Controversy;ಲೆಜೆಂಡ್ರಿ ಕ್ರಿಕೆಟಿಗರ ಡ್ಯಾನ್ಸ್‌:ಪ್ಯಾರಾ ಆ್ಯತ್ಲೀಟ್‌ಗಳಿಂದ ಕ್ಷಮೆಗೆ ಆಗ್ರಹ


Team Udayavani, Jul 16, 2024, 6:00 AM IST

1-asdsdasd

ಹೊಸದಿಲ್ಲಿ: ಮೊನ್ನೆಯಷ್ಟೇ ಪಾಕಿ ಸ್ಥಾನವನ್ನು ಮಣಿಸಿ “ವರ್ಲ್ಡ್ ಚಾಂಪಿ ಯನ್‌ ಶಿಪ್‌ ಆಫ್ ಲೆಜೆಂಡ್ಸ್‌’ ಪ್ರಶಸ್ತಿ ಜಯಿಸಿದ ಯುವ ರಾಜ್‌ ಸಿಂಗ್‌ ನೇತೃತ್ವದ ಭಾರತ ತಂಡ ವೀಗ ವಿವಾದದಲ್ಲಿ ಸಿಲುಕಿದೆ. ಸಂಭ್ರ ಮಾ ಚರಣೆಯ ವೇಳೆ ತಂಡದ ಕೆಲವು ಆಟಗಾರರು ಅಂಗ ವಿಕಲ ರಿಗೆ ಅವ ಮಾನ ಮಾಡಿದ ರೀತಿಯಲ್ಲಿ ನರ್ತಿಸಿದರು ಎಂಬ ಆರೋಪಕ್ಕೊಳಗಾಗಿದ್ದಾರೆ. ಪ್ಯಾರಾ ಆತ್ಲೀಟ್‌ಗಳ ಕೆಂಗಣ್ಣಿಗೆ ಗುರಿ ಯಾಗಿ ದ್ದಾರೆ.

ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಸುರೇಶ್‌ ರೈನಾ ಮೊದಲಾದವರ ಡ್ಯಾನ್ಸ್‌ ವೀಡಿಯೋ ಒಂದು ವೈರಲ್‌ ಆಗಿದೆ. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಇವರೆಲ್ಲ ವಿಕ್ಕಿ ಕೌಶಲ್‌ ಅಭಿನಯದ “ತೌಬಾ ತೌಬಾ’ ಹಾಡಿಗೆ ಕುಂಟುತ್ತ ಹೆಜ್ಜೆ ಹಾಕಿದ್ದರು. ಕಳೆದ ಒಂದು ತಿಂಗಳಿಂದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕಾರಣ ವಿಪರೀತ ದಣಿದಿದ್ದೇವೆ ಎಂಬುದನ್ನು ತೋರಿಸಲು ಯತ್ನಿಸಿದ್ದರು.

ಮುಜುಗರ ತಂದ ಡ್ಯಾನ್ಸ್‌
ಈ ವೀಡಿಯೋ ಭಾರತದ ಪ್ಯಾರಾ ಆ್ಯತ್ಲೀಟ್‌ ಗಳ ಅಸಮಾಧಾನಕ್ಕೆ ಕಾರಣವಾಗಿದೆ. ಪ್ಯಾರಾ ಸ್ವಿಮ್ಮರ್‌ ಶಮ್ಸ್‌ ಆಲಂ, ಬ್ಯಾಡ್ಮಿಂಟನ್‌ ಆಟಗಾರ್ತಿ ಮಾನ್ಸಿ ಜೋಶಿ ಮೊದಲಾದವರು ತೀವ್ರ ಆಕ್ರೋಶಗೊಂಡು ಪೋಸ್ಟ್‌ ಮಾಡಿದ್ದಾರೆ. ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

“ಭಾರತದ ಮಾಜಿ ಕ್ರಿಕೆಟಿಗರು ಅಂಗವಿಕಲರನ್ನು ಮುಜುಗರಕ್ಕೀಡು ಮಾಡಿದ್ದಾರೆ. ಸ್ಪರ್ಧೆಯ ಬಳಿಕ ದೇಹ ದಣಿದಿರುತ್ತದೆ ಎಂಬುದನ್ನು ನಾವು ಬಲ್ಲೆವು. ಆದರೆ ನೀವು ಇದನ್ನು ತಿಳಿಯಪಡಿಸಿದ ರೀತಿ ಅಂಗವಿಕಲ ಸಮುದಾಯವನ್ನು ಗೇಲಿ ಮಾಡಿದಂತಿದೆ’ ಎಂದು ಪೋಸ್ಟ್‌ ಮಾಡಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಇಂಡಿಯಾ ಆಕ್ರೋಶ
ಪ್ಯಾರಾಲಿಂಪಿಕ್ಸ್‌ ಇಂಡಿಯಾ ಕೂಡ ಇದಕ್ಕೆ ಕಠಿನ ವಾಗಿ ಪ್ರತಿಕ್ರಿಯಿಸಿದೆ. “ಕ್ರಿಕೆಟ್‌ನ ಸ್ಟಾರ್‌ ಸೆಲೆಬ್ರಿಟಿ ಗಳು ಸಕಾರಾತ್ಮಕ ಭಾವನೆ ಮೂಡಿಸುವ ಅತೀ ಮಹತ್ವದ ಜವಾಬ್ದಾರಿ ಹೊಂದಿರುತ್ತಾರೆ. ಆದರೆ ಅಂಗವಿಕಲರನ್ನು ಅನುಕರಿಸಿ ಅವರ ದೈಹಿಕ ನ್ಯೂನತೆಗಳನ್ನು ಗೇಲಿ ಮಾಡುವುದು ಸರಿ ಯಲ್ಲ. ನೀವಿದಕ್ಕೆ ಕ್ಷಮೆ ಕೇಳಬೇಕಿದೆ’ ಎಂದಿದೆ.

ಹರ್ಭಜನ್ ಸಮರ್ಥನೆ

ಏತನ್ಮಧ್ಯೆ, ಹರ್ಭಜನ್ ಈ ವೀಡಿಯೋ ಮಾಡಿರುವ ಕುರಿತುಸಮರ್ಥನೆ ನೀಡಿದ್ದಾರೆ. “ನಾವು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಮತ್ತು ಈ ವೀಡಿಯೊ 15 ದಿನಗಳ ಕಾಲ ಕ್ರಿಕೆಟ್ ಆಡಿದ ನಂತರ ನಮ್ಮ ದೇಹವನ್ನು ಪ್ರತಿಬಿಂಬಿಸಲು, ನಾವು ಯಾರನ್ನೂ ಅವಮಾನಿಸಲು ಅಥವಾ ಅಪರಾಧ ಮಾಡಲು ಪ್ರಯತ್ನಿಸುತ್ತಿಲ್ಲ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಎಲ್ಲರಿಗೂ ಪ್ರೀತಿಯಿಂದ ಮುಂದುವರಿಯೋಣ” ಎಂದು ಬರೆದಿದ್ದಾರೆ.

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwq-eewq

T20: ಹೆಡ್‌ ಆಟಕ್ಕೆ ತಲೆಬಾಗಿದ ಇಂಗ್ಲೆಂಡ್‌

1-gggg

Greater Noida ಟೆಸ್ಟ್‌: 4ನೇ ದಿನವೂ ಮಳೆಯಾಟ

1-rewdd

Paralympics; ಪದಕ ಗೆದ್ದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

1-rrr

ರಾಷ್ಟ್ರೀಯ ಸೀನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌:ಮೆಡ್ಲೆ ರಿಲೇಯಲ್ಲಿ ತಮಿಳುನಾಡು ದಾಖಲೆ

1-hockey

Asian Champions Trophy ಹಾಕಿ: ಸತತ ನಾಲ್ಕನೇ ಪಂದ್ಯ ಗೆದ್ದ ಭಾರತ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.