Davanagere: ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಪ್ರಕರಣ; ದಂಪತಿ ಸಾವು
Team Udayavani, Jul 10, 2024, 12:20 PM IST
ದಾವಣಗೆರೆ: ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ. ಸಿಲಿಂಡರ್ ಸ್ಪೋಟ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.
ಮಲ್ಲೇಶಪ್ಪ (64) ಹಾಗೂ ಲಲಿತಮ್ಮ (58) ದಂಪತಿ ಮೃತಪಟ್ಟವರು.
ಕೆಲ ದಿನಗಳ ಹಿಂದೆ ಎಸ್.ಒ.ಜಿ. ಕಾಲೋನಿಯ ಮಲ್ಲೇಶಪ್ಪ ಎಂಬವರ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿತ್ತು. ಕಳೆದ ವಾರ ಪಾರ್ವತಮ್ಮ ಎಂಬುವರು ಮೃತಪಟ್ಟಿದ್ದರು.
ಸಿಲಿಂಡರ್ ಸ್ಪೋಟದ ಅವಘಡದಲ್ಲಿ ಮನೆಯ ಯಜಮಾನ ಮಲ್ಲೇಶಪ್ಪ ಹಾಗೂ ಪತ್ನಿ ಲಲಿತಮ್ಮ, ಪಕ್ಕದ ಮನೆಯ ಪಾರ್ವತಮ್ಮ, ಇವರ ಪುತ್ರ ಪ್ರವೀಣ್ ಹಾಗೂ ಸೊಸೆ ಸೌಭಾಗ್ಯ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಜುಲೈ 3ರಂದು ಪಾರ್ವತಮ್ಮ ಮೃತಪಟ್ಟಿದ್ದರು.
ಸೌಭಾಗ್ಯಮ್ಮ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮನೆಯ ಯಜಮಾನಿ ಲಲಿತಮ್ಮ ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಇವರ ಪತಿ ಮಲ್ಲೇಶಪ್ಪ ಮಂಗಳವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ವಿದ್ಯಾನಗರ ಠಾಣೆಯ ಪಿಎಸ್ಐ ಪ್ರಭಾವತಿ ಸಿ ಶೇತ ಸನದಿ ಮಾಹಿತಿ ನೀಡಿದ್ದಾರೆ.
ಅಡುಗೆ ಅನಿಲ ಸೋರಿಕೆ ಆಗ್ತಿದೆ ಎಂದು ನೋಡಲು ಬಂದಿದ್ದ ಪಕ್ಕದ ಮನೆಯ ಪ್ರವೀಣ್ ಹಾಗೂ ಸೌಭಾಗ್ಯ ಚಿಕಿತ್ಸೆ ಮುಂದುವರೆದಿದೆ. ಇವರು ಸಿಲಿಂಡರ್ ಸ್ಪೋಟ ಆಗಿ ಗಾಯಳಾಗಿದ್ದರು. ಇನ್ನು ಪಾರ್ವತಮ್ಮ ಜು.3 ರಂದು ಕೊನೆಯುಸಿರೆಳೆದಿದ್ದರು. ಐವರಲ್ಲಿ ಒಟ್ಟು ಮೂರು ಜನ ಸಾವನಪ್ಪಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಲಿಂಡರ್ ಸ್ಪೋಟ ಹಿನ್ನಲೆ ಸೌಭಾಗ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯು ನಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸ್ಪೋಟದ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿ ಹೋಗಿತ್ತು.
ದುರ್ಘಟನೆಯಲ್ಲಿ ಲಲಿತಮ್ಮ(50), ಸೌಭಾಗ್ಯ(36), ಪಾರ್ವತಮ್ಮ (45) ಮಲ್ಲೇಶಪ್ಪ(60), ಪ್ರವೀಣ್(35)ಗೆ ಗಂಭೀರವಾಗಿ ಗಾಯಗೊಂಡಿದ್ದರು. ಮೃತ ಲಲಿತಮ್ಮ, ಮಲ್ಲೇಶಪ್ಪ ದಂಪತಿ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿದ್ದ ಹಿನ್ನಲೆ ಸರಿಪಡಿಸಲು ಪಕ್ಕದ ಮನೆಯ ಪ್ರವೀಣ್ ಅವರನ್ನು ಲಲಿತಮ್ಮ ಕರೆತಂದಿದ್ದರು. ಅಡುಗೆ ಅನಿಲ ಸೋರಿಕೆಯಾಗುತ್ತಿದ್ದ ಕೋಣೆಗೆ ಆಗಮಿಸಿದ ಪ್ರವೀಣ್, ಲೈಟ್ ಸ್ವಿಚ್ ಹಾಕಿದ ಪರಿಣಾಮ ಸಿಲಿಂಡರ್ ಸ್ಪೋಟವಾಗಿರುವ ಸಾಧ್ಯತೆ ಇದೆ. ಪ್ರವೀಣ್ ನೊಂದಿಗೆ ಸೌಭಾಗ್ಯ, ಮೃತ ಪಾರ್ವತಮ್ಮ ಕೂಡ ಅನಿಲ ಸೋರಿಕೆ ಆಗಿರುವುದನ್ನು ನೋಡಲು ಲಲಿತಮ್ಮ ಅವರ ಮನೆಗೆ ಆಗಮಿಸಿದ್ದರು. ಆಗ ಸಿಲಿಂಡರ್ ಸ್ಪೋಟ ಆಗಿದೆ. ಇನ್ನು ನಾಲ್ವರಿಗೆ ಶೇ. 50 ರಿಂದ 60 ರಷ್ಟು ಸುಟ್ಟ ಗಾಯಗಳಾಗಿದ್ದವು. ಸೌಭಾಗ್ಯ ಹಾಗೂ ಪ್ರವೀಣ್ ಗೆ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಮುಂದುವರೆಸಿಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಧ್ವಜ ಕಟ್ಟುವ ವಿಚಾರಕ್ಕೆ ವಾಗ್ವಾದ: 8 ಜನರ ವಿರುದ್ಧ ದೂರು ದಾಖಲು
ಇನ್ನು ಹತ್ತು ವರ್ಷಗಳಲ್ಲಿ ದಾವಣಗೆರೆ ಐಎಎಸ್ ಹಬ್- ಜಿ.ಬಿ. ವಿನಯ್ ಕುಮಾರ್
Congress ಆಡಳಿತ ವೈಫಲ್ಯ ಮರೆಮಾಚಲು ಮಾನವ ಸರಪಳಿ ಗಿಮಿಕ್: ರೇಣು
Davanagere: ಗಣೇಶ ವಿಸರ್ಜನೆ ವೇಳೆ ಜೆಸಿಬಿ ಹರಿದು ಮಹಿಳೆ ಸೇರಿ 5-6 ಮಂದಿಗೆ ಗಂಭೀರ ಗಾಯ
Davanagere: 80 ಕಿಲೋಮೀಟರ್ ಉದ್ದದ ಮಾನವ ಸರಪಳಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.