Mobile; ಮೊದಲ ದಿವಸ ಮೂರೇ ಗಂಟೆಯಲ್ಲಿ 1 ಲಕ್ಷ ಮಾರಾಟವಾದ ಮೊಬೈಲ್ ಫೋನ್: ಏನಿದರ ವಿಶೇಷತೆ?


Team Udayavani, Jul 12, 2024, 9:24 PM IST

Mobile; ಮೊದಲ ದಿವಸ ಮೂರೇ ಗಂಟೆಯಲ್ಲಿ 1 ಲಕ್ಷ ಮಾರಾಟವಾದ ಮೊಬೈಲ್ ಫೋನ್: ಏನಿದರ ವಿಶೇಷತೆ?

ನವದೆಹಲಿ: ಇದೀಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿರುವ ಬ್ರಾಂಡ್ ನ  ಮೊದಲ ಮೊಬೈಲ್ ಫೋನ್ ಭಾರತದಲ್ಲಿ ಮೊದಲ ದಿನವೇ ಮೂರೇ ಗಂಟೆ ಅವಧಿಯಲ್ಲಿ 1 ಲಕ್ಷ ಯೂನಿಟ್ ಗಳ ಮಾರಾಟ ಕಂಡಿದೆ!

ಲಂಡನ್ ಮೂಲದ ತಂತ್ರಜ್ಞಾನ ಕಂಪನಿ ನಥಿಂಗ್ ನ ಉಪ-ಬ್ರಾಂಡ್ ಆದ CMF ತನ್ನ ಚೊಚ್ಚಲ ಸ್ಮಾರ್ಟ್  ಫೋನ್ ಮಾರಾಟದ ಮೊದಲ ದಿನವೇ ಭರ್ಜರಿ ಸೇಲ್ ಮಾಡಿದೆ!

CMF ಫೋನ್ 1, ಆನ್ ಲೈನ್ ಮತ್ತು ಆಫ್ ಲೈನ್ ಸೇರಿ ವಿವಿಧ ಚಾನಲ್ ಗಳಲ್ಲಿ ಕೇವಲ ಮೂರು ಗಂಟೆಗಳಲ್ಲಿ 100,000 ಯುನಿಟ್ ಗಳನ್ನು ಮಾರಾಟ ಮಾಡುವ ಗಮನಾರ್ಹ ಸಾಧನೆ ಮಾಡಿದೆ ಎಂದು ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಒನ್ ಪ್ಲಸ್ ಕಂಪೆನಿಯ ಸಹಸ್ಥಾಪಕರಾಗಿದ್ದ ಕಾರ್ಲ್ ಪೇ ಸ್ಥಾಪಿಸಿದ ನೂತನ ಬ್ರಾಂಡ್ ನಥಿಂಗ್. ಅಲ್ಪ ಕಾಲದಲ್ಲೇ ಈ ಬ್ರಾಂಡ್, ಬಜೆಟ್ ದರದಲ್ಲಿ ತನ್ನ ಉತ್ತಮ ಗುಣಮಟ್ಟದ ಫೋನ್, ಇಯರ್ ಬಡ್ ಗಳಿಂದ ಹೆಸರು ಮಾಡಿದೆ.

ನಥಿಂಗ್ ತನ್ನ ಇನ್ನೊಂದು ಉಪಬ್ರಾಂಡ್ ಸಿಎಂಎಫ್ ಅನ್ನು ಹೊರ ತಂದಿದ್ದು, ಈ ಬ್ರಾಂಡ್ ನಡಿ ಸಿಎಂಎಫ್ ಫೋನ್, ಇಯರ್ ಬಡ್, ವಾಚ್, ಪವರ್ ಬ್ಯಾಂಕ್ ಗಳನ್ನು ಉತ್ಪಾದಿಸುತ್ತಿದೆ. ಇವು ಬಜೆಟ್ ಸ್ನೇಹಿಯಾಗಿವೆ. ಸಿಎಂಎಫ್ ನ ಮೊದಲ ಫೋನ್ ಸಿಎಂಎಫ್ ಫೋನ್ 1 ಅನ್ನು ಮೊನ್ನೆಯಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇಂದು ಅದರ ಮೊದಲ ಮಾರಾಟವಿದ್ದು, ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ 1 ಲಕ್ಷ ಯೂನಿಟ್ ಗಳು ಮಾರಾಟವಾಗಿವೆ.

ನಥಿಂಗ್ ಫೋನ್ (2ಎ) ಬಿಡುಗಡೆಯಾಗಿದ್ದಾಗ 24 ಗಂಟೆ ಅವಧಿಯಲ್ಲಿ 1 ಲಕ್ಷ ಫೋನ್ ಮಾರಾಟವಾಗಿದ್ದವು. ಈ ಫೋನು ಆ ಸಾಧನೆಯನ್ನು ಮೂರೇ ಗಂಟೆಯಲ್ಲಿ ಮಾಡಿರುವುದು ವಿಶೇಷ.

ಈ ಪರಿಯ ವೇಗದ ಮಾರಾಟಕ್ಕೆ ಕಾರಣ, ಅದರ ಸ್ಪೆಸಿಫಿಕೇಷನ್ ಗೆ ಹೋಲಿಸಿದರೆ ಅದರ ದರ ಕೈಗೆಟುಕುವಂತಿರುವುದು. ಇದರ ದರ 6 ಜಿಬಿ 128 ಜಿಬಿಗೆ 15999 ರೂ. 8 ಜಿಬಿ 128 ಜಿಬಿಗೆ 17,999 ರೂ. ಇದೆ. ಮೊದಲ ದಿನ 1 ಸಾವಿರ ರೂ. ರಿಯಾಯಿತಿ ಸಹ ಇತ್ತು.

ಈ ದರಕ್ಕೆ ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್ಇದ್ದು, ಈ ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. 16 GB ವರೆಗಿನ RAM ವಿಸ್ತರಿಸಬಹುದು. ಈ ಪ್ರೊಸೆಸರ್ ನಥಿಂಗ್ನೊಂದಿಗೆ ಸಹ-ಇಂಜಿನಿಯರಿಂಗ್ ಆಗಿದೆ. 5000 mAh ಬ್ಯಾಟರಿ ಹೊಂದಿದ್ದು, 33 ವಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ಇದೆ.

ಸೋನಿ 50 MP ಮುಖ್ಯ ಕ್ಯಾಮೆರಾ ಹೊಂದಿದ್ದು,2 ಮೆಪಿ ಡೆಪ್ತ್ ಸೆನ್ಸರ್ ಇದೆ.16 ಮೆ.ಪಿ. ಮುಂಭಾಗದ ಕ್ಯಾಮರಾ ಒಳಗೊಂಡಿದೆ. 15 ಸಾವಿರ ರೂ. ರೇಂಜಿನಲ್ಲಿ 6.67 ಇಂಚಿನ LTPS ಸೂಪರ್ AMOLED ಪರದೆ ಹಾಕಿರುವುದು ವಿಶೇಷ. ಅಲ್ಟ್ರಾ-ಸ್ಮೂತ್ 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ ಸಹ ಹೊಂದಿದೆ. ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ಆಕರ್ಷಕ ವಿನ್ಯಾಸ ಹೊಂದಿದ್ದು, ಈ ಕೇಸ್ ಗಳನ್ನು ಬದಲಾಯಿಸುವ ಆಯ್ಕೆಯನ್ನೂ ನೀಡಲಾಗಿದೆ.

 

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

Reliance AGM 2024: ರಿಲಯನ್ಸ್‌ನಿಂದ ಜಿಯೋ ಬ್ರೈನ್‌,100 ಜಿಬಿ ಉಚಿತ ಕ್ಲೌಡ್ ಸೇವೆ!

Reliance AGM 2024: ರಿಲಯನ್ಸ್‌ನಿಂದ ಜಿಯೋ ಬ್ರೈನ್‌,100 ಜಿಬಿ ಉಚಿತ ಕ್ಲೌಡ್ ಸೇವೆ!

Tech Review: Oneplus Nord 4-ಮೆಟಲ್ ಬಾಡಿಯ ಸುಂದರ ಸಮರ್ಥ ಕಾರ್ಯಾಚರಣೆ

Tech Review: Oneplus Nord 4-ಮೆಟಲ್ ಬಾಡಿಯ ಸುಂದರ ಸಮರ್ಥ ಕಾರ್ಯಾಚರಣೆ

iPhone 16 launch: ಐಫೋನ್ 16 ಸರಣಿ ಭಾರತದಲ್ಲಿ ಸೆ. 9ಕ್ಕೆ ಬಿಡುಗಡೆ

iPhone 16 launch: ಐಫೋನ್ 16 ಸರಣಿ ಭಾರತದಲ್ಲಿ ಸೆ. 9ಕ್ಕೆ ಬಿಡುಗಡೆ

X

X ಜಾಗತಿಕ ಸ್ಥಗಿತ;ಅನೇಕ ‘ಎಕ್ಸ್’ ಬಳಕೆದಾರರಿಗೆ ಸೇವೆಗಳಲ್ಲಿ ವ್ಯತ್ಯಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.