Kasaragod ಕಳವಿಗೆ ಸಂಚು: 11 ಜನರ ಬಂಧನ
Team Udayavani, Jul 20, 2024, 12:11 AM IST
ಕಾಸರಗೋಡು: ನಗರಗಳನ್ನು ಕೇಂದ್ರೀಕರಿಸಿ ಕಳವಿಗೆ ಸ್ಕೆಚ್ ಹಾಕಿಕೊಂಡಿದ್ದ ಕಾಸರ ಗೋಡಿನ 9 ಮಂದಿ ಸಹಿತ 11 ಜನರನ್ನು ಕೊಯಮತ್ತೂರಿನಿಂದ ಕುನಿಯಾ ಮುತ್ತೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಕಣ್ಣೂರಿನ ತಡಿಯಂಡೆ ವೀಡ್ ನಸೀರ್ನ ಸಹೋದರ ಕಣ್ಣೂರು ತಯ್ಯಿಲ್ ನಿವಾಸಿ ಎಂ.ಶಮಾಲ್ (46), ಹೊಸದುರ್ಗ ಚೆಟ್ಟಿಕುಂಡಂ ಕಡವತ್ತ್ ವೀಟಿಲ್ ಮೊಹಮ್ಮದ್ ನಿಯಾಸುದ್ದೀನ್ (40), ಹೊಸದುರ್ಗ ಕೋಳಾವಯಲ್ನ ಸುನಿಲ್ (45), ಹೊಸದುರ್ಗ ತೆಕ್ಕೇಪುರದ ಸಮೀರ್ (32), ತೃಕ್ಕರಿಪುರ ಮಂಗಳಂ ಗಣಪತಿ ಪಾಳಯಂನ ಫರ್ಸಾದ್ (25), ಅನಸ್ (25), ಉಕ್ಕಟ್ಟಂ ವಿನ್ಸೆಂಟ್ ರಸ್ತೆಯ ಮೊಹಮ್ಮದ್ ಅನಸ್ (29), ತೃಕ್ಕರಿಪುರ ಮಂಗಳಂ ಪೆರಿಯಾ ಪಳ್ಳಿವಾಸಲ್ ನಿವಾಸಿಗಳಾದ ಸಲೀಂ ಮಾಲಿಕ್ (25), ಶಾಜಹಾನ್ (26), ತೃಕ್ಕರಿಪುರ ಕಕ್ಕೆಯಂ ನಿವಾಸಿ ಮೊಹಮ್ಮದ್ ಯಾಸಿನ್ (18), ಕಣ್ಣೂರು ವಾಳìವೀಥಿ ತಾಕಯತ್ ಅಬ್ದುಲ್ ಹಲೀಂ (47) ಮತ್ತು ಭಟ್ಕಳ ನಿವಾಸಿ ನೌಫಲ್ ಖಾಸಿಂ ಶೇಖ್ (29) ಬಂಧಿತರು. ಇವರು ಕೊಯಮತ್ತೂರಿನ ಕೂವ್ವೆ ಪುತುರಿಯ ಮನೆಯೊಂದರಲ್ಲಿ ಠಿಕಾಣಿ ಹೂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.