Cricket ವೇಳೆ ತಂಬಾಕು ಜಾಹೀರಾತು: ಆರೋಗ್ಯ ಸಚಿವಾಲಯ ಆತಂಕ
Team Udayavani, Jul 17, 2024, 6:17 AM IST
ಹೊಸದಿಲ್ಲಿ: ಕ್ರಿಕೆಟ್ನಿಂದ ತಂಬಾಕು ಕಂಪೆನಿಯ ಪ್ರಾಯೋಜಕರು ದೂರಗೊಂಡರೂ ಬೇರೊಂದು ಮಾರ್ಗದಲ್ಲಿ ಈ ಉತ್ಪನ್ನಗಳ ಪ್ರಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಕ್ರಿಕೆಟ್ ಪಂದ್ಯಗಳ ವೇಳೆ ಸ್ಟೇಡಿಯಂಗಳಲ್ಲಿ ತಂಬಾಕು ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಈ “ನಂಟು’ ಬೆಸೆದಿದೆ. ಇಂಥ ಜಾಹೀರಾತುಗಳನ್ನು ನಿಷೇಧಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದ್ದು, ಬಿಸಿಸಿಐ ಜತೆ ಮಾತುಕತೆ ನಡೆಸುವುದಾಗಿ ಹೇಳಿದೆ.
ಬಿಸಿಸಿಐ ಹಿಂದೆ ಬಿದ್ದಿರುವ ಕೆಲವು ತಂಬಾಕು ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಬಳಸಿಕೊಳ್ಳುತ್ತಿವೆ. ಭಾರತದಲ್ಲಿ ನಡೆದ ಕಳೆದ ವರ್ಷದ ಏಕದಿನ ವಿಶ್ವಕಪ್ ಕೂಟದ ಕೊನೆಯ 17 ಪಂದ್ಯಗಳ ವೇಳೆ ತಂಬಾಕು ಜಾಹೀರಾತುಗಳನ್ನು ತೋರಿಸಲಾಗಿದೆ ಎಂಬುದಾಗಿ ವರದಿಯಾಗಿದೆ.
ಇದರಿಂದ ತಂಬಾಕು ದುಶ್ಚಟಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಆರೋಗ್ಯ ಸಚಿವಾಲಯದ ಆತಂಕ. ಇಂಥ ಜಾಹೀರಾತುಗಳನ್ನು ನಿಷೇಧಿಸುವ ಕುರಿತು ಬಿಸಿಸಿಐ ಜತೆ ಕೇಂದ್ರ ಆರೋಗ್ಯ ಸಚಿವಾಲಯ ಶೀಘ್ರ ಮಾತುಕತೆ ನಡೆಸಲಿದೆ ಎಂಬುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.