Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!


Team Udayavani, Jul 21, 2024, 11:42 AM IST

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

ನನ್ನ ಜೀವನದ ಮುಖ್ಯ ಗುರುಗಳು ಅಂದ್ರೆ ಅದು ನನ್ನ ತಂದೆ ತಾಯಿ. ತಂದೆ ಚೆಟ್ಟಿಚಾ ಅವರು ಬಸ್‌ ಡ್ರೈವರ್‌ ಆಗಿದ್ರು, ಬೇರೆ ಊರುಗಳಿಗೆಲ್ಲ ಹೋಗ್ತಿದ್ರು. ಹಾಗಾಗಿ ಹೆಚ್ಚು ಸಮಯ ತಾಯಿಯೊಂದಿಗೆ ಕಳೆದೆ. ನನ್ನ ತಾಯಿ ಕಾವೇರಿ ಅವರಿಂದ ಶಿಸ್ತು ಬಹಳ ಕಲಿತೆ. ನನ್ನ ತಾಯಿಯ ತಂದೆ ಸೈನ್ಯದಲ್ಲಿದ್ದರು. ಹಾಗಾಗಿ ನಮ್ಮ ಮನೆಯಲ್ಲಿ ಶಿಸ್ತಿನ ವಾತಾವರಣ. ತಂದೆ-ತಾಯಿಯಿಂದ ಕಲಿತದ್ದು ಬಹಳಷ್ಟಿದೆ. ಸಿನಿಮಾ ರಂಗಕ್ಕೆ ಬಂದಾಗ ನಾನು ಹೆಚ್ಚು ಪ್ರಭಾವಿತಳಾಗಿದ್ದು ಡಾ. ರಾಜಕುಮಾರ್‌ ಹಾಗೂ ಡಾ. ವಿಷ್ಣುವರ್ಧನ್‌ ಅವರಿಂದ. ಸಿನಿಮಾ ಕ್ಷೇತ್ರದಲ್ಲಿ ಅವರೇ ನನ್ನ ಗುರುಗಳು.

ಅಣ್ಣಾವ್ರ ಕಾಳಜಿ… “ಸವ್ಯಸಾಚಿ’ ಚಿತ್ರೀಕರಣ ಸಂದರ್ಭದಲ್ಲಿ ಮೊದಲ ಬಾರಿಗೆ ಡಾ. ರಾಜಕುಮಾರ್‌ ಅವರನ್ನು ಭೇಟಿಯಾಗಿದ್ದೆ. ಅವರನ್ನು ಮಾತನಾಡಿಸಲು ಭಯ ಆಗಿತ್ತು. ಅವರ ವೈಟ್‌ ಆ್ಯಂಡ್‌ ವೈಟ್‌ ಉಡುಗೆ, ಯಾರು ಯಾವ ಚಿತ್ರದಲ್ಲಿ ಬಿಝಿ ಇದಾರೆ ಇದನ್ನೆಲ್ಲ ತಿಳಿದುಕೊಳ್ಳೋದು, ಸೆಟ್‌ಗೆ ಬಂದು ಭೇಟಿಯಾಗೋದು ಇದೆಲ್ಲ ಅವರಿಗೆ ಆಸಕ್ತಿ ಇತ್ತು. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಹಂಸಲೇಖ ಅವರು “ಓಂ” ಚಿತ್ರದ ಹಾಡಿನ ರೆಕಾರ್ಡಿಂಗ್‌ ಮಾಡುತ್ತಿದ್ದರು. ಆಗ ಅಣ್ಣಾವ್ರು ಅಲ್ಲಿಗೆ ಬಂದರು. ಅವರು ಬಂದಾಗ ಎಲ್ಲರೂ ಎದ್ದು ನಿಂತ್ವಿ. ಅವರೊಂದಿಗೆ ಯಾವ ಚಿತ್ರದಲ್ಲೂ ನಾನು ನಟಿಸಿಲ್ಲ. ಆದರೆ, ಅವರ ಹಾವ-ಭಾವ, ನಡೆ-ನುಡಿಯಿಂದ ಕಲಿತದ್ದು ಬಹಳ.

“ಸವ್ಯಸಾಚಿ’ ಚಿತ್ರದ ಹಾಡಿನ ಚಿತ್ರೀಕರಣ ನಡೆದಿತ್ತು. ನಾನು ಅಚಾನಕ್ಕಾಗಿ ಕೆಳಗೆ ಬಿದ್ದೆ. ಆಗ ನನ್ನ ತಲೆಗೆ ಪಿನ್‌ ಚುಚ್ಚಿ ಸಣ್ಣಗೆ ರಕ್ತ ಬಂತು. ಕೂಡಲೇ ಅಣ್ಣಾವ್ರು ಎದ್ದು ಬಂದು “ಏನಾಯ್ತು, ಆಸ್ಪತ್ರೆಗೆ ಹೋಗಬೇಕಾ, ಚೆನ್ನಾಗಿದೀಯಾ?’ ಅಂತೆಲ್ಲ ವಿಚಾರಿಸಿದರು. ಎಲ್ಲರಿಗೂ ಇದೇ ರೀತಿ ಕಾಳಜಿ ತೋರಿಸುತ್ತಿದ್ದರು. “ಓಂ’ ಸಿನಿಮಾ ನೋಡಿದ ಅಣ್ಣಾವ್ರು ಹಾಗೂ ಪಾರ್ವತಮ್ಮನವರು, ಆಗ ನನ್ನ ಬಳಿ ಫೋನ್‌ ಇರಲಿಲ್ಲ; ನಮ್ಮ ಮನೆ ಹತ್ತಿರದ ಒಂದು ಅಂಗಡಿಗೆ ಫೋನ್‌ ಮಾಡಿ ನನ್ನ ಜೊತೆ ಮಾತಾಡಿದ್ರು. “ಬಹಳ ಚೆನ್ನಾಗಿ ಮಾಡಿದೀಯಾ’ ಅಂತ ಹೇಳಿದ್ರು. ಅಣ್ಣಾವ್ರು ಈ ಮಾತು ಹೇಳಿದ್ರಲ್ಲ ಅನ್ನೋದೇ ದೊಡ್ಡ ಖುಷಿ ನನಗೆ. ಅಷ್ಟು ಸಾಕಾಗಿತ್ತು, ಅವರ ಹೊಗಳಿಕೆ ನನಗೆ ಅವಾರ್ಡ್‌ ಕೊಟ್ಟಂಗೆ ಆಗಿತ್ತು.

ಸಹೃದಯಿ ವಿಷ್ಣುವರ್ಧನ್‌!:  ಡಾ. ವಿಷ್ಣುವರ್ಧನ್‌ ಅವರಿಂದ ಸಮಯ ಪಾಲನೆ, ಶಿಸ್ತು ಕಲಿತೆ. “ಪರ್ವ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಡೇಟ್‌ ವಿಷಯವಾಗಿ ನನ್ನ ಮತ್ತು ನಿರ್ಮಾಪಕರ ನಡುವೆ ದೊಡ್ಡ ಗಲಾಟೆ ಆಗಿತ್ತು. ಆಗ ವಿಷ್ಣು ಅವರು ಖುದ್ದು ನನ್ನ ಮನೆಗೆ ಬಂದು ನನ್ನನ್ನು ಸಮಾಧಾನ ಮಾಡಿದರು. ಆ ಕಷ್ಟದ ಸಮಯದಲ್ಲಿ ನನಗೆ ಬೆಂಬಲಿಸಿ ಎಂದು ಯಾರಿಗೂ ನಾನು ಕೇಳಿಕೊಂಡಿರಲಿಲ್ಲ. ಆದರೆ, ಒಬ್ಬ ಕಲಾವಿದರ ಬೆಲೆ ಇನ್ನೊಬ್ಬ ಕಲಾವಿದರಿಗೆ ಮಾತ್ರ ಗೊತ್ತಾಗೋದು. ಆ ಸಮಯದಲ್ಲಿ ವಿಷ್ಣು ಅವರು ನನ್ನ ಜೊತೆ ನಿಂತಿದ್ದನ್ನು, ನಾನು ಸಾಯುವವರೆಗೂ ಮರೆಯಲ್ಲ. ಅವರ ಸಹೃದಯ, ಒಳ್ಳೆಯ ಮನಸ್ಸು ಇಷ್ಟ ಆಯ್ತು.

-ಪ್ರೇಮಾ, ನಟಿ

ಟಾಪ್ ನ್ಯೂಸ್

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

1-modi-BG

Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

2

Short Stories: ಸಣ್ಕತೆ ಸಾಮ್ರಾಜ್ಯ: ಪುಟ್‌ ಪುಟ್‌ ಕತೆ, ಪುಟಾಣಿ ಕತೆ…

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.