Koppala; ನೆಕ್ಕಂಟಿ ನಾಗರಾಜ ನನ್ನ ಸ್ನೇಹಿತ, ಆದರೆ….: ಬಸವರಾಜ ದಡೆಸಗೂರು
Team Udayavani, Jul 11, 2024, 12:29 PM IST
ಕೊಪ್ಪಳ: ನೆಕ್ಕಂಟಿ ನಾಗರಾಜ ಇದರಲ್ಲಿ ಅಮಾಯಕ. ಆತನು ಅಧಿಕಾರಿಯಲ್ಲ, ಯಾವುದೇ ಸಚಿವರ ಪಿಎ ಅಲ್ಲ. ಆತ ಸಾಮಾನ್ಯ ವ್ಯಕ್ತಿ ಅಷ್ಟೇ. ಯಾವುದೇ ಸ್ಥಾನಮಾನವೂ ಆತನಿಗೆ ಇಲ್ಲ. ಆದರೂ ಆತನನ್ನು ಬಂಧಿಸಿದ್ದಾರೆ, ಈ ಪ್ರಕರಣ ತನಿಖೆಯಲ್ಲಿದೆ. ಆತನ ಬಗ್ಗೆ ನಾನು ಸಾಪ್ಟ್ ಎಂದೇನೂ ಇಲ್ಲ. ಆತನು ಆರೋಪಿ ಅಷ್ಟೇ ಅಪರಾಧಿ ಅಲ್ಲ. ತನಿಖೆ ನಡೆಯಲಿ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಮಾಜಿ ಶಾಸಕ ಬಸವರಾಜ ದಡೆಸಗೂರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಕ್ಕಂಟಿ ನಾಗರಾಜ ನನ್ನ ಸ್ನೇಹಿತ, ಸಚಿವ ಶಿವರಾಜ ತಂಗಡಗಿಗೂ ಸ್ನೇಹಿತ. ಆತನು ನಾಗೇಂದ್ರನಿಗೂ ಸ್ನೇಹಿತ. ಎಲ್ಲ ನಾಯಕರೊಂದಿಗೂ ಆತನು ಒಡನಾಟ ಇದೆ ಎಂದರು.
ಅಧಿಕಾರಿಗಳ ವರ್ಗಾವಣೆ ದಂಧೆ ವಿಚಾರವಾಗಿ ಮಾತನಾಡಿ, ಈ ಸರ್ಕಾರದಲ್ಲಿ ಪ್ರತಿ 11 ತಿಂಗಳು ಅಧಿಕಾರಿಗಳ ವರದಿ ಪಡೆದು ವರ್ಗಾವಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರದಲ್ಲಿ ಇಂಹ ವ್ಯವಸ್ಥೆ ಇರಲಿಲ್ಲ. ಕನಿಷ್ಟ ಎರಡು ವರ್ಷ ಅಧಿಕಾರಿಗಳು ಇರುತ್ತಿದ್ದರು. ಕೊಪ್ಪಳ ಎಸ್ಪಿ ವರ್ಗಾವಣೆಗೆ ಮೂವರು ಶಾಸಕರು ತಡೆ ಮಾಡಿದರೆ ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ ವರ್ಗಾವಣೆ ಮಾಡಿಸಿದ್ದಾರೆ. ಈಗಿನ ಮಂತ್ರಿಯು ವರ್ಗಾವಣೆ ದಂಧೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನಾನು ಕ್ಲೀನ್ ಎನ್ನುತ್ತಾರೆ. ಆದರೆ ಹಿಂದಿನ ಬಾಗಿಲಿಂದ ಎಲ್ಲ ಮಂತ್ರಿಯಿಂದ ಹಣ ಪಡೆಯುತ್ತಿದ್ದಾರೆ. ಸಿಎಂ ಶಿವರಾಜ ತಂಗಡಗಿಗೆ 11 ನಿಗಮಗಳ ಹೊಣೆ ಕೊಟ್ಟಿದ್ದಾರೆ. ಸಚಿವರ ಗಮನಕ್ಕೆ ಸಿಎಂ ಗಮನಕ್ಕೆ ಬಾರದೇ ಇವೆಲ್ಲ ನೆಡೆಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಅದಾಲತ್ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು
Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ
ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ
Darshan, ಸುದೀಪ್ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು
Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.