತು.

ಶಾಲೆಗೆ ರಜೆ ಸಿಕ್ಕಿದ ಮೇಲೆ ಅಜ್ಜಿ ಮನೆಗೆ ಪ್ರಯಾಣ ಬೆಳೆಸುತ್ತಿದ್ದ ಆ ಕ್ಷಣಗಳು.  ಈಗಲೂ ಬಾಲ್ಯವನು ನೆನೆಸಿಕೊಂಡರೆ  ಮುಖದಲ್ಲಿ ನಗು ಮರುಕಳಿಸುತ್ತದೆ. ನಾವು ದೊಡ್ಡವರಾದಂತೆ  ಹೋದಂತೆಲ್ಲಾ ಜವಾಬ್ದಾರಿಗಳು ನಮ್ಮ ಬೆನ್ನು ಹತ್ತಿಬಿಡುತ್ತದೆ.

ಆ ಸಂದರ್ಭದಲ್ಲಿ ಬಾಲ್ಯದ ನೆನಪುಗಳು ಎಷ್ಟೋ. ಸುಖವಾಗಿತ್ತು ಎಂಬ  ಭಾವನೆ ಕಾಡುತ್ತದೆ.   ಬಾಲ್ಯಯದಲ್ಲಿ ಇದ್ದ ಖುಷಿಯೂ ಯೌವನಕ್ಕೆ  ಬಂದಾಗ ಮರೆಮಾಚಿ ಹೋಗುತ್ತದೆ. ಏನೇ ಆಗಲಿ ಬಾಲ್ಯದ ದಿನಗಳು ನಮ್ಮ ಜೀವನದಲ್ಲಿ ಕಳೆದ ಒಂದು ಒಳ್ಳೆಯ ಅದ್ಭುತವಾದ ಸುಂದರ ಕ್ಷಣಗಳು. ನಮ್ಮ ಬಾಲ್ಯದ ದಿನಗಳು ಈಗ ನಾವು ನೆನೆಯುತ್ತೇವೆ ಆದರೆ ಆದಿನಗಳನ್ನು ಈಗ ಮತ್ತೆ ಮರುಕಳಿಸಲು ಸಾಧ್ಯವಿಲ್ಲ. ಬಾಲ್ಯ ದಿನಗಳ ಆಟಿಕೆ, ಶೈಕ್ಷಣಿಕ ಪರಿಕರ ಸಂಗ್ರಹ ಮಾಡಿಟ್ಟು ಮತ್ತೆ ಬಾಲ್ಯ ಮೆಲುಕು ಹಾಕುವುದರಲ್ಲಿ ಒಂದು ವಿಧ ವಾದ ಖುಷಿ ಇದೆ ಎಂದು ಹೇಳಬಹುದು.

-ಮೌಲ್ಯ ಶೆಟ್ಟಿ

ಪುಂಜಾಲಕಟ್ಟೆ

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.