Viral: ಹಾರ್ದಿಕ್ ಜೊತೆ ಫೋಟೋ ತೆಗೆಸಿಕೊಂಡ ಯುವತಿ ವೈರಲ್; ಯಾರೀಕೆ ಪ್ರಾಚಿ ಸೋಲಂಕಿ?
ನತಾಶಗೆ ಗುಡ್ ಬೈ ಹೇಳಿ ಹೊಸ ಗರ್ಲ್ ಫ್ರೆಂಡ್ ಮಾಡಿಕೊಂಡ್ರಾ ಹಾರ್ದಿಕ್?
Team Udayavani, Jul 11, 2024, 5:25 PM IST
ಮುಂಬಯಿ: ಟೀಮ್ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕಳೆದ ಕೆಲ ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಟಿ-20 ವಿಶ್ವಕಪ್ ನಲ್ಲಿ ಅವರ ಅದ್ಭುತ ಪ್ರದರ್ಶನದಿಂದ ಅವರು ಎಲ್ಲಾ ಟೀಕೆಗಳಿಗೆ ಉತ್ತರಿಸಿದ್ದಾರೆ. ವಿಶ್ವಕಪ್ ಮುಗಿದ ಬಳಿಕ ಹಾರ್ದಿಕ್ ಮತ್ತೆ ಎಲ್ಲರ ಮನಗೆದ್ದಿದ್ದಾರೆ. ಆದರೆ ಈ ಹಿಂದೆ ಎದ್ದಿದ್ದ ವಿಚ್ಛೇದನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾನ್ಕೊವಿಕ್ (Natasa Stankovic) ಅವರ ನಡುವೆ ಯಾವುದೂ ಮೊದಲಿನಂತಿಲ್ಲ. ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.
ಪಾಂಡ್ಯ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶದ ಕಾರಣದಿಂದಾಗಿ 70% ಆಸ್ತಿಯನ್ನು ಕಳೆದುಕೊಳ್ಳಬಹುದು ಎನ್ನುವ ಸುದ್ದಿಯೂ ಹರಿದಾಡಿತ್ತು.
ನತಾಶ ಹಾರ್ದಿಕ್ ಜೊತೆಗಿನ ಎಲ್ಲಾ ಫೋಟೋಗಳನ್ನು ಹೈಡ್ ಮಾಡಿದ್ದರು. ಆದರೆ ಕೆಲ ದಿನದ ಬಳಿಕ ಮತ್ತೆ ಅವರ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಕಾಣಿಸಿಕೊಂಡಿತ್ತು.
ಇದೀಗ ವಿಶ್ವಕಪ್ ಹೀರೋ ಹಾರ್ದಿಕ್ ಪಾಂಡ್ಯ ಅವರನ್ನು ಯುವತಿಯೊಬ್ಬಳು ಭೇಟಿ ಆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯಾರೀಕೆ, ಹಾರ್ದಿಕ್ ಜೊತೆಗೆ ಈಕೆಗೇನು ಸಂಬಂಧ, ಹಾರ್ದಿಕ್ ಪಾಂಡ್ಯ ಅವರ ಹೊಸ ಗರ್ಲ್ ಫ್ರೆಂಡಾ? ಡೇಟಿಂಗ್ ಮಾಡುತ್ತಿದ್ದಾರಾ? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಯಾರು ಈ ಪ್ರಾಚಿ ಸೋಲಂಕಿ: ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರ ನಿವಾಸಕ್ಕೆ ತೆರಳಿ ಯುವತಿಯೊಬ್ಬಳು ಭೇಟಿ ಆಗಿದ್ದಾಳೆ. ನಾನು ವಿಶ್ವಕಪ್ ಹೀರೋವನ್ನು ಭೇಟಿಯಾದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಯುವತಿ ಕ್ಯಾಪ್ಷನ್ ಬರೆದುಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ.
ಈಕೆಯ ಹೆಸರು ಪ್ರಾಚಿ ಸೋಲಂಕಿ (Prachi Solanki)ಕಂಟೆಂಟ್ ಕ್ರಿಯೇಟರ್ ಆಗಿರುವ ಈಕೆ ಮೇಕಪ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈಕೆಗೆ ಐದೂವರೆ ಲಕ್ಷ ಫಾಲೋವರ್ಸ್ ಇದ್ದಾರೆ.
ಹಾರ್ದಿಕ್ ಸಹೋದರ ಕೃಣಾಲ್ ಹಾಗೂ ಅವರ ಪತ್ನಿಯ ಜೊತೆಗೂ ಪ್ರಾಚಿ ಫೋಟೋ ತೆಗೆಸಿಕೊಂಡಿದ್ದಾರೆ.
ಅಭಿಮಾನಿಯಾನಿ ಹಾರ್ದಿಕ್ ಅವರನ್ನು ಪ್ರಾಚಿ ಭೇಟಿಯಾಗಿದ್ದು, ಇವರಿಬ್ಬರ ಭೇಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಡೇಟಿಂಗ್ ಎಂದು ಬಣ್ಣಿಸಲಾಗುತ್ತಿದೆ. ಆದರೆ ಪ್ರಾಚಿ ಇದೆಲ್ಲ ಸುಳ್ಳು ಎಂದು ಹೇಳಿ, ಸ್ಟೋರಿ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.