![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jul 17, 2024, 11:27 PM IST
ಬ್ರಹ್ಮಾವರ: ಹೇರೂರು ಗ್ರಾಮದ ನಿವಾಸಿ ರೇಖಾ ಚೌಧರಿ ಅವರ ಮನೆಯಿಂದ ಚಿನ್ನಾಭರಣ ಕಳವಾಗಿದೆ. ಎ.16ರಂದು ಬ್ರಹ್ಮಾವರದಲ್ಲಿ ನಡೆದ ಕಾರ್ಯಕ್ರಮಕ್ಕೆ ವಿವಿಧ ಆಭರಣಗಳನ್ನು ಧರಿಸಿ ಹೋಗಿದ್ದು, ಮರಳಿ ಬಂದ ಮೇಲೆ ಅವುಗಳನ್ನು ಮನೆಯ ಲಾಕರ್ನಲ್ಲಿ ಇಟ್ಟಿದ್ದರು. ಜು.6ರಂದು ಲಾಕರ್ ಬೀಗ ತೆಗೆದು ನೋಡುವಾಗ ಚಿನ್ನಾಭರಣ ಕಳವಾಗಿರುವುದು ತಿಳಿದು ಬಂದಿದೆ.
ಈ ನಡುವೆ ಮನೆಯಲ್ಲಿ ಮನೆಕೆಲಸ ಹಾಗೂ ಅಡುಗೆ ಮಾಡಿಕೊಡಲು ಉಳಿದುಕೊಂಡಿದ್ದ ಉತ್ತರಾಖಂಡದ ಜಸ್ವೀರ್ ಸಿಂಗ್ ಮತ್ತು ವಿನಿತಾ ದಂಪತಿ ಮೇ 5ರಂದು ರಾತ್ರಿ ಊರಿಗೆ ಹೋಗುವುದಾಗಿ ಅವಸರವಾಗಿ ಬ್ಯಾಗ್ ಸಮೇತ ತೆರಳಿದ್ದರು. ಸುಮಾರು 4.64 ಲಕ್ಷ ರೂ. ಮೌಲ್ಯದ ಈ ಚಿನ್ನಾಭರಣಗಳನ್ನು ವಿನಿತಾ ಕಳವು ಮಾಡಿರುವ ಸಂಶಯವಿರುವುದಾಗಿ ರೇಖಾ ಚೌಧರಿ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.