Thirthahalli ಅಬ್ಬರಿಸುತ್ತಿರುವ ವರುಣ ! ಸಂಬಂಧ ಪಟ್ಟ ಅಧಿಕಾರಿಗಳು ಗಮನಿಸಲಿ..!
ಮಳೆ ಹಾನಿ ಸಂಬಂಧ ಪಟ್ಟ ಸಾರ್ವಜನಿಕ ಅನುಕೂಲಕ್ಕಾಗಿ ಸಹಾಯವಾಣಿ ತಕ್ಷಣ ತೆರೆಯುವಂತೆ ಸಾರ್ವಜನಿಕರಿಂದ ಆಗ್ರಹ
Team Udayavani, Jul 17, 2024, 4:55 PM IST
ತೀರ್ಥಹಳ್ಳಿ:ಮಲೆನಾಡಿನಾದ್ಯಂತ ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.ತುಂಗಾ ನದಿಯ ನೀರು ಅಪಾಯ ಮಟ್ಟ ತಲುಪಿದೆ.ತೀರ್ಥಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಅನಾಹುತಗಳು ಸಂಭವಿಸುತ್ತಿವೆ. ಈ ನಡುವೆ ತಾಲೂಕು ಆಡಳಿತ ಮಳೆಗಾಗಿ ಆರಂಭಿಸುವ ಸಹಾಯವಾಣಿಯನ್ನು ಇನ್ನು ಪ್ರಾರಂಭಿಸಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಜೊತೆಗೆ ಕಾಡು ಅರಣ್ಯಗಳಿಂದ ಕೂಡಿರುವ ಕಾರಣ ಅನಾಹುತಗಳು ಪ್ರತಿ ವರ್ಷ ನಡೆಯುತ್ತಿವೆ. ಇನ್ನೂ ಅನೇಕ ಕಡೆ ರಸ್ತೆ ಮೇಲೆ ನೀರು ನುಗ್ಗುವುದರಿಂದ ಅನಾಹುತ ಸಂಭವಿಸುತ್ತವೆ.
ಹೀಗಾಗಿ ಅಧಿಕಾರಿಗಳ ಮಟ್ಟದಲ್ಲಿ ತಾಲೂಕು ಆಡಳಿತ ಸಹಾಯವಾಣಿಯನ್ನು ರಚಿಸಬೇಕಿದೆ. ಆದರೆ ಈವರೆಗೆ ಸಹಾಯವಾಣಿ ರಚನೆ ಆಗಿಲ್ಲ, ಇದರಿಂದಾಗಿ ಅನಾಹುತದಲ್ಲಿ ಸಿಲುಕಿದ್ದವರು ಅಥವಾ ತೊಂದರೆಗೀಡಾದವರು ಯಾರಿಗೆ ಕರೆ ಮಾಡಬೇಕೆಂಬ ಪ್ರಶ್ನೆ ಕೂಡ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಸ್ಥಳೀಯ ಆಡಳಿತಗಳು ಕೂಡ ಅಂದರೆ ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಕೂಡ ಈ ಸಂದರ್ಭದಲ್ಲಿ ಒಂದು ಸಹಾಯವಾಣಿಯನ್ನು ತೆರೆಯಬೇಕು. ಜೊತೆಗೆ ತಾಲೂಕು ಆಡಳಿತ ಎಲ್ಲರ ದೂರನ್ನು ಕೇಳಲು 24*7 ಸಹಾಯವಾಣಿಯನ್ನು ತೆರೆಯಬೇಕು.ಈ ಮೂಲಕ ಮಳೆಗಾಲದಲ್ಲಿ ಆಗುವಂತಹ ಅನಾಹುತಗಳಿಗೆ ತಕ್ಷಣ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Order: ಲೈಂಗಿಕ ದೌರ್ಜನ್ಯ ಸಾಬೀತು; 70 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ!
Sagara: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ವಿದೇಶಿ ಪ್ರವಾಸಿಗರಿಂದ ಭರ್ಜರಿ ಸ್ಟೆಪ್
Udupi ಶಾಸಕರ ವಿರುದ್ಧ ಕೇಸ್ ದಾಖಲಿಸಿದ್ದು ಖಂಡನೀಯ: ಡಾ| ಸರ್ಜಿ
Hosanagar: ಅಡಗೋಡಿ ಶ್ರೀಮೂಕಾರ್ತೇಶ್ವರ ದೇಗುಲದ ಶಿವಲಿಂಗ 14-15ನೇ ಶತಮಾನದ್ದು!
Hosanagar; ಮಾಣಿ ಜಲಾಶಯ:ವಾರಾಹಿ,ಹಾಲಾಡಿ ನದಿಪಾತ್ರದ ವಾಸಿಗಳಿಗೆ ಅಂತಿಮ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.