Paris Olympics; ನಿರ್ಭೀತಿಯಿಂದ ಆಡಿ: ಹಾಕಿ ತಂಡಕ್ಕೆ ಅಶೋಕ್ ಧ್ಯಾನ್ಚಂದ್ ಸಲಹೆ
Team Udayavani, Jul 20, 2024, 6:00 AM IST
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿರ್ಭೀತಿಯಿಂದ ಹಾಗೂ ಸ್ವತ್ಛ ಮನಸ್ಥಿತಿಯಿಂದ ಆಡಿ ಎಂಬುದಾಗಿ ಲೆಜೆಂಡ್ರಿ ಹಾಕಿಪಟು ಮೇಜರ್ ಧ್ಯಾನ್ಚಂದ್ ಅವರ ಪುತ್ರ, ಅಶೋಕ್ ಕುಮಾರ್ ಧ್ಯಾನ್ಚಂದ್ ಸಲಹೆ ನೀಡಿ ಶುಭ ಹಾರೈಸಿದ್ದಾರೆ.
“ಭಾರತದ ಗುಂಪಿನಲ್ಲಿ ಬಲಿಷ್ಠ ಆಸ್ಟ್ರೇಲಿಯ, ಬೆಲ್ಜಿಯಂ, ಆರ್ಜೆಂಟೀನ ಜತೆಗೆ ಐರ್ಲೆಂಡ್ ಮತ್ತು ನ್ಯೂಜಿ ಲ್ಯಾಂಡ್ ತಂಡಗಳಿವೆ. ಇವು ಯಾವತ್ತೂ ಭಾರತಕ್ಕೆ ಬಲಿಷ್ಠ ಸವಾಲು ನೀಡುತ್ತವೆ. ಇದೊಂದು ಕಠಿನ ಗುಂಪು. ಹೀಗಾಗಿ ಭಾರತ ನಿರ್ಭಯವಾಗಿ ಆಡಬೇಕಾದ ಅಗತ್ಯವಿದೆ’ ಎಂಬುದಾಗಿ ಅಶೋಕ್ ಕುಮಾರ್ ಹೇಳಿದರು.
ಇತ್ತೀಚಿನ 5 ಪಂದ್ಯಗಳ ಹಾಕಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ ಶರಣಾಗಿತ್ತು. ಯುರೋಪಿಯನ್ ಲೆಗ್ ಪ್ರೊ ಲೀಗ್ನಲ್ಲೂ ಭರವಸೆ ಮೂಡಿಸಿಲ್ಲ. ಇದು ಒಲಿಂಪಿಕ್ಸ್ ಅಭ್ಯಾಸದ ಹಿನ್ನೆಲೆ ಯಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಇಲ್ಲಿ ಯಾವುದೂ ಭಾರತದ ಯೋಜನೆ ಯಂತೆ ಸಾಗಲಿಲ್ಲ. ಹೀಗಾಗಿ 9 ತಂಡ ಗಳ ಸ್ಪರ್ಧೆಯಲ್ಲಿ 7ನೇ ಸ್ಥಾನಕ್ಕೆ ಕುಸಿಯ ಬೇಕಾಯಿತು. ಇದನ್ನೆಲ್ಲ ಮರೆತು, ಸ್ವತ್ಛ ಮನಸ್ಥಿತಿಯಿಂದ ಆಡಿದರೆ ಯಶಸ್ಸು ಸಾಧ್ಯ ಎಂದು ಸಲಹೆಯಿತ್ತರು.
ಒಂದು ಕಾಲದಲ್ಲಿ ಒಲಿಂಪಿಕ್ಸ್ ಹಾಕಿ ಸಮ್ರಾಟನಾಗಿ ಮೆರೆದಿದ್ದ ಭಾರತ, ಸತತ 6 ಚಿನ್ನದ ಪದಕಗಳನ್ನು ಗೆದ್ದ ಅಸಾಮಾನ್ಯ ಸಾಧನೆಗೈದಿತ್ತು. ಮೊದಲು 3 ಚಿನ್ನದ ಗೆಲುವಿನ ವೇಳೆ ಮೇಜರ್ ಧ್ಯಾನ್ಚಂದ್ ಭಾರತದ ಹೀರೋ ಆಗಿದ್ದರು. ಭಾರತ 10 ಒಲಿಂಪಿಕ್ಸ್ ಚಿನ್ನಗಳಲ್ಲಿ 8 ಹಾಕಿಯಲ್ಲೇ ಒಲಿದಿತ್ತು ಎಂಬುದನ್ನು ಮರೆಯುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.