Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’


Team Udayavani, Jul 19, 2024, 1:02 PM IST

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

ರಾಜ್‌ ಬಿ ಶೆಟ್ಟಿ ಮಾತಿಗೆ ಸಿಕ್ಕರೆ ಯಾವುದೇ ಹಮ್ಮು-ಬಿಮ್ಮು ಇಲ್ಲದೇ ನಿರರ್ಗಳವಾಗಿ ಮಾತನಾಡುತ್ತಾರೆ. ಪ್ರತಿ ವಿಚಾರದ ಕುರಿತು ತುಂಬಾ ಆಳವಾಗಿ ಹಾಗೂ ಅಷ್ಟೇ ಸೂಕ್ಷ್ಮವಾಗಿ ಮಾತನಾಡುವ ಚಾಕಚಕ್ಯತೆ ಶೆಟ್ರದ್ದು. ಒಂಥರಾ ಫಿಲ್ಟರ್‌ಲೆಸ್‌ ಮಾತು. ಅದೇ ಕಾರಣದಿಂದ ಅವರನ್ನು ಇಷ್ಟಪಡುವ ದೊಡ್ಡ ವರ್ಗವೇ ಇದೆ. ಕನ್ನಡ ಚಿತ್ರರಂಗ, ಪ್ರೇಕ್ಷಕರ ಮನಸ್ಥತಿ, ಎಡವಿದ ಹಾದಿ, ತಿದ್ದಿ ಮೇಲೇಳುವ ಸೂತ್ರ.. ಹೀಗೆ ರಾಜ್‌ ಹಲವು ಸಂಗತಿಗಳನ್ನು ಮಾತನಾಡಿದ್ದಾರೆ. ಅದನ್ನು ಅವರ ಮಾತಲ್ಲೇ ಕೇಳಿ…

1 ಮಲಯಾಳಂನಲ್ಲಿ ಹೊಸಬರ ಸಿನಿಮಾಗಳು ಹಿಟ್‌ ಆಗುತ್ತವೆ ಎನ್ನುತ್ತೇವೆ. ಆದರೆ, ಅದರ ಹಿಂದಿನ ತಂಡವನ್ನು ನಾವು ಗಮನಿಸಬೇಕು. “ಆವೇಶಂ’ ಚಿತ್ರವನ್ನು ಗಮನಿಸಿದರೆ, ಆ ಚಿತ್ರಕ್ಕೆ ದುಡಿದ ತಂತ್ರಜ್ಞರೆಲ್ಲಾ ಹೆಸರು ಮಾಡಿದವರು. ಅವರ ಜೊತೆಗೆ ಫ‌ಹಾದ್‌ ಫಾಜಿಲ್‌ ಸಹ ಇದ್ದಾರೆ. ಹಾಗಾಗಿ, ಸಿನಿಮಾ ಗೆಲುವು, ಸೋಲು ನಂತರದ ಮಾತು. ಆರಂಭಿಕವಾಗಿ ಒಂದಿಷ್ಟು ಪ್ರೇಕ್ಷಕರು ಬರುತ್ತಾರೆ. “ಪ್ರೇಮಲು’ ಚಿತ್ರದಲ್ಲಿ ಹೊಸಬರು ಕೆಲಸ ಮಾಡಿದ್ದಾರೆ ಎಂಬುದು ಮಾತ್ರ ನಮಗೆ ಕಾಣುತ್ತದೆ. ಅದರ ಹಿಂದೆ, ಒಂದು ನುರಿತ ತಂಡ ಇದೆ. ಜನಪ್ರಿಯ ತಂತ್ರಜ್ಞರು, ನಿರ್ಮಾಪಕರು ಆ ಚಿತ್ರದ ಹಿಂದಿದ್ದಾರೆ. ಕನ್ನಡದಲ್ಲಿ “ಕಾಟೇರ’ ಆಯ್ತು ನೋಡಿ, ಆ ತರಹ. ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ, ಕಥೆಗಾರ, ಸಂಗೀತ ನಿರ್ದೇಶಕ ಎಲ್ಲರೂ ಸೇರಬೇಕು. ಆ ತರಹದ ಒಗ್ಗಟ್ಟು ಹೆಚ್ಚಾದಾಗ ಒಂದು ಚಿತ್ರಕ್ಕೆ ಅನುಕೂಲವಾಗುತ್ತದೆ. ಚಿತ್ರ ಮಾರಾಟ ಮಾಡುವುದು ಸುಲಭವಾಗುತ್ತದೆ.

2 ಕೆಜಿಎಫ್ ನಂತರ ನಮ್ಮಲ್ಲಿ ವರ್ಷಕ್ಕೆ ಒಂದೋ, ಎರಡೋ ದೊಡ್ಡ ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿವೆ. ಇದರಿಂದ ಚಿತ್ರಮಂದಿರಗಳಿಗೆ ಕಷ್ಟವಾಗಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರೇಕ್ಷಕರಿಗೂ ತಾವು ಇಷ್ಟಪಟ್ಟಿದ್ದು ನೋಡೋಕೆ ಸಿಗುತ್ತಿಲ್ಲ. ಇದರಿಂದ ಚಿತ್ರಮಂದಿರ ಸಂಸ್ಕೃತಿ ಮಿಸ್‌ ಆಗುತ್ತಿದೆ. ಪ್ರಮುಖವಾಗಿ ಪ್ರೇಕ್ಷಕರನ್ನು ನಿರಂತರವಾಗಿ ಕರೆಸಿಕೊಳ್ಳುವ ಕೆಲಸವಾಗಬೇಕು. ಬರೀ ದೊಡ್ಡ ದೊಡ್ಡ ಚಿತ್ರಗಳನ್ನು ಮಾಡೋದಕ್ಕೆ ಹೋಗಿ ವಿಳಂಬವಾಗುತ್ತಿದೆ. ಅದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆ ಮಲಯಾಳಂನಲ್ಲೂ ಆಗಿತ್ತು. ಆದರೆ, ಅವರು ಸರಿ ಮಾಡಿಕೊಂಡರು. ಅಲ್ಲಿ ಚಿತ್ರೀಕರಣ ಮುಗಿದ ಮೂರು ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ.‌ ಗುಣಮಟ್ಟ ಎಷ್ಟು ಮುಖ್ಯವೋ, ಅದನ್ನು ಎಷ್ಟು ಬೇಗ ಮಾಡುತ್ತೀವೋ ಅದು ಸಹ ಬಹಳ ಮುಖ್ಯ.

3 ಯಾವುದೇ ಸಿನಿಮಾಕ್ಕಾಗಲೀ ಪ್ರಮುಖವಾಗಿ ಪ್ಲಾನಿಂಗ್‌ ಮುಖ್ಯ. ಅಬ್ರಹಾಂ ಲಿಂಕನ್‌ಗೆ ಯಾರೋ ಹೇಳಿದರಂತೆ. ನಾಲ್ಕು ಗಂಟೆ ಕೊಡುತ್ತೀನಿ, ಅಷ್ಟರಲ್ಲಿ ಗಿಡ ಕತ್ತರಿಸಬೇಕು ಎಂದರಂತೆ. ಅದಕ್ಕೆ ಒಪ್ಪುವ ಅವರು, ಮೂರು ತಾಸು ಕತ್ತಿ ಶಾರ್ಪ್‌ ಮಾಡಿ, ಒಂದು ತಾಸಿನಲ್ಲಿ ಗಿಡ ಕತ್ತರಿಸುತ್ತಾರೆ. ನಾವು ಈ ನಿಟ್ಟಿನಲ್ಲಿ ಯೋಚಿಸಬೇಕು. ಚಿತ್ರೀಕರಣಕ್ಕೆ ಹೋದ ಮೇಲೆ ಪ್ರತಿ ನಿಮಿಷವೂ ದುಡ್ಡೇ. ಅದಕ್ಕೇ, ಮೊದಲು ನಾವು ಚೆನ್ನಾಗಿ ತಯಾರಿ ಮಾಡಿಕೊಂಡಿರಬೇಕು. ಪ್ರತಿ ವಿವರವನ್ನು ಬರೆದಿಟ್ಟುಕೊಂಡರೆ, ಆಗ ಕೆಲಸ ಸುಲಭ.

4 ಜನರಿಗೆ ಇಷ್ಟವಾಗುವ ಸಿನಿಮಾ ಮಾಡಬೇಕು. ಅದು ಬಿಟ್ಟು ಕನ್ನಡ ಭಾಷೆಯ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಎಂದು ಆರೋಪ ಮಾಡುತ್ತಿರುವುದು, ದೊಡ್ಡ ಅಪರಾಧ. ಸಿನಿಮಾ ಚೆನ್ನಾಗಿರಬೇಕು, ಅದೊಂದೇ ಮಾನದಂಡ. ನಾವು ಸಿನಿಮಾ ಸಂಸ್ಕೃತಿ ಬೆಳೆಸಿಲ್ಲ. ಅದು ನಮ್ಮ ತಪ್ಪು. ನಮ್ಮ ತಪ್ಪನ್ನು ಅವರ ಮೇಲೆ ಹಾಕಬಾರದು. ನಾನು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಒಂದು ಚಿತ್ರ ಚೆನ್ನಾಗಿಲ್ಲ ಎಂದರೆ, ಚೆನ್ನಾಗಿಲ್ಲ ಎಂದೇ ಹೇಳಬೇಕು. ಕನ್ನಡ ಚಿತ್ರ ಎಂಬ ಕಾರಣಕ್ಕೆ ಚೆನ್ನಾಗಿದೆ ಎಂದರೆ ಮೋಸ ಮಾಡಿದ ಹಾಗಾಗುತ್ತದೆ.

5 ಸಿನಿಮಾಕ್ಕೆ ಜನ ಬರುತ್ತಿಲ್ಲ ಎಂದು ನಾವು ಹೇಳುತ್ತೇವೆ. ಆದರೆ, ನಾವು ಹೋಗುತ್ತಿರುವ ದಾರಿ ತಪ್ಪಾಗಿರಬಹುದು. ಅದನ್ನು ಪ್ರೇಕ್ಷಕರು ಪದೇಪದೇ ಹೇಳುತ್ತಿದ್ದಾರೆ. ಅವರ ಮಾತನ್ನೊಮ್ಮೆ ಕೇಳ್ಳೋಣ. ಅವರನ್ನು ಸುಮ್ಮನೆ ಬೈಯ್ಯುವುದು ಬೇಡ. ಅವರು ಬರುತ್ತಿಲ್ಲ ಅಂದರೆ ಯಾಕೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದೇ ಜನ “ಕಲ್ಕಿ’ ನೋಡುತ್ತಿದ್ದಾರೆ. ಇನ್ಯಾವುದೋ ಮಲಯಾಳಂ ಸಿನಿಮಾ ನೋಡುತ್ತಿದ್ದಾರೆ. ಒಳ್ಳೆಯ ಸಿನಿಮಾ ಅಂತನಿಸಿದರೆ ನೋಡುತ್ತಾರೆ. ನಮ್ಮ ಸಿನಿಮಾ ನೋಡುತ್ತಿಲ್ಲ ಎಂದರೆ, ಏನೋ ದೋಷ ಇರಬೇಕು. ಕೆಲವು ಕೆಟ್ಟ ಸಿನಿಮಾಗಳಿಂದ ಒಂದು ಒಳ್ಳೆಯ ಸಿನಿಮಾ ಸೋಲುವುದುಂಟು. ಅದನ್ನು ಸಂಘಟಿತವಾಗಿ ಅನುಭವಿಸಬೇಕು. ಒಟ್ಟಿಗೆ ನಿಂತು ಹೋರಾಡಿ, ಒಳ್ಳೆಯ ಸಿನಿಮಾಗಳನ್ನು ಕೊಡೋಣ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.