Silver Crown: ದೇವರ ಬಳಿ ಕೈಮುಗಿದು ಕ್ಷಮೆಯಾಚಿಸಿ ಬೆಳ್ಳಿಯ ಕಿರೀಟವನ್ನೇ ಹೊತ್ತೊಯ್ದ ಕಳ್ಳ..
Team Udayavani, Jul 18, 2024, 1:56 PM IST
ಮುಂಬೈ: ದೇವರ ಮುಂದೆ ಕೈಮುಗಿದು ಕ್ಷಮೆಯಾಚಿಸಿ ದೇವರ ಬೆಳ್ಳಿಯ ಕಿರೀಟವನ್ನೇ ಎಗರಿಸಿದ ಆಘಾತಕಾರಿ ಘಟನೆಯೊಂದು ಮುಂಬೈನ ಬೊರಿವಲಿಯಲ್ಲಿ ಬುಧವಾರ ನಡೆದಿದೆ.
ಬೊರಿವಲಿಯಲ್ಲಿರುವ ವಿಠ್ಠಲ ದೇವಸ್ಥಾನಕ್ಕೆ ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಭಕ್ತನ ರೂಪದಲ್ಲಿ ಬಂದ ವ್ಯಕ್ತಿಯೋರ್ವ ದೇವರ ಎದುರು ಕೈಮುಗಿದು ಏನೋ ಬೇಡಿಕೊಂಡಿದ್ದಾನೆ ಇದಾದ ಬಳಿಕ ಅಲ್ಲಿ ಯಾರೂ ಇಲ್ಲದಿರುವುದನ್ನು ಕಂಡ ಯುವಕ ದೇವರ ಶಿರದ ಮೇಲಿರುವ ಬೆಳ್ಳಿಯ ಕಿರೀಟವನ್ನು ಎಗರಿಸಿ ಕಾಲ್ಕಿತ್ತಿದ್ದಾನೆ.
ಯುವಕ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಳ್ಳನ ಕೈಚಳಕಕ್ಕೆ ಜನ ಬೆರಗಾಗಿದ್ದಾರೆ.
ಘಟನೆ ಸಂಬಂಧ ದೇವಳದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ದೇವಸ್ಥಾನದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.
Caught on Camera: At Vitthal Temple, Mumbai, a thief is seen on CCTV bowing before the deity, then stealthily stealing the silver crown from the idol before making a quick getaway. #VitthalTemple #Mumbai #Robbery pic.twitter.com/Zdcv791WoO
— TIMES NOW (@TimesNow) July 18, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ
Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ
Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ
Gyanvapi ಮಸೀದಿ ಎಂದು ಉಲ್ಲೇಖಿಸುವುದು ದುರದೃಷ್ಟಕರ : ಯೋಗಿ ಆದಿತ್ಯನಾಥ್
‘Nafrat Ki Dukaan..; ಅಮೆರಿಕ ಘಟನೆ ಕುರಿತು ರಾಹುಲ್ ವಿರುದ್ಧ ಮೋದಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.