ಕುಂದಾಪುರ: ರಿಂಗ್‌ರೋಡ್‌ಗೆ ಯುಜಿಡಿ ಆತಂಕ-ರಸ್ತೆಗೆ ಅಪಾರ ಹಾನಿ ಸಾಧ್ಯತೆ…


Team Udayavani, Jul 10, 2024, 5:08 PM IST

ಕುಂದಾಪುರ: ರಿಂಗ್‌ರೋಡ್‌ಗೆ ಯುಜಿಡಿ ಆತಂಕ-ರಸ್ತೆಗೆ ಅಪಾರ ಹಾನಿ ಸಾಧ್ಯತೆ…

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್‌ ರೋಡ್‌ ಅಭಿವೃದ್ಧಿಗೆ ಇದ್ದ ಎಲ್ಲ ಅಡೆತಡೆಗಳೂ ನಿವಾರಣೆಯಾಗಿದ್ದು ಹೊಸದಾಗಿ ಯುಜಿಡಿ ಆತಂಕ ಎದುರಾಗಿದೆ. ಸಿಆರ್‌ಝಡ್‌ ಅನುಮತಿಯೇ ಆಗದೇ ಯೋಜನೆ ತಯಾರಿಸಿ ಟೆಂಡರ್‌ ಕರೆದು ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿತ್ತು. ಈಚೆಗೆ ಶಾಸಕ ಕಿರಣ್‌ ಕುಮಾರ್‌
ಕೊಡ್ಗಿ ಅವರು ಸಿಆರ್‌ಝಡ್‌ ಅನುಮೋದನೆ ದೊರಕಿಸಿಕೊಟ್ಟಿದ್ದಾರೆ ಎಂಬಲ್ಲಿಗೆ ಕಾಮಗಾರಿಗೆ ಒಂದು ಹಂತದ ನಿರಾಕ್ಷೇಪಣೆ ದೊರೆತಿದೆ.

ಅದಕ್ಕಾಗಿ ಕಲ್ಲುಗಳು ಬಂದು ಬಿದ್ದಿವೆ. 2023 ಜನವರಿಯಲ್ಲಿ ಶಿಲಾನ್ಯಾಸವಾಗಿದ್ದು 18 ತಿಂಗಳ ಅವಧಿಯಲ್ಲಿ ಕೆಲಸ ಮುಗಿಯಬೇಕಿತ್ತು. ಈಗ 19 ತಿಂಗಳಾಗಿದ್ದು ಮಳೆಗಾಲದ ತಿಂಗಳುಗಳನ್ನು ಹೊರತುಪಡಿಸಿದರೆ ಇನ್ನು ಬೆರಳೆಣಿಕೆ ತಿಂಗಳಲ್ಲಿ ಕಾಮಗಾರಿ ಮುಗಿಯಬೇಕು. ಈ ಮಳೆಗಾಲ ಮುಗಿದ ಬಳಿಕವೇ ಕಾಮಗಾರಿ ಆರಂಭವಾಗಲಿದೆ.

ರಿಂಗ್‌ರೋಡ್‌ ವಿಶೇಷತೆ
ಪಾದಚಾರಿಗಳಿಗೆ ನಡೆಯಲು ದಾರಿ, ನದಿಗೆ ತಡೆಗೋಡೆ, ದ್ವಿಪಥ ಮಾದರಿಯಲ್ಲಿ, ವಿದ್ಯುತ್‌ ದೀಪಗಳ ಬೆಳಕಿನಲ್ಲಿ ರಿಂಗ್‌ರೋಡ್‌ ಅತ್ಯಾಕರ್ಷಕವಾಗಿ ಕಾಣುವಂತೆ ನಿರ್ಮಾಣವಾಗಲಿದೆ. ಈ ರಸ್ತೆಯಿಂದ ನಗರದ ಒಳಗಿನ ಮದ್ದುಗುಡ್ಡೆ, ಹೊಸಬಸ್‌ನಿಲ್ದಾಣ,
ಬಹದ್ದೂರ್‌ಶಾ ವಾರ್ಡ್‌, ಖಾರ್ವಿಕೇರಿ ಮೊದಲಾದ ರಸ್ತೆಗಳಿಗೆ ಸಂಪರ್ಕ ದೊರೆಯಲಿದೆ.

ಮಹತ್ವಾಕಾಂಕ್ಷಿ ಯೋಜನೆ
ಕುಂದಾಪುರ ನಗರವನ್ನು ಸುತ್ತುವರಿದಿರುವ ಮಹತ್ವಾಕಾಂಕ್ಷೆಯ ರಿಂಗ್‌ರೋಡ್‌ ನಾಗರಿಕರ ಪಾಲಿಗೆ ದುರ್ಲಭ ಎಂಬಂತೆ ಭಾಸವಾಗುತ್ತಿತ್ತು. ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ 2006-07ನೇ ಸಾಲಿನಲ್ಲಿ ಸಾಕಾರಗೊಂಡ ಈ ಮಹತ್ವಾಕಾಂಕ್ಷೆಯ ಯೋಜನೆ ನಿರ್ವಹಣೆ ಇಲ್ಲದೆ ಸೊರಗುತ್ತಿತ್ತು.

ರಿಂಗ್‌ರೋಡ್‌ ಕಾಡುವ ಯುಜಿಡಿ
ಖಾರ್ವಿಕೇರಿ ಪರಿಸರಕ್ಕೆ ಯುಜಿಡಿ ಸಂಪರ್ಕ ವ್ಯವಸ್ಥೆ ಆಗಲಿಲ್ಲ. ನಗರದ ಎಲ್ಲ ಕಡೆಯ ತ್ಯಾಜ್ಯ ಹರಿದು ಖಾರ್ವಿಕೇರಿ ಕಡೆಗೆ ಬರುತ್ತದೆ. ಇಲ್ಲಿನ ಸುಡುಗಾಡು ತೋಡು ಸೇರಿದಂತೆ ಖಾರ್ವಿಕೇರಿ ಜನರಿಗೆ ತ್ಯಾಜ್ಯ ನೀರಿನ ಅಶುದ್ಧ ವಾತಾವರಣ. ಸೊಳ್ಳೆ ಕಚ್ಚಿಸಿಕೊಳ್ಳುವ ಶಿಕ್ಷೆ. ವಾಸನೆಯ ನಿತ್ಯನರಕ. ಅದಕ್ಕಾಗಿ ಇಲ್ಲಿ ಒಳಚರಂಡಿ ಮಾಡಿ ಎನ್ನುವುದು ಅವರ ಬಹುಕಾಲದ ಬೇಡಿಕೆ.

ಆದರೆ ಚರಂಡಿ ಮಾತ್ರ ಮಾಡಿ ಆ ತ್ಯಾಜ್ಯ ನೀರು ಎಲ್ಲಿಗೆ ಹರಿದುಹೋಗಬೇಕೆಂಬುದೇ ತೀರ್ಮಾನವಾಗದೇ, ಹರಿದು ಹೋಗುವಲ್ಲಿನ ಭೂಸ್ವಾಧೀನ ಆಗದೇ, ಎಸ್‌ಟಿಪಿ ಘಟಕಗಳ ನಿರ್ಮಾಣವಾಗದೇ ಪೈಪ್‌ಲೈನ್‌ ಮಾಡಿದ ಬುದ್ಧಿವಂತ ಎಂಜಿನಿಯರ್‌ಗಳಿಂದಾಗಿ ಇಡೀ ನಗರದ ಜನತೆಗೆ ಸಂಕಷ್ಟ. 43 ಕೋ.ರೂ. ಚರಂಡಿ ನೀರಿನಲ್ಲಿ ತೊಳೆದು ಹೋದ ಅನುಭವ. ಈಗ
ಅಂತೂ ಇಂತೂ ಒಳಚರಂಡಿ ಮಾಡಬೇಕೆಂಬ ಹುಮ್ಮಸ್ಸು ಇದೆಯಾದರೂ ಭೂಸ್ವಾಧೀನದಲ್ಲಿ ಅಲ್ಲಲ್ಲಿ ಮೂಗಿಗೆ ಬಡಿಯುವ ಭ್ರಷ್ಟಾಚಾರದ ವಾಸನೆ. ಹಿಂದೊಮ್ಮೆ ಲೋಕಾಯುಕ್ತದಲ್ಲೂ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಒಟ್ಟಿನಲ್ಲಿ ಯುಜಿಡಿಯೇ ಒಂದು ದೊಡ್ಡ ಅಪಧ್ವಾನ. ಈ ನಡುವೆ ಹೊಸದಾಗಿ ಯುಜಿಡಿ ಮಾಡಿದರೆ, ಖಾರ್ವಿಕೇರಿ ಭಾಗದ ಪೈಪ್‌ಲೈನ್‌ ಹೊಸದಾಗಿ ನಿರ್ಮಾಣವಾಗುವ ರಿಂಗ್‌ರೋಡ್‌ ಮೂಲಕ ಹೋಗಬೇಕಿದೆ. ರಸ್ತೆ ಮಾಡಿದ ಮೇಲೆ ಪೈಪ್‌ಲೈನ್‌ ಗಾಗಿ ಅಗೆದರೆ ಕೋಟ್ಯಂತರ ರೂ. ವ್ಯಯಿಸಿದ ರಿಂಗ್‌ರೋಡ್‌ ಹಾಳಾಗಲಿದೆ. ಈ ದೂರಾಲೋಚನೆಯಿಂದ ಶಾಸಕ ಕಿರಣ್‌
ಕುಮಾರ್‌ ಕೊಡ್ಗಿ ಅವರು ಯುಜಿಡಿ ಪೈಪ್‌ಲೈನ್‌ ಗೆ ಸ್ಥಳಾವಕಾಶ ಕಲ್ಪಿಸಿ ರಸ್ತೆ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಯುಜಿಡಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ, ಪುರಸಭೆಯವರು ಸಂಯುಕ್ತವಾಗಿ ಕಾರ್ಯನಿರ್ವಹಿಸಬೇಕಿದೆ. ರಸ್ತೆಯ ನಡುವೆ ಅಲ್ಲದಿದ್ದರೂ ಪಾದಚಾರಿ ಪಥದಲ್ಲಿ ಪೈಪ್‌ಲೈನ್‌ ಹಾಕುವಂತೆ ಶಾಸಕರು ಸೂಚಿಸಿದ್ದಾರೆ.

ಯುಜಿಡಿ ಸಮಸ್ಯೆ 
ನಗರದಲ್ಲಿ 43 ಕೋ.ರೂ. ವೆಚ್ಚದಲ್ಲಿ ಅನುಷ್ಠಾನ ಹಂತದಲ್ಲಿ ಇರುವ ಒಳಚರಂಡಿ ಕಾಮಗಾರಿಯ ಭೀತಿ ಈ ವರ್ತುಲ ರಸ್ತೆಯ
ಪಾಲಿಗಿದೆ. ಈ ಹಿಂದೆ ನಗರೋತ್ಥಾನದಲ್ಲಿ ಹೊಸದಾಗಿ ನಗರದ ರಸ್ತೆಗಳನ್ನು ಕಾಂಕ್ರಿಟ್‌ ರಸ್ತೆ ಮಾಡಿದಾಗ ಯುಜಿಡಿ ಪೈಪ್‌ಲೈನ್‌ಗಾಗಿ ನಡು ರಸ್ತೆಯನ್ನೇ ಕೊರೆಯಲಾಗಿತ್ತು. ನಗರದ ಬಹುತೇಕ ಎಲ್ಲ ಕಾಂಕ್ರಿಟ್‌ ರಸ್ತೆಗಳನ್ನು ಯುಜಿಡಿಗಾಗಿ ಕೊರೆದು
ಅಸಮರ್ಪಕವಾಗಿ ಮುಚ್ಚಿ ಇಂದಿಗೂ ಉತ್ತಮ ರಸ್ತೆ ಎಂದು ಯಾವುದನ್ನೂ ಗುರುತಿಸುವಂತಿಲ್ಲ ಎಂಬಂತೆ ಹಾಳುಗೆಡವಲಾಗಿದೆ. ಈಗಲೂ ಯುಜಿಡಿ ಸಂಬಂಧವಾಗಿ ಅಗೆದ ರಸ್ತೆಯ ದೂರುಗಳು ಇವೆ. ಅತ್ತ ಯುಜಿಡಿಯೂ ಆಗಲಿಲ್ಲ. ಇತ್ತ ರಸ್ತೆಯೂ ಉಳಿಯಲಿಲ್ಲ ಎಂಬಂತಹ ಅಯೋಮಯ ಸ್ಥಿತಿ.

20 ಕೋ.ರೂ.ಗಳ ರಿಂಗ್‌ರೋಡ್‌ ಯೋಜನೆ
915 ಮೀ. ಉದ್ದ ಹಾಗೂ 1,110 ಮೀ.ನಂತೆ ಉದ್ದದ ಎರಡು ಹಂತದಲ್ಲಿ ತಲಾ 9.98 ಕೋ. ರೂ. ವೆಚ್ಚದಲ್ಲಿ ಒಟ್ಟು 19.96 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ಒಂದು ಬದಿಯಲ್ಲಿ ಚರಂಡಿ, ಇನ್ನೊಂದು ಬದಿಯಲ್ಲಿ ತಡೆಗೋಡೆ ಇರಲಿದ್ದು 10 ಅಡಿ ಅಗಲದ ಪಾದಚಾರಿ ಪಥ ಇರಲಿದೆ. ರಸ್ತೆ 12.5 ಮೀ. ಅಗಲ ಇರಲಿದೆ. 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕೆಂಬ ಶರತ್ತಿದೆ. ಪ್ರಭಾಕರ ಟೈಲ್ಸ್‌ವರೆಗೆ ಈ ಕಾಮಗಾರಿ ನಡೆಯಲಿದ್ದು ಮುಂದಿನ ಕಾಮಗಾರಿಗೆ 16 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ.

ವರ್ತುಲ ರಸ್ತೆ
ಕುಂದಾಪುರದ ಸಂಗಂನಿಂದ ಮೊದಲ್ಗೊಂಡು ಪಂಚ ಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್‌ ರೋಡ್‌ ಚರ್ಚ್‌ ರಸ್ತೆಯನ್ನು ಸಂಧಿಸುತ್ತದೆ. ಅಲ್ಲಿಂದ ಕುಂದಾಪುರ ನಗರವನ್ನು ಹತ್ತಿರದಿಂದ ಸಂಧಿಸಬಹುದಾಗಿದೆ.

ಮಂಜೂರಾತಿ ಆಗಿಲ್ಲ
ಯುಜಿಡಿ ಮುಂದುವರಿದ ಕಾಮಗಾರಿಗೆ ಟೆಂಡರ್‌ ಮಂಜೂರಾಗಿಲ್ಲ. ರಿಂಗ್‌ ರೋಡ್‌ ಹಾಳಾಗದಂತೆ ಪೈಪ್‌ಲೈನ್‌ ಹಾಕುವ ಕುರಿತು ಸಮನ್ವಯ ಮೂಲಕ ಕಾರ್ಯನಿರ್ವಹಿಸಲಾಗುವುದು.
*ಮಂಜುನಾಥ ಆರ್‌.
ಮುಖ್ಯಾಧಿಕಾರಿ, ಪುರಸಭೆ

*ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗೊಳ್ಳಿ: ಉಸಿರಾಟದ ತೊಂದರೆಯಿಂದ ಮೀನುಗಾರ ಸಾವು

Gangolli: ಉಸಿರಾಟದ ತೊಂದರೆಯಿಂದ ಮೀನುಗಾರ ಸಾವು

Kundapura: ಜಾಲತಾಣದಿಂದಾಗಿ ಲೈಂಗಿಕ ದೌರ್ಜನ್ಯ ಹೆಚ್ಚಳ

Kundapura: ಜಾಲತಾಣದಿಂದಾಗಿ ಲೈಂಗಿಕ ದೌರ್ಜನ್ಯ ಹೆಚ್ಚಳ

Karkala:ಪಶ್ಚಿಮಘಟ್ಟದ ತಪ್ಪಲಿನ ಶಾಲೆಗಳ ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಮೂಡಿಸುವ ಕಲಾವಿದೆ

Karkala:ಪಶ್ಚಿಮಘಟ್ಟದ ತಪ್ಪಲಿನ ಶಾಲೆಗಳ ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಮೂಡಿಸುವ ಕಲಾವಿದೆ

Accident-Logo

Kundapura: ಖಾಸಗಿ ಬಸ್‌ಗಳ ಢಿಕ್ಕಿ: 7 ಮಂದಿಗೆ ಗಾಯ

Kundapura: ಪೆಟ್ರೋಲ್‌ ಹಾಕಿಸಿ ಹಲ್ಲೆ: ದೂರು

Kundapura: ಪೆಟ್ರೋಲ್‌ ಹಾಕಿಸಿ ಹಲ್ಲೆ: ಪ್ರಕರಣ ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.