Sagara: ಉರುಳಿದ ಬೃಹತ್ ಮಾವಿನ ಮರ; ತಪ್ಪಿದ ಅಪಾಯ


Team Udayavani, Jul 18, 2024, 3:52 PM IST

15-sagara

ಸಾಗರ: ಇಲ್ಲಿನ ರಾಘವೇಂದ್ರ ಮಠದ ಪಕ್ಕದಲ್ಲಿದ್ದ ಬೃಹತ್ ಮಾವಿನ ಮರವೊಂದು ಜು.18ರ ಗುರುವಾರ ಬುಡ ಸಹಿತ ಮುರಿದು ಬಿದ್ದಿದೆ.

ಮಠದ ಕಡೆಗಲ್ಲದೆ ಇನ್ನಾವುದೇ ದಿಕ್ಕಿನಲ್ಲಿ ಮರ ಉರುಳಿದ್ದರೂ ದೊಡ್ಡ ಪ್ರಮಾಣದ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

ವಿಪರೀತ ಮಳೆಯಿಂದಾಗಿ ಮಾವಿನ ಮರ ಏಕಾಏಕಿ ಮುರಿದು ಬಿದ್ದಿದ್ದು ರಾಘವೇಂದ್ರ ಸ್ವಾಮಿ ಮಠದ ಪಕ್ಕದ ರಸ್ತೆಸಂಚಾರ ಕೆಲಕಾಲ ಬಂದ್ ಆಗಿತ್ತು. ಮರ ಬಿದ್ದಿದ್ದರಿಂದ ಮಠದ ಗೋಡೆಗೆ ಸ್ವಲ್ಪ ಹಾನಿಯಾಗಿದೆ. ಮರದ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್ ಮರದಡಿ ಸಿಲುಕಿ ಪುಡಿಪುಡಿಯಾಗಿದೆ.

ಈ ರಸ್ತೆಯಲ್ಲಿ ಸದಾ ಹೆಚ್ಚಿನ ಜನ ಸಂಚಾರ ಇರುತ್ತಿತ್ತು. ಜೊತೆಗೆ ಗುರುವಾರ ಆಗಿದ್ದರಿಂದ ಮಠಕ್ಕೆ ಬರುವ ಭಕ್ತರ ಸಂಖ್ಯೆ ಸಹ ಜಾಸ್ತಿ ಇತ್ತು. ಆದರೆ ಮರ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಿದ್ದಿದೆ. ಇದರಿಂದ ಕೆಳಗಿನ ರಸ್ತೆಯ ಸಂಚಾರ ಮಾತ್ರ ಅಸ್ತವ್ಯಸ್ತಗೊಂಡಿತು.

ನಗರಸಭೆಯಿಂದ ತಕ್ಷಣ ಕಾರ್ಯಾಚರಣೆ: ಮರ ಬಿದ್ದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಬೃಹತ್ ಮರವನ್ನು ನಗರಸಭೆ ಮತ್ತು ಅರಣ್ಯ ಇಲಾಖೆಯ ಸಹಾಯದಿಂದ ಕಟಾವು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ಗಾಂಧಿನಗರ ರಾಘವೇಂದ್ರಸ್ವಾಮಿ ಮಠದ ಪಕ್ಕದಲ್ಲಿ ಮಾವಿನ ಮರ ಬಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ರಸ್ತೆ ಸಂಚಾರಕ್ಕೆ ಸ್ವಲ್ಪಕಾಲ ಅಡ್ಡಿಯಾಗಿತ್ತು. ತಕ್ಷಣ ಮರವನ್ನು ತೆರವುಗೊಳಿಸಲಾಗಿದೆ ಎಂದರು.

ಮುಂದುವರೆದು ಮಾತನಾಡಿ, ವಿಪರೀತ ಮಳೆಯಿಂದ ನಗರ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಮಳೆಹಾನಿಯಾಗಿದೆ. ಶಾಸಕರು ಮತ್ತು ಆಡಳಿತಾಧಿಕಾರಿಗಳ ಸೂಚನೆ ಮೇರೆಗೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ನಗರಸಭೆಯಿಂದ ಅಗತ್ಯ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ. ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು, ವಾಹನ ಸವಾರರು ಹೆಚ್ಚು ಜಾಗೃತೆಯಿಂದ ಇರಬೇಕು. ಪೋಷಕರು ತಮ್ಮ ಮಕ್ಕಳನ್ನು ಜೋಪಾನ ಮಾಡಬೇಕು ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Sudden rise in cooking oil prices

Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court-Symbol

Court Order: ಲೈಂಗಿಕ ದೌರ್ಜನ್ಯ ಸಾಬೀತು; 70 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ!

Sagara: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ವಿದೇಶಿ ಪ್ರವಾಸಿಗರಿಂದ ಭರ್ಜರಿ ಸ್ಟೆಪ್

Sagara: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ವಿದೇಶಿ ಪ್ರವಾಸಿಗರಿಂದ ಭರ್ಜರಿ ಸ್ಟೆಪ್

Udupi ಶಾಸಕರ ವಿರುದ್ಧ ಕೇಸ್‌ ದಾಖಲಿಸಿದ್ದು ಖಂಡನೀಯ: ಡಾ| ಸರ್ಜಿ

Udupi ಶಾಸಕರ ವಿರುದ್ಧ ಕೇಸ್‌ ದಾಖಲಿಸಿದ್ದು ಖಂಡನೀಯ: ಡಾ| ಸರ್ಜಿ

Hosanagar

Hosanagar: ಅಡಗೋಡಿ ಶ್ರೀಮೂಕಾರ್ತೇಶ್ವರ ದೇಗುಲದ ಶಿವಲಿಂಗ 14-15ನೇ ಶತಮಾನದ್ದು!

1-hosanagara

Hosanagar; ಮಾಣಿ ಜಲಾಶಯ:ವಾರಾಹಿ,ಹಾಲಾಡಿ ನದಿಪಾತ್ರದ ವಾಸಿಗಳಿಗೆ ಅಂತಿಮ ಮುನ್ನೆಚ್ಚರಿಕೆ

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

England vs Australia: ಲಿವಿಂಗ್‌ಸ್ಟೋನ್‌ ಅಬ್ಬರ; ಆಸೀಸ್‌, ಇಂಗ್ಲೆಂಡ್‌ ಟಿ20 ಸರಣಿ ಸಮಬಲ

England vs Australia: ಲಿವಿಂಗ್‌ಸ್ಟೋನ್‌ ಅಬ್ಬರ; ಆಸೀಸ್‌, ಇಂಗ್ಲೆಂಡ್‌ ಟಿ20 ಸರಣಿ ಸಮಬಲ

crime (2)

Indi; ನಾಲ್ವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹ*ತ್ಯೆ

16

Kumble: ವಿದ್ಯಾರ್ಥಿಗೆ ಹಲ್ಲೆ

15

Belthangady: ನೇಣುಬಿಗಿದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.