Sirsi- Kumta road; ಮಳೆ ಬಾರದೇ ಇದ್ದರೆ ಇಂದು ಸಂಜೆ ಸಂಚಾರಕ್ಕೆ ಮುಕ್ತ!
Team Udayavani, Jul 17, 2024, 10:24 AM IST
ಶಿರಸಿ: ಗುಡ್ಡ ಕುಸಿದು ಕಳೆದ 35 ಗಂಟೆಗಳಿಂದ ಶಿರಸಿ- ಕುಮಟಾ ಸಂಪರ್ಕ ಕಡಿತಗೊಳಿಸಿದ್ದ ರಾಷ್ಟ್ರೀಯ ಹೆದ್ದಾರಿ 766 ಇ ಸಂಚಾರಕ್ಕೆ ಬುಧವಾರ(ಜುಲೈ 17) ಸಂಜೆ ವೇಳೆಗೆ ತೆರವಾಗುವ ಸಾಧ್ಯತೆ ಇದೆ.
ಕಳೆದ 24 ಗಂಟೆಗಳಿಂದ ನಿರಂತರವಾಗಿ ಮಳೆ ಮಧ್ಯೆ ಜೆಸಿಸಿ, ಹಿಟಾಚಿ ಬಳಸಿ ತೆರವು ಮಾಡಲಾಗುತ್ತಿದೆ. ಆದರೆ ಮೊಗೆದಷ್ಟೂ ಮಣ್ಣು, ಧರೆಯ ಮೇಲಿನ ಗಿಡಮರಗಳು ಜಾರಿ ಬರುತ್ತಿರಯವದರಿಂದ ನಿರೀಕ್ಷೆಯಂತೆ ತೆರವಿಗೆ ಸಾಧ್ಯವಾಗಿರಲಿಲ್ಲ.
ಸೋಮವಾರ ರಾತ್ರಿ 1:45 ರ ನಂತರ ಮಂಗಳವಾರ ಮಣ್ಣು, ಮರ ಗಿಡಗಳ ತೆರವು ನಡೆದಿತ್ತು. ಬುಧವಾರ ಬೆಳಗ್ಗಿನಿಂದಲೇ ಮತ್ತೆ ಕೆಲಸ ಆರಂಭವಾಗಿದ್ದು, ಸಂಜೆ ಆರೇಳು ಗಂಟೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಬುಧವಾರ ಮಳೆ ಬಾರದೇ ಹೋದರೆ ಮಣ್ಣು ಜರಿಯುವದು ನಿಲ್ಲಬಹುದು. ಮಳೆ ಆಧರಿಸಿ ಸಾಧ್ಯತೆ ಗೊತ್ತಾಗಲಿದೆ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಸಿದ್ದಾರೆ. ಈ ಮಧ್ಯೆ ಕೊರೆದ ಧರೆಯ ನಡುವೆ ಒರತೆ ನೀರೂ ಬರುತ್ತಿದ್ದು, ಇದೂ ಗುಡ್ಡವನ್ನು ಜಾರಿಸಲು ಕಾರಣ ಆಗುತ್ತಿದೆ ಎನ್ನಲಾಗಿದೆ. ವೈಜ್ಞಾನಿಕವಾಗಿ ಸಾಗರ ಮಾಲಾ ಯೋಜನೆಯಲ್ಲಿ ಹೆದ್ದಾರಿ ಅಗಲೀಕರಣ, ಧರೆ ಕತ್ತರಿಸುವಲ್ಲಿ ವಿಫಲ ಆಗಿದ್ದೇ ಇದಕ್ಕೆ ಸಮಸ್ಯೆ ಎನ್ನಲಾಗಿದೆ.
ಶಿರಸಿ ನಿಲೇಕಣಿ ಬಳಿ ಹಾಗೂ ದಿವಗಿ ಬಳಿ ಬದಲಿ ಮಾರ್ಗ ಸೂಚಿಸಲಾಗಿದೆ. ಶಿರಸಿಯಿಂದ ಕರಾವಳಿಗೆ ಯಲ್ಲಾಪುರ ಅಂಕೋಲಾ, ಶಿರಸಿ ಯಾಣ ಮಾರ್ಗ ಅಥವಾ ಸಿದ್ದಾಪುರ ಬಡಾಳ ಘಟ್ಟದಲ್ಲಿ ಸಂಚಾರಕ್ಕೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.