US;ಕೇವಲ 2 ಸೆ.ಮೀ ಅಂತರದಲ್ಲಿ ತಪ್ಪಿತು ಟ್ರಂಪ್ ಹತ್ಯೆ; ಸೀಕ್ರೆಟ್ ಸರ್ವಿಸ್ ಕೆಲಸ ಹೇಗಿತ್ತು?
Team Udayavani, Jul 14, 2024, 12:31 PM IST
ಪೆನ್ಸಿಲ್ವೇನಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಅವರು ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಭಾಷಣ ಮಾಡುತ್ತಿದ್ದ ವೇಳೆ ಟ್ರಂಪ್ ಅವರೆಡೆಗೆ ಬಂಧೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ಟ್ರಂಪ್ ಅವರ ಬಲ ಕಿವಿಯ ಮೇಲ್ಭಾಗವನ್ನು ಹರಿದುಕೊಂಡು ಹೋಗಿದೆ.
ಟ್ರಂಪ್ ಕಿವಿಯಿಂದ ರಕ್ತ ಚಿಮ್ಮುತ್ತಿದ್ದಂತೆ ಅವರ ಭದ್ರತೆಯ ಸೀಕ್ರೆಟ್ ಸರ್ವಿಸ್ ಕೂಡಲೇ ಅವರನ್ನು ಸುತ್ತುವರಿದು, ಅವರನ್ನು ವೇದಿಕೆಯಿಂದ ಕರೆದುಕೊಂಡು ಹೋದರು. ಶೂಟ್ ಮಾಡಿರುವ ಬಂಧೂಕುಧಾರಿಯನ್ನು ಕೂಡಲೇ ಸೀಕ್ರೆಟ್ ಸರ್ವಿಸ್ ಏಜೆಂಟ್ ಗಳು ಹೊಡೆದುರುಳಿಸಿದ್ದಾರೆ.
ಟ್ರಂಪ್ ರ್ಯಾಲಿ ಗುಂಡಿನ ದಾಳಿಯನ್ನು ಹತ್ಯೆ ಯತ್ನ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಲೆಟ್ ಒಂದು ವೇಳೆ ಅದರ ಬಲಕ್ಕೆ 2 ಸೆಂಟಿಮೀಟರ್ ಬಂದಿದ್ದರೆ, ಅದು ಮಾಜಿ ಅಧ್ಯಕ್ಷ ಟ್ರಂಪ್ ಗೆ ಮಾರಕವಾಗಿ ಸಾಬೀತಾಗುವ ಹೆಡ್ಶಾಟ್ ಆಗುತ್ತಿತ್ತು. ಟ್ರಂಪ್ ತಮ್ಮ ಭಾಷಣದ ಸಮಯದಲ್ಲಿ ಚಲಿಸುವ ಸನ್ನೆಗಳನ್ನು ಮಾಡುತ್ತಿದ್ದರಿಂದ ಬಹುಶಃ ಅವರು ಉಳಿದರು ಎನ್ನಲಾಗಿದೆ.
ಗುಂಡಿನ ಸದ್ದು ಕೇಳಿಸುತ್ತಿದ್ದಂತೆ, ಸೀಕ್ರೆಟ್ ಸರ್ವಿಸ್ ಟ್ರಂಪ್ ಅವರನ್ನು ಸುತ್ತುವರೆಯಿತು. ಅವರ ಎಸ್ ಯುವಿಗೆ ಕರೆದುಕೊಂಡು ಹೋಗಲಾಯಿತು.
ಘಟನೆಯಲ್ಲಿ ಕನಿಷ್ಠ ಒಬ್ಬ ಸಾವನ್ನಪ್ಪಿದ್ದಾನೆ ಮತ್ತು ಇಬ್ಬರು ಪ್ರೇಕ್ಷಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರ್ಯಾಲಿ ಸ್ಥಳದ ಹೊರಗಿನ ಎತ್ತರದ ಸ್ಥಾನದಿಂದ ದಾಳಿ ಮಾಡಿದ ಶಂಕಿತ ಶೂಟರ್ ನನ್ನು ಕೊಂದಿರುವುದಾಗಿ ಸೀಕ್ರೆಟ್ ಸರ್ವಿಸ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್
Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?
Cyclone: ಯಾಗಿ ಚಂಡಮಾರುತಕ್ಕೆ ದಕ್ಷಿಣ ಏಷ್ಯಾದಲ್ಲಿ 500 ಮಂದಿ ಸಾವು
Pagers explode: ಲೆಬನಾನ್ನಲ್ಲಿ ಸ್ಫೋಟ: 8 ಮಂದಿ ಮೃತ್ಯು, 2,700ಕ್ಕೂ ಅಧಿಕ ಮಂದಿಗೆ ಗಾಯ
Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್ ತಡೆ: ವಿಶ್ವಸಂಸ್ಥೆ ಆರೋಪ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ
Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು
Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು
Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.