Bridge: ಇದಕ್ಕೆ ಏನ್ ಹೇಳೋಣ… ಸೇತುವೆ ನಿರ್ಮಾಣ ಆದರೂ ಜೀವಕ್ಕೆ ಮಾತ್ರ ಅಪಾಯ ತಪ್ಪಿಲ್ಲ…
Team Udayavani, Jul 15, 2024, 11:21 AM IST
ಚಿಕ್ಕಮಗಳೂರು: ದೂರದಿಂದ ನೋಡಿದಾಗ ಸೇತುವೆ ಇದೆಯಲ್ಲಾ ಎಂದು ಸಂತಸ ಪಟ್ಟರೆ ಹತ್ತಿರ ಬಂದಾಗ ಗೊತ್ತಾಗುತ್ತದೆ ಇದರ ಅಸಲಿಯತ್ತು, ಈ ಸೇತುವೆಯಲ್ಲಿ ಹೋಗುವುದು ಎಂದರೆ ಜೀವ ಕೈಯಲ್ಲಿ ಹಿಡಿಕೊಂಡು ಹೋದ ಹಾಗೆ ಯಾಕೆಂದರೆ ಈ ಕಬ್ಬಿಣದ ಸೇತುವೆಯಲ್ಲಿ ನಡೆದಾಡಲು ಮರದ ಹಲಗೆಯೇ ಇಲ್ಲ, ಇದು ಕೊಪ್ಪ ತಾಲೂಕಿನ ಅತ್ತಿಕೂಡಿಗೆ, ಅಬ್ಬಿಕಲ್ಲು ಗ್ರಾಮದ ಜನರ ಗೋಳು.
ಈ ಕಬ್ಬಿಣದ ಸೇತುವೆ ಮೂರೂ ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೂ ಹಲಗೆ ಮಾತ್ರ ಇದುವರೆಗೂ ಹಾಕಲಿಲ್ಲ ಈ ಪ್ರದೇಶದ ಜನ ಸೇತುವೆಯಲ್ಲಿರುವ ಎರಡು ಎರಡು ಅಡಿ ಉದ್ದದ ಕಬ್ಬಿಣದ ಪಟ್ಟಿಯ ಮೇಲೆ ಕಾಲಿಟ್ಟು ಸಾಗಬೇಕು ಒಂದು ವೇಳೆ ಕಾಲು ಜಾರಿದರೆ ಕೆಳಗೆ ಕಲ್ಲುಬಂಡೆಗಳಿಂದ ಕೂಡಿದ ಸಣ್ಣ ಜಲಪಾತಕ್ಕೆ ಬೀಳಬೇಕು.
ಅಷ್ಟು ಮಾತ್ರವಲ್ಲದೆ ಮಳೆಗಾಲ ಆರಂಭವಾದಾಗ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ ಜೊತೆಗೆ ಪ್ರವಾಸಿಗರು ಇಲ್ಲಿಗೆ ಬಂದು ಈ ಅರ್ಧಂಬರ್ಧ ಸೇತುವೆ ಮೇಲೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ, ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Rakshit Shetty: ಅನುಮತಿಯಿಲ್ಲದೆ ಹಾಡು ಬಳಕೆ ಆರೋಪ; ರಕ್ಷಿತ್ ಶೆಟ್ಟಿ ವಿರುದ್ಧ FIR ದಾಖಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi ಕ್ಯಾಬಿನೆಟ್ ಅಂದರೆ ಹೋದ ಸಿದ್ದ, ಬಂದ ಸಿದ್ದ: ಅಶೋಕ್
Cabinet Meeting: ಬೀದರ್, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
Bellary; ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ, ನಟ ಧನ್ವೀರ್, ಹೇಮಂತ್
Kalaburagi: ಪಡಿತರದಲ್ಲಿ ತೊಗರಿ ಬೇಳೆ ವಿತರಣೆಗೆ ಯೋಚನೆ: ಸಚಿವ ಮುನಿಯಪ್ಪ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.