ನಿರ್ದೇಶಕರ ಜತೆ ಭಿನ್ನಾಭಿಪ್ರಾಯ; ವಿದೇಶಕ್ಕೆ ತೆರಳಿದ್ರಾ ಅಲ್ಲು? ಈ ವರ್ಷ ʼPushpa 2ʼ ಡೌಟ್!
Team Udayavani, Jul 17, 2024, 1:29 PM IST
ಹೈದರಾಬಾದ್: ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಬೇಕಿರುವ ಬಹುದೊಡ್ಡ ಸಿನಿಮಾಗಳಲ್ಲಿ ಒಂದಾಗಿರುವ ʼಪುಷ್ಪ-2ʼ (Pushpa 2) ರಿಲೀಸ್ ಗಾಗಿ ಕಾಯುತ್ತಿದ್ದ ಫ್ಯಾನ್ಸ್ ಗಳಿಗೆ ಭಾರೀ ನಿರಾಸೆ ಉಂಟಾಗಿದೆ.
ಆಗಸ್ಟ್ 15 ರಂದು ರಿಲೀಸ್ ಆಗಬೇಕಿದ್ದ ಚಿತ್ರವನ್ನು ಡಿಸೆಂಬರ್ ನಲ್ಲಿ ರಿಲೀಸ್ ಮಾಡಲಾಗುತ್ತದೆನ್ನುವ ಸುದ್ದಿ ಚರ್ಚೆಯಲ್ಲಿರುವಾಗಲೇ ಇದೀಗ ರಿಲೀಸ್ ಡೇಟ್ ಬಗ್ಗೆ ಮತ್ತೊಂದು ವಿಚಾರ ಟಾಲಿವುಡ್(Tollywood) ವಲಯದಲ್ಲಿ ಹರಿದಾಡಿದೆ.
ʼಪುಷ್ಪʼ ಸಿನಿಮಾದ ಸೀಕ್ವೆಲ್ ರಿಲೀಸ್ಗಾಗಿ ಕಳೆದ ಎರಡೂವರೆ ವರ್ಷದಿಂದ ಅಲ್ಲು ಅರ್ಜುನ್ (Allu Arjun) ಫ್ಯಾನ್ಸ್ ಗಳು ಕಾದು ಕಾದು ಸುಸ್ತುಗೊಂಡಿದ್ದಾರೆ. ಇನ್ನೇನು ರಿಲೀಸ್ ಆಗಲು ಕೆಲವೇ ತಿಂಗಳು ಇರುವಾಗಲೇ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ.
ಸಿನಿಮಾದ ಚಿತ್ರೀಕರಣ ತಡವಾಗುತ್ತಿದೆ ಇದೇ ವಿಚಾರ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ (Director Sukumar) ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಅಲ್ಲು ಅರ್ಜುನ್ ಆದಷ್ಟು ಬೇಗ ಶೂಟ್ ಮುಗಿಸಲು ಹೇಳುತ್ತಿದ್ದಾರೆ ಆದರೆ ಇದಕ್ಕೆ ನಿರ್ದೇಶಕರು ಸಾಕಷ್ಟು ಸಮಯವನ್ನು ತೆಗದುಕೊಳ್ಳುತ್ತಿದ್ದಾರೆ. ನಿರ್ದೇಶಕ ಹಾಗೂ ಅಲ್ಲು ಅರ್ಜುನ್ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದ್ದಂತೆ ಅಲ್ಲು ಅರ್ಜುನ್ ಸಿನಿಮಾಕ್ಕಾಗಿ ಬಿಟ್ಟಿದ್ದ ಗಡ್ಡವನ್ನು ಟ್ರಿಮ್ ಮಾಡಿ ಫ್ಯಾಮಿಲಿಯೊಂದಿಗೆ ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎನ್ನುವ ಮಾತು ಟಾಲಿವುಡ್ ನಲ್ಲಿ ಗುಲ್ಲಾಗಿದೆ.
ಚಿತ್ರೀಕರಣ ತಡ ಅಗುತ್ತಿದೆ ಹೀಗಾಗಿ ಅಲ್ಲು ಅರ್ಜುನ್ ಅವರು ಕುಟುಂಬದೊಂದಿಗೆ ಯೂರೋಪ್ ಗೆ ತೆರಳಿದ್ದಾರೆ. ಅವರು ಗಡ್ಡವನ್ನು ಟ್ರಿಮ್ ಮಾಡಿಕೊಂಡು ವಿಮಾನದಲ್ಲಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ನಿರ್ದೇಶಕರು ಕೂಡ ಅಮೆರಿಕಾಕ್ಕೆ ಪಯಣ ಬೆಳೆಸಿದ್ದಾರೆ ಎನ್ನಲಾಗಿದೆ. ಕೆಲವೊಂದು ಮೂಲಗಳ ಪ್ರಕಾರ ʼಪುಷ್ಪ-2ʼ ಸಿನಿಮಾ ಈ ವರ್ಷ ರಿಲೀಸ್ ಆಗೋದೇ ಅನುಮಾನ ಎನ್ನಲಾಗುತ್ತಿದೆ.
ಆದರೆ ಅಲ್ಲು ಅರ್ಜುನ್ ಅವರ ಗಡ್ಡ ಟ್ರಿಮ್ ಮಾಡಿರುವ ವಿಡಿಯೋ ನೋಡಿ ಕೆಲವರು ಈ ಲುಕ್ ʼಪುಷ್ಪ-2ʼ ಗಾಗಿ ಬಿಟ್ಟಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಬಹುನಿರೀಕ್ಷಿತ ʼಪುಷ್ಪ-2ʼ ಅಲ್ಲು ಜೊತೆ ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್ , ಅನಸೂಯಾ ಭಾರದ್ವಾಜ್, ಸುನಿಲ್, ರಾವ್ ರಮೇಶ್ ಮತ್ತು ಜಗದೀಶ್ ಮುಂತಾದವರು ನಟಿಸಿದ್ದಾರೆ.
#AlluArjun has trimmed the beard!
What about #Pushpa2TheRule and its continuity now?
The film is already in trouble for multiple reasons and this is an add on. As per the latest rumours, everything is not ok between #Sukumar and Bunny. pic.twitter.com/gp3qxx1UBo
— KLAPBOARD (@klapboardpost) July 17, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಹಿಟ್ ಲವ್ ಸ್ಟೋರಿ ʼ96ʼ ಸೀಕ್ವೆಲ್ ಕನ್ಫರ್ಮ್; ನಿರ್ದೇಶಕರು ಹೇಳಿದ್ದೇನು?
Dosa King: ಜೊತೆಯಾಗಲಿದ್ದಾರೆ ಹೇಮಂತ್ – ಜ್ಞಾನವೇಲ್; ತೆರೆಗೆ ಬರಲಿದೆ ʼಸರವಣ ಭವನ್ ಕೇಸ್ʼ
Salaar 2: ಪ್ರಭಾಸ್ – ಪ್ರಶಾಂತ್ ʼಸಲಾರ್-2ʼನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್?
OTT release: ಕೀರ್ತಿ ಸುರೇಶ್ ʼರಘು ತಾತʼ ಓಟಿಟಿ ರಿಲೀಸ್ಗೆ ಡೇಟ್ ಲಾಕ್
Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್: ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.