Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….


Team Udayavani, Jul 14, 2024, 3:08 PM IST

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

ಪ್ರಕೃತಿಯ ಮಡಿಲಿನಲ್ಲಿ ಅದೆಷ್ಟೋ ಪ್ರವಾಸಿ ತಾಣಗಳಿವೆ. ಕೆಲವೊಂದು ಚಾರಣ ತಾಣಗಳು ಇನ್ನಷ್ಟು ಪ್ರವಾಸಿಗರನ್ನು ಗಮನ ಸೆಳೆಯುತ್ತವೆ. ಹೌದು ಪುಣ್ಯಕ್ಷೇತ್ರವೆಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಬಳಿ ಪುಷ್ಪಗಿರಿ ಎಂದು ಕರೆಯಲ್ಪಡುವ ಕುಮಾರ ಪರ್ವತ ಚಾರಣಕ್ಕೆ ಸೂಕ್ತವಾದ ಸ್ಥಳವಾಗಿದೆ ಹಾಗೆ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ.

ನಾನು ಹಲವಾರು ಕಡೆ ಚಾರಣ ಕೈಗೊಂಡಿದ್ದೇನೆ ಹಾಗೆಯೇ ಅದರ ಅನುಭವ ಪಡೆದಿದ್ದೇನೆ. ಆದರೆ ಕೊನೆತನಕ ಮನಸ್ಸಿನಲ್ಲಿ ಮಾಸಿ ಹೋಗಲಾರದಂತಹ ಚಾರಣವೆಂದರೆ ಅದು ಕುಮಾರ ಪರ್ವತ ಚಾರಣ. ಕರ್ನಾಟಕದ ಅತಿ ಎತ್ತರದ ಹಾಗೂ ಸವಾಲಿನ ಪರ್ವತದಲ್ಲಿ ಕುಮಾರ ಪರ್ವತ ಚಾರಣವೂ ಒಂದು ಇಂತಹ ಕಠಿಣವಾದ ಚಾರಣವನ್ನು ಕೈಗೊಂಡು ಏರಿರುವುದು ನನಗಿನ್ನು ವಿಸ್ಮಯವೆನಿಸುತ್ತದೆ.

ಹೀಗೊಂದು ದಿನ ಕೆಲ ಸಂಬಂಧಿಕರು ಸೇರಿ ಕುಮಾರ ಪರ್ವತ ಚಾರಣಕ್ಕೆ ಹೋಗಲು ಸಿದ್ದರಾದೆವು. ಅಷ್ಟು ದೀರ್ಘವಾದ ಚಾರಣದ ಅನುಭವವಂತು ನನಗಿರಲಿಲ್ಲ. ಅನುಮಾನದಿಂದಲೇ ಚಾರಣವನ್ನು ಪ್ರಾರಂಭಿಸಿದೆವು. ಒಂದೊಂದೇ ಹೆಜ್ಜೆ ಹಾಕುತ್ತಾ ಸುತ್ತಲಿನ ಹಚ್ಚ ಹಸಿರಿನಿಂದ ಕೂಡಿದ ಸುತ್ತಲಿನ  ಪರಿಸರವನ್ನು ಕಣ್ತುಂಬಿಕೊಂಡು ಅಲ್ಲೊಂದು ಇಲ್ಲೊಂದು ಸಿಕ್ಕ ಜಿಗಣೆಗಳಿಂದ ತಪ್ಪಿಸಿಕೊಂಡು ಭಯಂಕರವಾದ ಕಠಿಣಕರ ದಾರಿಯನ್ನು ಹಾದು ಹೋಗಿ ಸುಮಾರು 7ಕಿ.ಮೀ ದೂರದ ಗಿರಿಗದ್ದೆ ಎನ್ನುವಂತ ಪ್ರದೇಶವನ್ನು ತಲುಪಿದ್ದು ನಮ್ಮ ಅರಿವಿಗೆ ಬಂದಿರಲಿಲ್ಲ. ನಂತರ ನಾವು ಹೋಗಿರುವ 9 ಮಂದಿ ರಾತ್ರಿ ಟೆಂಟ್ ನ ಮೂಲಕ ಉಳಿದುಕೊಂಡೆವು.

ಮರುದಿನ ಪುನಃ ಬೇಗನೆ ಚಾರಣ ಆರಂಭ ಮಾಡಿದೆವು. ಈ ಹಿಂದೆ ದಟ್ಟ ಅರಣ್ಯದ ಮಧ್ಯೆಯಿಂದ ಕಲ್ಲಿನ ಸಾಹಸದ ದಾರಿ ದಾಟಿದ ನಮಗೆ ನಂತರ ಕಂಡಿದ್ದು ಹಚ್ಚಹಸಿರಿನಿಂದ ಕೂಡಿದ ಹುಲ್ಲುಗಾವಲಿನ ನಡುವೆಯ ದಾರಿ. ಸುತ್ತಲೂ ಸ್ವರ್ಗಮಯವಾದಂತಹ ಪ್ರಕೃತಿಯ ಸುಂದರ ನೋಟ ಇಂಪಾಗಿ ಕೇಳುವ ಪಕ್ಷಿಗಳ ಚಿಲಿಪಿಲಿ ಕಲರವ. ಪ್ರಕೃತಿಯನ್ನು ಬೆಚ್ಚಗೆ ಹೊದ್ದುಕೊಂಡಿರುವ ಮಂಜಿನ ಹನಿಗಳು ಇವೆಲ್ಲವನ್ನು ಸವಿಯುತ್ತಾ ಅಲ್ಲಲ್ಲಿ ಕೆಲವೊಮ್ಮೆ ವಿಶ್ರಾಂತಿ ಪಡೆದು ಒಂದೊಂದೇ ಬೆಟ್ಟವನ್ನು ಹತ್ತಲಾರಂಬಿಸಿದೆವು. ನಮಗೆ ಆಶ್ಚರ್ಯವಾಗುವಂತೆ ಮುಂದೆ ಸಾಗಲು ಪ್ರಾರಂಭಿಸಿದೆವು.

ಹೇಗೂ ಕೊನೆಗೆ ಸವಾಲೆನಿಸಿದ ಪರ್ವತದ ಕೊನೆಯ ಘಟ್ಟವನ್ನು ತಲುಪುತ್ತಿದ್ದಂತೆ ಎಲ್ಲಿಲ್ಲದ ತಂಪಾದ ಗಾಳಿ ನಮ್ಮೆಡೆಗಿ ಬೀಸಿ ನಮ್ಮ ದಣಿವನ್ನು ನೀಗಿಸಿದಂತಾಯಿತು. ಕೊನೆಗೂ ತುತ್ತ ತುದಿಯಿಂದ ಪ್ರಕೃತಿ ನೋಟವನ್ನು ಕಣ್ತುಂಬಿಕೊಳ್ಳುವ ಮಜವೇ ಬೇರೆಯಾಗಿತ್ತು. ಆ ಅನುಭವ ಇನ್ನು ನನ್ನಮನಸಿನಲ್ಲಿ ಅಚ್ಚು ಹೊಡೆದಂತಿದೆ.

ಇದಂತ್ತು ನನ್ನ ಜೀವನದಲ್ಲಿ ಹೊಸ ಅನುಭವವನ್ನು ಕೊಟ್ಟ ಚಾರಣ ಹಾಗೂ ಇನ್ನಷ್ಟು ಹುರುಪನ್ನು ನೀಡಿದ ವಿಶೇಷವಾದ ಚಾರಣವೆಂದರೆ ತಪ್ಪಾಗಲಾರದು.

ಚರಿಷ್ಮ ಕಾನವು

ಎಸ್.ಡಿ.ಎಂ ಉಜಿರೆ

ಟಾಪ್ ನ್ಯೂಸ್

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.