Fraud ಅಡಿಕೆ ವ್ಯಾಪಾರಿಗೆ 8.98 ಲ.ರೂ. ವಂಚನೆ
Team Udayavani, Jul 15, 2024, 11:54 PM IST
ಮಂಗಳೂರು: ನಗರದ ಅಡಿಕೆ ವ್ಯಾಪಾರಿ, ಯೂಸುಫ್ ಎಂಬವರಿಗೆ 8.98 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ನಗರದ ಬೀಬಿ ಅಲಾಬಿ ರಸ್ತೆಯಲ್ಲಿ ಒಣ ಅಡಿಕೆ ವ್ಯಾಪಾರಿಯಾಗಿದ್ದು, ಗುಜರಾತ್ನ ಕಮಲೇಶ್ ಪಡಾಲಿಯಾ ಎಂಬಾತನಿಗೆ 72 ಮೂಟೆಗಳಲ್ಲಿ ತಲಾ 65 ಕೆ.ಜಿ.ಯಂತೆ 14,98,770 ರೂ.ಗಳಿಗೆ ಅಡಿಕೆ ಮಾರಾಟ ಮಾಡಿದ್ದರು. ಹಂತ ಹಂತವಾಗಿ 6 ಲ.ರೂ.ಗಳನ್ನು ಆರ್ಟಿಜಿಎಸ್ ಮೂಲಕ ಪಡೆದುಕೊಂಡಿದ್ದರು.
ಉಳಿದ 8,98,770 ರೂ.ಗಳನ್ನು ಪಾವತಿಸಿರಲಿಲ್ಲ. ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಆತನಿಗೆ ಬೈಕಂಪಾಡಿಯ ಎಪಿಎಂಸಿ ಯಾರ್ಡ್ನಲ್ಲಿ ಗೋದಾಮು ಇದ್ದು, ಅದನ್ನು ಮುಚ್ಚಲಾಗಿದೆ. ಆತನ ಗೋದಾಮಿ ನಲ್ಲಿದ್ದ ಸುಮಾರು 115 ಚೀಲ ಅಡಿಕೆಯನ್ನು ಆತನ ಸಂಬಂಧಿಕರಾದ ಭಗವಾನ ಜಿ. ಲಕ್ಷ್ಮೀದಾಸ್ ಹಿಂಸು ಮತ್ತು ದಿಲೀಪ್ ಕುಮಾರ್ ಲಕ್ಷ್ಮೀದಾಸ್ ಹಿಂಸು ಅವರ ಗೋದಾಮಿಗೆ ಹಸ್ತಾಂತರಿಸಿರುವುದು ಗೊತ್ತಾಗಿದೆ. ಪ್ರಸ್ತುತ ಮೂವರು ಕೂಡ ಗೋದಾಮನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.