Congress; ಸೋತ ನಂತರವೂ ದುರಹಂಕಾರ :ರಾಹುಲ್ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ
Team Udayavani, Jul 20, 2024, 8:10 PM IST
ರಾಂಚಿ: ಪ್ರಜಾಪ್ರಭುತ್ವದಲ್ಲಿ ಗೆದ್ದ ನಂತರ ದುರಹಂಕಾರ ಬರುತ್ತದೆ, ಅಂತಹವರು(ಜೆಎಂಎಂ) ಜಾರ್ಖಂಡ್ನಲ್ಲಿ ಅಧಿಕಾರದಲ್ಲಿ ಇರುವುದನ್ನು ನಾವು ಅನೇಕ ಬಾರಿ ನೋಡುತ್ತೇವೆ.ಆದರೆ ಸೋತ ನಂತರವೂ ದುರಹಂಕಾರವನ್ನು ನಾನು ನೋಡಿದ್ದೇನೆ’ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಂಚಿಯಲ್ಲಿ ಶನಿವಾರ ನಡೆದ ಜಾರ್ಖಂಡ್ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಚುನಾವಣೆಯಲ್ಲಿ ಗೆದ್ದವರು ಯಾರು ಎಂಬುದು ಎಲ್ಲರಿಗೂ ಗೊತ್ತು, ಆದರೆ ಕಾಂಗ್ರೆಸ್ಸಿಗಿರುವ ದುರಹಂಕಾರವನ್ನು ನಾವೆಲ್ಲರೂ ನೋಡಿದ್ದೇವೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರ ಅಹ೦ಕಾರವನ್ನು ನೋಡಿದ್ದೀರಿ. ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದ ನಂತರವೂ ಜನರು ಈ ರೀತಿಯ ದುರಹಂಕಾರವನ್ನು ಹೊಂದುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.
ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿದ ನಮ್ಮ ಪ್ರೀತಿಯ ಜಾರ್ಖಂಡ್ ಅನ್ನು ನಾವೆಲ್ಲರೂ ನೋಡಿದ್ದೇವೆ. ಅದನ್ನು ಪ್ರಧಾನಿ ಮೋದಿ ಅವರು ಪೋಷಿಸಿದ್ದಾರೆ. ಆದರೆ ಇಂದು ಜಾರ್ಖಂಡ್ ಎಲ್ಲಿ ತಲುಪಿದೆ ಎಂದು ನೋಡುವುದು ನನಗೆ ನೋವುಂಟುಮಾಡುತ್ತದೆ. ಇಂದು ಜಾರ್ಖಂಡ್ ವಿನಾಶದತ್ತ ಸಾಗುತ್ತಿದೆ. ಜೆಎಂಎಂ ಎಂದರೆ ಲ್ಯಾಂಡ್ ಮಾಫಿಯಾ, ಮರ್ಡರ್ ಮಾಫಿಯಾ ಮತ್ತು ಮೈನಿಂಗ್ ಮಾಫಿಯಾ. ನೀವು ಹೇಳಿ, ಇಲ್ಲಿ ಮರಳು ಲಭ್ಯವಿದೆಯೇ? ಬಡವನಿಗೆ ಮನೆ ಕಟ್ಟುವುದು ಕಷ್ಟವಾಗುತ್ತಿದೆ’’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.