NEET-UG ಪೇಪರ್ ಲೀಕ್; ಸಿಬಿಐನಿಂದ ಕಿಂಗ್ ಪಿನ್ ಆರೋಪಿ ಬಂಧನ
Team Udayavani, Jul 11, 2024, 5:37 PM IST
ಹೊಸದಿಲ್ಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ಪಿನ್ ಎಂದು ಹೇಳಲಾದ ರಾಕಿ ಅಲಿಯಾಸ್ ರಾಕೇಶ್ ರಂಜನ್ನನ್ನು ಗುರುವಾರ ಸಿಬಿಐ ಬಂಧಿಸಿದೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಈತ ತಲೆಮರೆಸಿಕೊಂಡಿದ್ದ. ಈತ ನಳಂದಾ ಮೂಲದವನಾಗಿದ್ದು, ಇಡೀ ನೀಟ್ ಅಕ್ರಮ ಪ್ರಕರಣದ ಮಾಸ್ಟರ್ಮೈಂಡ್ ಸಂಜೀವ್ ಮುಖೀಯಾನ ಸಂಬಂಧಿ. ಗುರುವಾರ ಸಿಬಿಐ ತಂಡ ಈತನನ್ನು ಬಿಹಾರದ ಪಟ್ನಾದ ಹೊರವಲಯದಲ್ಲಿ ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿದೆ. ಪಟ್ನಾದ ವಿಶೇಷ ಕೋರ್ಟ್ ಈತನನ್ನು 10 ದಿನ ಸಿಬಿಐ ವಶಕ್ಕೊಪ್ಪಿಸಿ ಆದೇಶ ನೀಡಿದೆ. ರಾಕಿ ಬಂಧನದ ಬೆನ್ನಲ್ಲೇ ಸಿಬಿಐ ಪಟ್ನಾ ಮತ್ತು ಕೋಲ್ಕತಾದ ಒಟ್ಟು 3 ಪ್ರದೇಶಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದೆ. ಇದಕ್ಕೂ ಮುನ್ನ ವಾರದ ಆರಂಭದಲ್ಲಿ ಬಿಹಾರ, ಝಾರ್ಖಂಡ್ನ 15 ಕಡೆ ಸಿಬಿಐ ಶೋಧ ಕೈಗೊಂಡಿತ್ತು.
ಜು.18ಕ್ಕೆ ಸುಪ್ರೀಂನಲ್ಲಿ ವಿಚಾರಣೆ: ನೀಟ್ ಅಕ್ರಮಗಳಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜು.18ಕ್ಕೆ ಮುಂದೂಡಿದೆ. ಅಕ್ರಮ ಸಂಬಂಧ ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಫಿದವಿತ್ ಸಲ್ಲಿಸಿದ್ದು, ಅದರ ಪ್ರತಿ ಇತರ ಅರ್ಜಿದಾರರಿಗೆ ಲಭ್ಯವಾಗದಿರುವ ಕಾರಣ, ವಿಚಾರಣೆ ಮುಂದೂಡಲಾಗಿದೆ. ಸಾಮೂಹಿಕವಾಗಿ ಅಕ್ರಮ ನಡೆದಿಲ್ಲ, ಕೆಲವೇ ಮಂದಿಯ ನಡುವೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಸಲ್ಲಿಸಿದ್ದ ಅಫಿದವಿತ್ನಲ್ಲಿ ಹೇಳಿತ್ತು.
ತಿರುಚಿದ ಸ್ಕ್ರೀನ್ಶಾಟ್ : ಶೀಘ್ರ ಚಾರ್ಜ್ಶೀಟ್?
ಯುಜಿಸಿ-ನೆಟ್ ಪ್ರಶ್ನೆಪತ್ರಿಕೆಯ ತಿರುಚಿದ ಸ್ಕ್ರೀನ್ಶಾಟ್ ಅನ್ನು ಟೆಲಿಗ್ರಾಂ ಮೂಲಕ ಹಂಚಿಕೊಂಡಿದ್ದ ಆರೋಪಕ್ಕೆ ಸಂಬಂಧಿಸಿ ಯುವಕನೊಬ್ಬನ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐ ಸಿದ್ಧತೆ ನಡೆಸಿದೆ. ಯುವಕನೊಬ್ಬ ಆ್ಯಪ್ವೊಂದನ್ನು ಬಳಸಿ, ಪ್ರಶ್ನೆಪತ್ರಿಕೆಯೊಂದರ ಸ್ಕ್ರೀನ್ಶಾಟ್ ಅನ್ನು ತಿರುಚಿ, ಹಣ ಮಾಡುವ ಉದ್ದೇಶದಿಂದ ಅದನ್ನು ಯುಜಿಸಿ-ನೆಟ್ ಪ್ರಶ್ನೆಪತ್ರಿಕೆ ಎಂದು ಸುಳ್ಳು ಹೇಳಿ ಬಳಿಕ ಅದನ್ನು ಟೆಲಿಗ್ರಾಂನಲ್ಲಿ ಹಂಚಿಕೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.