ಒಂದು ಸಿನಿಮಾ ಮಾಡಿ ಮುಂದಿನ ಸಲ್ಮಾನ್‌, ಶಾರುಖ್‌ ಎನ್ನಿಸಿಕೊಂಡಿದ್ದಾತ ದಿಢೀರ್‌ ನಾಪತ್ತೆ..!

ರಾತ್ರೋ ರಾತ್ರಿ ಸೂಪರ್‌ ಸ್ಟಾರ್‌ ಆಗಿದ್ದಾತನಿಗೆ ಆಗಿದ್ದೇನು?

ಸುಹಾನ್ ಶೇಕ್, Jul 17, 2024, 7:21 PM IST

14

ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಎಷ್ಟೋ ಮಂದಿ ದಿನ ರಾತ್ರಿಯನ್ನದೆ ಅಲೆದಾಡುತ್ತಾರೆ. ಇದರಲ್ಲಿ ಕೆಲ ಮಂದಿಗೆ ಅವಕಾಶದ ಬಾಗಿಲು ತೆರೆದೆರೆ ಇನ್ನು ಕೆಲವರು ಅವಕಾಶ ವಂಚಿತರಾಗಿಯೇ ಉಳಿದು ಬಿಡುತ್ತಾರೆ.

ಚಿತ್ರರಂಗದಲ್ಲಿ ಅವಕಾಶ ಸಿಕ್ಕಿ, ಸ್ಟಾರ್‌ ಪಟ್ಟ ಸಿಕ್ಕ ಬಳಿಕ ಎಲ್ಲವನ್ನೂ ಬಿಟ್ಟು ದೂರ ದೂರಿಗೆ ಹೋಗಿ ನೆಲೆಸಿದ ಕಲಾವಿದನ ಸ್ಟೋರಿಯಿದು.

ನಕುಲ್ ಕಪೂರ್ (Nakul Kapoor). 2001 -2002ರ ಸಮಯದಲ್ಲಿ ಬಾಲಿವುಡ್‌ ನ (Bollywood) ಬಣ್ಣದ ಲೋಕದಲ್ಲಿ ಚಾಕ್ಲೇಟ್‌ ಬಾಯ್‌ ಆಗಿ ಮೆರೆದ ನಟ ಈತ. ಚಿತ್ರರಂಗಕ್ಕೆ ಕಾಲಿಡುವ ಮುನ್ನ ನಕುಲ್‌ ಮಿಂಚಿದ್ದು 1998ರಲ್ಲಿ ಬಂದ ಮ್ಯೂಸಿಕ್‌ ವಿಡಿಯೋ ಆಲ್ಬಂನಲ್ಲಿ. ʼಹೋ ಗಯಿ ಹೈ ಮೊಹಬ್ಬತ್ ತುಮ್ಸೆʼ ಎನ್ನುವ ಮ್ಯೂಸಿಕ್‌ ವಿಡಿಯೋದಲ್ಲಿ ಹ್ಯಾಂಡ್ಸಮ್‌ ಹುಡುಗನಾಗಿ, ಲವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದರು.

2001ರಲ್ಲಿ ʼಆಜಾ ಮೇರೆ ಯಾರ್ʼ ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾದಲ್ಲಿ ನಕುಲ್‌ ಗಮನ ಸೆಳೆಯುತ್ತಾರೆ. ಆದರೆ  ಅದಕ್ಕೂ ಹೆಚ್ಚು ಸಿನಿ ಪ್ರೇಕ್ಷಕರಿಗೆ ನಕುಲ್‌ ಇಷ್ಟವಾಗುವುದು ಅವರ ಮುಂದಿನ ಸಿನಿಮಾದ ಮೂಲಕ.

ದೀಪಕ್‌ ಆನಂದ್‌ ನಿರ್ದೇಶನ ಮಾಡಿದ, 2002ರಲ್ಲಿ ಬಂದ “ತುಮ್ ಸೆ ಅಚ್ಚಾ ಕೌನ್ ಹೈ” (Tum Se Achcha Kaun Hai) ಎನ್ನುವ ಪ್ರೇಮ ಕಥೆಯ ಸಿನಿಮಾ ನಕುಲ್‌ ಅವರಿಗೆ ದೊಡ್ಡ ನೇಮ್‌ – ಫೇಮ್‌ ತಂದುಕೊಟ್ಟಿತು. ಈ ಸಿನಿಮಾ ರಾತ್ರೋ ರಾತ್ರಿ ಸ್ಟಾರ್‌ ಪಟ್ಟವನ್ನು ತಂದುಕೊಟ್ಟಿತು.

ಪ್ರೇಮಾ ಕಥೆಯ ಸಿನಿಮಾದಲ್ಲಿ ನಟಿಸಿದ ನಕುಲ್‌ ಅವರನ್ನು ಜನ ಮುಂದಿನ ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್ ಇವರೇ ಎಂದು ಕರೆಯಲು ಶುರು ಮಾಡಿದರು. ಅಂದು ಮಾಧ್ಯಮಗಳಲ್ಲೂ ಇದೇ ವಿಚಾರ ಹೆಚ್ಚು ಹರಿದಾಡಿತ್ತು.

“ತುಮ್ ಸೆ ಅಚ್ಚಾ ಕೌನ್ ಹೈ”  ಸಿನಿಮಾದಲ್ಲಿ ಆರತಿ ಚಾಬ್ರಿಯಾ, ರುಚಿ ಬಫ್ನಾ, ಕಿಮ್ ಶರ್ಮಾ ಮತ್ತು ರತಿ ಅಗ್ನಿಹೋತ್ರಿ ಮುಂತಾದವರು ನಟಿಸಿದ್ದರು.

ಒಂದೇ ಒಂದು ಸಿನಿಮಾದಿಂದ ಫೇಮ್‌ ಆ ಬಳಿಕ ದಿಢೀರ್ ನಾಪತ್ತೆ.. “ತುಮ್ ಸೆ ಅಚ್ಚಾ ಕೌನ್ ಹೈ” ಸಿನಿಮಾವನ್ನು ನೋಡಿ ಜನ ಈ ಹುಡುಗ ಮುಂದೆ ಬಾಲಿವುಡ್‌ ನಲ್ಲಿ ಕಮಾಲ್‌ ಮಾಡುತ್ತಾನೆ ಎನ್ನುವ ಮಾತುಗಳನ್ನಾಡುತ್ತಿದ್ದರು. ಆದರೆ ತನ್ನ ಮೊದಲ ಸಿನಿಮಾದ ಬಳಿಕ ನಕುಲ್‌ ಇದ್ದಕ್ಕಿದ್ದಂತೆ ಇಂಡಸ್ಟ್ರಿ ಬಿಟ್ಟು ನಾಪತ್ತೆ ಆಗಿದ್ದರು.

ಕೆಲ ಸಮಯದ ಬಳಿಕ ನಕುಲ್‌ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಅಪಘಾತವೊಂದರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಕೆಲವೆಡೆ ಹರಿದಾಡಲು ಶುರುವಾದರೆ, ಇನ್ನೂ ಕೆಲವೆಡೆ ಅನಾರೋಗ್ಯದಿಂದ ನಕುಲ್‌ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಿತು.

ಈ ಸುದ್ದಿಗಳು ಎಲ್ಲೆಡೆ ಹಬ್ಬಿದಾಗ ಅದೊಂದು ದಿನ ನಕುಲ್‌ ಪ್ರತ್ಯಕ್ಷವಾಗಿ ತನಗೇನೂ ಆಗಿಲ್ಲ. ನಾನು ಬದುಕಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಆಧ್ಯಾತ್ಮಿಕತೆ ಮತ್ತು ಧ್ಯಾನದ ಕಡೆ ಒಲವು ಬೆಳೆಸಿಕೊಂಡಿದ್ದ ಅವರು ಇಂದು ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

ಇಂದು ಅವರು ಕೆನಡಾದಲ್ಲಿ ‘ಡಿವೈನ್ ಲೈಟ್’ ಎನ್ನುವ ತಮ್ಮ ಯೋಗ ಕೇಂದ್ರದಲ್ಲಿ ಯೋಗವನ್ನು ಅಭ್ಯಾಸ ಮಾಡುವುದರ ಜೊತೆಗೆ ಯೋಗವನ್ನು ಕಲಿಸುವ ತರಬೇತಿದಾರರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ.

ಚಿತ್ರರಂಗದಿಂದ ಹತ್ತಾರು ವರ್ಷದಿಂದ ದೂರವಿದ್ದರೂ ಅವರ ಒಂದು ಸಿನಿಮಾದಿಂದ ಅವರನ್ನು ಇಂದಿಗೂ ಬಾಲಿವುಡ್‌ ನಲ್ಲಿ ಗುರುತಿಸಲಾಗುತ್ತದೆ.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.