Kerala:ಬಂಕ್ ನಲ್ಲಿ ಪೆಟ್ರೋಲ್ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ
Team Udayavani, Jul 16, 2024, 4:48 PM IST
ಕಣ್ಣೂರು(ಕೇರಳ): ಕಾರಿಗೆ ಪೆಟ್ರೋಲ್ ತುಂಬಿಸಿಕೊಂಡ ನಂತರ ಹಣ ಕೊಡದೇ ತೆರಳುತ್ತಿದ್ದ ಪೊಲೀಸ್ ಡ್ರೈವರ್ ಬಳಿ ಪೆಟ್ರೋಲ್ ಪಂಪ್ ನೌಕರ ಹಣ ಪಾವತಿಸಲು ಹೇಳಿದಾಗ, ಏಕಾಏಕಿ ಚಲಾಯಿಸಿಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ನೌಕರ ಕಾರಿನ ಬಾನೆಟ್ ಹಿಡಿದುಕೊಂಡಿದ್ದು, ಆತನ ಕೊಲೆಗೆ ಯತ್ನಿಸಿರುವ ಘಟನೆ ಕಣ್ಣೂರಿನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪೊಲೀಸ್ ನನ್ನು ಬಂಧಿಸಿದ್ದು, ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಲೆ ಯತ್ನ ಪ್ರಕರಣದಡಿ ಬಂಧಿಸಿ, ವಿವಿಧ ಸೆಕ್ಷನ್ ಗಳನ್ನು ದಾಖಲಿಸಲಾಗಿದೆ ಎಂದು ಕಣ್ಣೂರು ನಗರ ಪೊಲೀಸ್ ಆಯುಕ್ತ ಅಜಿತ್ ಕುಮಾರ್ ತಿಳಿಸಿದ್ದಾರೆ.
#SHOCKING : Kerala police driver drives car with petrol pump staff on bonnet when asked to pay.
Kerala police driver K Santhosh Kumar was arrested for attempted murder after hitting petrol pump employee Anil and driving nearly a kilometer with him on the bonnet over unpaid fuel.… pic.twitter.com/q45M7rVxTm
— upuknews (@upuknews1) July 15, 2024
ಭಾನುವಾರ ಸಂಜೆ ಪೆಟ್ರೋಲ್ ಬಂಕ್ ಗೆ ಕಾರಿನಲ್ಲಿ ಆಗಮಿಸಿದ್ದ ಪೊಲೀಸ್ ಹಣ ನೀಡದೇ ತೆರಳುತ್ತಿದ್ದ ಸಂದರ್ಭದಲ್ಲಿ, ಆತನನ್ನು ಅಡ್ಡಗಟ್ಟಿದ ನೌಕರ ಅನಿಲ್ ಮೇಲೆ ಹಲ್ಲೆ ನಡೆಸಿದ್ದ. ಅಷ್ಟೇ ಅಲ್ಲ ಕಾರಿನ ಬಾನೆಟ್ ಮೇಲಿದ್ದ ನೌಕರನನ್ನು ಪೊಲೀಸ್ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಎಳೆದೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Frog Leg: ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆ… ಕಂಗಾಲಾದ ಗ್ರಾಹಕ, ವಿಡಿಯೋ ವೈರಲ್
ಅಕ್ರಮ ಮದ್ಯದ ನಾಶದ ವೇಳೆಯೇ ಬಾಟಲಿ ದೋಚಿದ ಮದ್ಯಪ್ರಿಯರು, ಪೊಲೀಸರು ತಬ್ಬಿಬ್ಬು!
Rare case; ಅವಳಿ ಮಕ್ಕಳಿಗೆ ಜನ್ಮ ನೀಡಿದ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆ
ID Card ಇಲ್ಲದೇ ರೂಂ ಕೊಡಲ್ಲ ಎಂದ ಮ್ಯಾನೇಜರ್ ಗೆ ಹಿಗ್ಗಾಮುಗ್ಗಾ ಥಳಿತ: ನಾಲ್ವರ ಬಂಧನ
Viral Video: ಮಗಳ ರಕ್ಷಣೆಗಾಗಿ ತಲೆ ಮೇಲೆ ಸಿಸಿಟಿವಿ ಅಳವಡಿಸಿದ ತಂದೆ.! ಎಲ್ಲಿ ಇದು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.