Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ
Team Udayavani, Jul 20, 2024, 1:05 AM IST
ಉಡುಪಿ: ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆ ಯಲ್ಲಿ ಶನಿವಾರ ಪಿಯುಸಿವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಮಧ್ಯಾಹ್ನ ಬಳಿಕ ಹಲವೆಡೆ ಮಳೆ ಬಿರುಸಾಗಿತ್ತು. ಕುಂದಾ ಪುರ, ಬೈಂದೂರು ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಅಮಾಸೆಬೈಲು ಬಳ್ಮನೆ ಭಾಗದಲ್ಲೂ ಮನೆಗಳಿಗೆ ಹಾನಿಯಾಗಿದೆ.
ನಾವುಂದ, ಮರವಂತೆ, ಪಡುಕೋಣೆ ಭಾಗದಲ್ಲಿ ನೆರೆ ನೀರು ಇನ್ನೂ ಇಳಿಮುಖವಾಗಿಲ್ಲ. ಉಡುಪಿ ತಾಲೂಕಿನ ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಅಲೆವೂರು, ಕೆಮೂ¤ರು, ಉದ್ಯಾವರ ಭಾಗದಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಹಲವು ಜನರನ್ನು ರಕ್ಷಿಸಲಾಯಿತು. ಕಲ್ಯಾಣಪುರ ಹೊಳೆ ಉಕ್ಕಿ ಹರಿದಿದ್ದು, ಸೇತುವೆ, ಸಂಪರ್ಕ ರಸ್ತೆಗಳು ಮುಳುಗಡೆಯಾಗಿದ್ದು, ಮೂಡುಕುದ್ರು, ನಿಡಂಬಳ್ಳಿ ಭಾಗದಲ್ಲಿ ಮನೆ, ಗದ್ದೆ, ತೋಟಗಳು ಜಲಾವೃತ ಗೊಂಡಿವೆ.
ಕಾರ್ಕಳ, ಅಜೆಕಾರು, ಬೈಲೂರು, ಮಾಳ, ನಿಟ್ಟೆ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿದಿದೆ. ಎರಡು ದಿನಗಳಲ್ಲಿ ಜಿಲ್ಲೆಯ 31ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕುಂದಾ ಪುರದ ಹಲ್ಕೂರು, ಸಿದ್ದಾಪುರ, ಗುಲ್ವಾಡಿ ಭಾಗದಲ್ಲಿ ಅಡಿಕೆ ತೋಟಗಳಿಗೆ ಹಾನಿ ಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ತಾಸಿನಲ್ಲಿ ಸರಾಸರಿ 149.2 ಮಿ. ಮೀ. ಮಳೆಯಾಗಿದೆ.
ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ
ಕಾಪು: ಕಾಪು ತಾಲೂಕಿನಲ್ಲಿ ಗಾಳಿ, ಮಳೆ ಮತ್ತು ನೆರೆಗೆ ಸಿಲುಕಿದ 35 ಮಂದಿಯನ್ನು ತಹಶೀಲ್ದಾರ್ ಡಾ| ಪ್ರತಿಭಾ ಆರ್. ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಟಪಾಡಿ ಮೂಡಬೆಟ್ಟು, ಏಣಗುಡ್ಡೆ, ನಡ್ಪಾಲು ಪಾದೆಬೆಟ್ಟು, ಪಡುಬಿದ್ರಿ ಕಲ್ಲಟ್ಟೆ ಮತ್ತು ಹೆಜಮಾಡಿ ಶಿವನಗರ ಪರಿಸರದ ಸಂತ್ರಸ್ತರನ್ನು ತಾಲೂಕು ಆಡಳಿತ, ಗೃಹರಕ್ಷಕ ದಳ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ಗಳ ನೇತೃತ್ವದಲ್ಲಿ ರಕ್ಷಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತಾಲೂಕು ಆಡಳಿತ ಕೇಂದ್ರದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 0820-2551444 ಅನ್ನು ಸಂಪರ್ಕಿಸುವಂತೆ ತಹಶೀಲ್ದಾರ್ ತಿಳಿಸಿದ್ದಾರೆ.
250ಕ್ಕೂ ಅಧಿಕ ವಿದ್ಯುತ್ ಕಂಬ ಧರಾಶಾಯಿ
ಕಳೆದ ಎರಡು ದಿನಗಳಲ್ಲಿ 250ಕ್ಕೂ ಅಧಿಕ ವಿದ್ಯುತ್ ಕಂಬ ಧರೆಗುರುಳಿದ್ದು, 3.80 ಕಿ. ಮೀ. ವಿದ್ಯುತ್ ಲೈನ್ಗೆ ಹಾನಿಯಾಗಿದೆ. 14 ವಿದ್ಯುತ್ ಪರಿವರ್ತಕಗಳು ಕೆಟ್ಟುಹೋಗಿದ್ದು, 38 ಲಕ್ಷ ರೂ. ವರೆಗೆ ಅಂದಾಜು ನಷ್ಟ ಸಂಭವಿಸಿದೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
10 ಜನರ ರಕ್ಷಿಸಿದ ಅಗ್ನಿಶಾಮಕ ದಳ
ಅಲೆವೂರು, ಕೆಮ್ತೂರು ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿದ್ದ ಹತ್ತು ಮಂದಿಯನ್ನು ಅಗ್ನಿ ಶಾಮಕದಳ ಸಿಬಂದಿ ರಕ್ಷಿಸಿದರು. ನೆರೆ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಎರಡು ಬೋಟ್ ಸಹಿತ ಸಿಬಂದಿ ಸನ್ನದ್ಧವಾಗಿದ್ದಾರೆ ಎಂದು ಅಗ್ನಿಶಾಮಕ ದಳ ಜಿಲ್ಲಾ ಅಧಿಕಾರಿ ವಿನಾಯಕ್ ಕಲ್ಗುಟ್ಕರ್ ತಿಳಿಸಿದ್ದಾರೆ.
ರಾಜ್ಯದಲ್ಲೆ ಅತ್ಯಧಿಕ ದಾಖಲೆ ಮಳೆ ಕಾರ್ಕಳದಲ್ಲಿ
ಶುಕ್ರವಾರ 8.30ರ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲೆ ಅತ್ಯಧಿಕ ಮಳೆ ಬಿದ್ದ ಪ್ರದೇಶ ಕಾರ್ಕಳದ ರೆಂಜಾಳ ಮತ್ತು ನೀರೆ ಗ್ರಾ. ಪಂ. ವ್ಯಾಪ್ತಿಯಲ್ಲಿ ದಾಖಲಾಗಿದೆ. ಒಟ್ಟಾರೆ ಕಾರ್ಕಳ ತಾಲೂಕಿನಲ್ಲಿ 201.7 ಮಿ.ಮೀ. ಸರಾಸರಿ ಮಳೆಯಾಗಿದೆ. ರೆಂಜಾಳ ಗ್ರಾ. ಪಂ. ನಲ್ಲಿ 272.5 ಮಿ. ಮೀ. ನೀರೆ ಗ್ರಾ . ಪಂ. ನಲ್ಲಿ 270 ಮಿ.ಮೀ. ಮಳೆ ಸುರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.