UV Fusion: ಕಮರಿದ ಕನಸು ಮತ್ತೆ ಚಿಗುರಿದಾಗ


Team Udayavani, Jul 15, 2024, 1:25 PM IST

UV Fusion: ಕಮರಿದ ಕನಸು ಮತ್ತೆ ಚಿಗುರಿದಾಗ

ಪಿ.ಯು.ಸಿಯ ತನಕ ಕೇರಳದಲ್ಲೇ ವಿದ್ಯಾಭ್ಯಾಸ ಪೂರೈಸಿ ಉನ್ನತ ಶಿಕ್ಷಣಕ್ಕಾಗಿ ಹಾತೊರೆಯುವ ಅನೇಕ ಗಡಿನಾಡಿನ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಮಂಗಳೂರೆಂಬ ಮಾಯಾಬಜಾರ್‌, ಇದು ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ನಿಧಿಯಿದ್ದಂತೆ. ಪಟ್ಟಣದ ವಾತಾವರಣ, ವಾಹನ ದಟ್ಟಣೆ, ಎಲ್ಲೆಲ್ಲೂ ಜನಸಮೂಹ, ಪ್ರತಿಯೊಬ್ಬರ ಮೊಗದಲ್ಲೂ ತಮ್ಮ ಕನಸನ್ನು ನನಸಾಗಿಸುವ ಕಾತುರ… ಹೌದು, ಪ್ರಾಥಮಿಕ ಕಲಿಕೆಯನ್ನು ನನ್ನ ಊರಲ್ಲೇ ಮುಗಿಸಿ ಮುಂದಿನ ಶಿಕ್ಷಣಕ್ಕೆಂದು ಮಂಗಳೂರಿಗೆ ಬಂದವರಲ್ಲಿ ನಾನೂ ಒಬ್ಬ.

ಶಿಕ್ಷಣಕ್ಕಾಗಿ ಕುಡ್ಲಕ್ಕೆ ಕಾಲಿರಿಸಿದೆ. ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರವೇಶಾತಿಯನ್ನೂ ಪಡೆದೆ. ಅನುದಿನವೂ ಉಪನ್ಯಾಸಕರ ಪ್ರೋತ್ಸಾಹ ಹಾಗೂ  ಮಾರ್ಗದರ್ಶನದಿಂದ ನನ್ನಂತ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ
ಲವಲವಿಕೆಯಿಂದ ಇರುತ್ತಿದ್ದರು. ಕಲಿಕೆ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ನನಗೆ ವಿಪರೀತ ಆಸಕ್ತಿ ಇತ್ತು. ಹಲವಾರು
ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನನಗೆ, ಸಣ್ಣ ಅವಧಿಯ ವಿರಾಮ ದೊರೆತದ್ದು 2018 ರಲ್ಲಿ. ಅಪಘಾತದಿಂದಾಗಿ ನನ್ನ ಕಲಿಕೆಗೆ ಬ್ರೇಕ್‌ ಬಿತ್ತು.

ಈ ಸಂದರ್ಭದಲ್ಲಿ ಅಲ್ಲಿನ ಪ್ರಾಂಶುಪಾಲರು, ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರು ನನ್ನ ಮಾನಸಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಂಡರು. ಮೊಬೈಲ್‌ನಲ್ಲಿ ಗೆಳೆಯರೊಡನೆ ಪಟ್ಟಾಂಗ, ಕ್ಲಾಸ್‌ ಬಗ್ಗೆ ವಿಚಾರಣೆ ನನ್ನ ದಿನಚರಿಯಾಯಿತು. ರಜೆಯಲ್ಲಿ ಸ್ನೇಹಿತರು, ಉಪನ್ಯಾಸಕರು ಮನೆಗೆ ಆಗಮಿಸುತ್ತಿದ್ದರು. ಹಾಗಾಗಿ ರಜೆ ಸಿಕ್ಕಿತೆಂದರೆ ನನಗೆ ಖುಷಿಯೋ ಖುಷಿ…!

ಆರೋಗ್ಯದಲ್ಲಿ ಒಂದಷ್ಟು ಚೇತರಿಕೆ ಕಂಡಾಗ 2019ರಲ್ಲಿ ಮತ್ತೆ ಕಾಲೇಜಿಗೆ ಬರಲಾರಂಭಿಸಿದೆ. ಆಗ ಹೊಸ ಸ್ನೇಹಿತರು, ಹೊಸ ತರಗತಿಗಳು ಆದರೆ ಅದೇ ಕಾಲೇಜು, ಅದೇ ನೆಚ್ಚಿನ ಶಿಕ್ಷಕರು. ಹಿಂದೆಲ್ಲಾ ರೈಲಿನಲ್ಲಿ ಸ್ನೇಹಿತರೊಡನೆ ಪಟ್ಟಾಂಗ ಮಾಡುತ್ತಾ, ಗೇಲಿ ಮಾಡುತ್ತಾ ಕಾಲೇಜಿಗೆ ಬರುತ್ತಿದ್ದ ನನ್ನನ್ನು ಈ ಬಾರಿ ಕಾರಿನಲ್ಲಿ ಸ್ನೇಹಿತರು ಕರೆದುಕೊಂಡು ಬರುತ್ತಿದ್ದರು. ಕಾಲೇಜಿನಲ್ಲೂ ಸ್ನೇಹಿತರ ಮಹಾಪೂರ.

ನಡೆಯಲು ಕಷ್ಟಪಡುತ್ತಿದ್ದ ಸಮಯದಲ್ಲಿ ಆಪ್ತ ಸ್ನೇಹಿತರು ನನ್ನ ಸಹಾಯಕ್ಕೆ ಬಂದಿದ್ದರು. ಯಾವುದೇ ಸಂದರ್ಭದಲ್ಲಿ ನಾನು ನಿರಾಶನಾಗದಂತೆ ನೋಡಿಕೊಂಡರು. ಆದರೆ ಕಲಿಕೆ ಕಬ್ಬಿಣದ ಕಡಲೆಯಂತಾಯಿತು. ಮೊದಮೊದಲು ನನ್ನ ಅಂಕಗಳನ್ನು ನೋಡಿ ಅದೆಷ್ಟೋ ಬಾರಿ ಅತ್ತಿದ್ದೆ. ಹೇಗೋ ಶಿಕ್ಷಕರು, ಸ್ನೇಹಿತರು ನನ್ನನು ಮೇಲಕ್ಕೆತ್ತಿದರು. ಪದವಿಯೇನೋ ಮುಗಿಯಿತು.ನನ್ನ ಮನದಾಸೆಯಂತೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಅದೇ ಕಾಲೇಜಿನಲ್ಲಿ ಪಡೆದೆ.

ಗೆಳೆಯರ ಒಡನಾಟ, ಮಡಿಕೇರಿ ಪ್ರವಾಸ, ಕಾಲೇಜ್‌ ಡೇ ಗೆ ಹಾಡು, ಡಿಬೇಟ್‌ ಕಾಂಪಿಟೇಶನ್‌, ಹೀಗೆ ಹಲವಾರು ಸ್ಪರ್ಧೆಗಳಲ್ಲಿ
ಭಾಗವಹಿಸಿ ಹಳಿ ತಪ್ಪಿದ ಜೀವನ ಮತ್ತೆ ಹಳಿಗೆ ಬಂದಂತಾಯಿತು. ನನಗೆ ಪ್ರೇರಣೆ ದೊರೆತಿದ್ದು ಇಲ್ಲೇ. ಪ್ರಸ್ತುತ ಬಿ.ಎಡ್‌. ಪದವಿಯನ್ನು ಅಭ್ಯಾಸ ಮಾಡುತ್ತಿದ್ದು ಹೊಸ ವಾತಾವರಣ, ದೇಶದ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳ ಭೇಟಿ, ಗೆಳೆತನ ಮುಂದುವರಿಯಿತು.

ಶಿಕ್ಷಕರ ಪ್ರೋತ್ಸಾಹ, ಗೆಳೆಯರ ಒಡನಾಟ ನನಗೆ ಬಲ ತುಂಬಿದವು. ನನ್ನ ಬದುಕಿನ ಹಳಿ ತಪ್ಪಿದ ದಾರಿಯನ್ನು ಮತ್ತೆ ಹಳಿಯೆಡೆಗೆ
ತರುವಲ್ಲಿ ನನ್ನೆಲ್ಲಾ ಗುರುಗಳೂ ಮಹತ್ತರವಾದ ಪಾತ್ರವನ್ನಿಹಿಸಿದ್ದಾರೆ. ವಿಲಿಯಮ್‌ ರಾಬರ್ಟ್‌ ರವರು ಶಿಕ್ಷಕರ ಕುರಿತಾಗಿ ನುಡಿದಂತೆ ಬೋಧನೆ ನೀಡುವುದಕ್ಕಿಂತ ಹೆಚ್ಚು ಸ್ಫೂರ್ತಿದಾಯಕ ಬದಲಾವಣೆ. ಕಲಿಕೆ ಸತ್ಯಗಳನ್ನು ಹೀರಿಕೊಳ್ಳುವುದಕ್ಕಿಂತ ಹೆಚ್ಚು ಇದು ತಿಳುವಳಿಕೆಯನ್ನು ಪಡೆಯುವುದಾಗಿದೆ. ಅಂತಹ ನನ್ನೆಲ್ಲಾ ಶ್ರೇಷ್ಠ ಶಿಕ್ಷಕರಿಗೆ ಸಾವಿರ ಪ್ರಣಾಮಗಳು.

*ಶ್ರೀನಿವಾಸ ಪ್ರಸಾದ್ ಎಸ್‌, ಮಂಗಳೂರು

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.