Guru Purnima: ಅವರ ಜೀವನವೇ ನನಗೊಂದು ಸಂದೇಶ


Team Udayavani, Jul 21, 2024, 5:50 PM IST

Guru Purnima: ಅವರ ಜೀವನವೇ ನನಗೊಂದು ಸಂದೇಶ

ನನಗೆ ನೂರಾರು ಗುರುಗಳಿದ್ದಾರೆ. ಹೈಸ್ಕೂಲ್‌ನಲ್ಲಿದ್ದಾಗ ನನಗೆ ನಾಟಕ ಕಲಿಸಿದವರು ಪೂರಿಗಾಲಿ ಸಿದ್ಧಪ್ಪ. ಅವರು ಸರ್ಕಾರಿ ಶಾಲೆಯಲ್ಲಿ ನಾಟಕದ ಮೇಷ್ಟ್ರಾಗಿದ್ದರು. ಬಿಳಿ ಪಂಚೆ, ಕೈಯಲ್ಲೊಂದು ಕೋಲು, ನಶ್ಯದ ಡಬ್ಬ… ಇದು ಅವರ ಚಿತ್ರಣ. ನಾನು ಏಕಪಾತ್ರಾಭಿನಯ ಮಾಡಿದಾಗ ನನ್ನ ನಟನೆ ನೋಡಿ ತುಂಬಾ ಸಂತೋಷಪಡ್ತಿದ್ರು. ಎಲ್ಲಾದರೂ ಸಿನಿಮಾ ಪೋಸ್ಟರ್‌ ಇದ್ದರೆ ಅದನ್ನು ತೋರಿಸಿ “ಮುಂದೊಂದು ದಿನ ನೀನೂ ಪೋಸ್ಟರ್‌ನಲ್ಲಿ ಬರ್ತಿಯಾ. ನೀನು ಇದೇ ರೀತಿ ಸಾಧನೆ ಮಾಡತೀಯಾ’ ಅಂದಿದ್ರು. ಅಲ್ಲಿಂದಲೇ ನನಗೆ ನಟನೆ ಕಡೆ ಹೆಚ್ಚು ಒಲವು ಮೂಡಿದ್ದು.

ನನಗೆ ಶಾಸ್ತ್ರೋಕ್ತವಾಗಿ ರಂಗಭೂಮಿ ಕಲಿಸಿದವರೆಂದರೆ ಅಶೋಕ ಬಾದರದಿನ್ನಿ. ಅವರು ನಡೆಸಿದ 21 ದಿನಗಳ ರಂಗ ತರಬೇತಿಯಲ್ಲಿ ಭಾಗವಹಿಸಿದ್ದೆ. ನಂತರ ನನ್ನ ಜೀವನ ಪ್ರಜ್ಞೆ, ಧೋರಣೆ ಬದಲಿಸಿದ್ದು ನೀನಾಸಂ. ಕೆ.ವಿ. ಸುಬ್ಬಣ್ಣ, ಚಿದಂಬರರಾವ್‌ ಜಂಬೆ, ಪ್ರಸನ್ನ, ಅಲ್ಲಿನ ಗುರುಗಳು. ಅವರಿಂದ ಕಲಿತದ್ದು ಬಹಳ. ನೀನಾಸಂನಲ್ಲೇ ನನಗೆ ಬಿ.ವಿ. ಕಾರಂತರ ಪರಿಚಯವಾಯ್ತು. ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರ ರೀತಿ, ರಂಗಭೂಮಿ ಮೂಲಕ ಜಗತ್ತನ್ನು ಗ್ರಹಿಸಿದ ಪರಿ ನನಗೆ ಸದಾ ಮಾದರಿ. ಕೆ.ವಿ. ಸುಬ್ಬಣ್ಣ ಮತ್ತು ಬಿ.ವಿ. ಕಾರಂತರು ನನ್ನ ಜೀವನದ ರಂಗ ದಾರ್ಶನಿಕರು.

ಅರಿತಿದ್ದು , ಅಳವಡಿಸಿದ್ದು…

ಬಿ.ವಿ. ಕಾರಂತರು ಎಷ್ಟೇ ಕ್ಲಿಷ್ಟ ವಿಷಯವನ್ನೂ ಸರಳವಾಗಿ ಹೇಳಬಲ್ಲ ಚಾಣಾಕ್ಷರು. ಅವರ ವಿಚಾರ-ವರ್ತನೆ, ಪಾಠ ಮಾಡುವ ಶೈಲಿ, ದೂರದರ್ಶಿತ್ವ, ಇನ್ನೊಬ್ಬ ನಟನನ್ನು ತಯಾರು ಮಾಡುವ ರೀತಿ…ಹೀಗೆ ಅವರಿಂದ ಕಲಿತದ್ದು ಬಹಳ. ಅವರ ಸಂಘಟನಾತ್ಮಕ ಮನೋಭಾವವನ್ನು ನನ್ನಲ್ಲೂ ಅಳವಡಿಸಿಕೊಂಡಿದ್ದೇನೆ.

ಅಮೆರಿಕದಲ್ಲಿ ನಡೆದ ಘಟನೆ, ಅಲ್ಲಿ ಕಾರಂತರು ಕೈಯಲ್ಲಿ ಹಣ ಎಣಿಸುತ್ತಿದ್ದರು. ಕೂಡಲೇ ಒಬ್ಬ ಕಳ್ಳ ಹಣ ಕಸಿದುಕೊಂಡು ಜೋರಾಗಿ ಓಡಿದ. ನಾವೆಲ್ಲ ಕಿರುಚಿ, ಹಿಡಿಯಲು ಪ್ರಯತ್ನಿಸಿ, ಆತಂಕಗೊಂಡಿದ್ವಿ. ಆದರೆ ಕಾರಂತರು ಆತ ಓಡುವುದನ್ನು ನೋಡಿ, “ಆತನಿಗೆ ಹಸಿವಾಗಿದೆ. ಹಸಿವಿನ ಶಕ್ತಿ ಅವನನ್ನು ಅಷ್ಟು ವೇಗವಾಗಿ ಓಡಿಸುತ್ತಿದೆ. ಆತ ಒಲಿಂಪಿಕ್ಸ್‌ನಲ್ಲಿ ಓಡಿದ್ದರೆ ಪದಕ ಗೆಲ್ಲುತ್ತಿದ್ದನೇನೋ?’ ಎಂದರು.

ಹೆಸರಿಸಲು ಇನ್ನೂ ಅನೇಕ ಗುರುಗಳಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್‌, ಟಿ.ಎಸ್‌. ನಾಗಾಭರಣ, ಆರ್‌.ಎನ್‌. ಜಯ ಗೋಪಾಲ್‌ ಜೊತೆಗೆ ನನ್ನನ್ನು ಗುರುವಾಗಿಸಿದ ನನ್ನ ಶಿಷ್ಯರು… ಅವರೂ ನನಗೆ ಗುರುಗಳೇ. ಅವರಿಂದಲೇ ನನ್ನ ಸಾಮರ್ಥ್ಯ, ಚಿಂತನಶೀಲತೆ ಹೆಚ್ಚಾಗಿದೆ. ನನ್ನನ್ನು ಅವಮಾನಿಸಿದ, ಟೀಕಿಸಿದ ಸಹೋದ್ಯೋಗಿಗಳು, ತೊಂದರೆ ಕೊಟ್ಟವರನ್ನು ಮರೆಯಲಾರೆ. ಅವರು ನನ್ನಲ್ಲಿ ಕಿಚ್ಚು ಹಚ್ಚದಿದ್ದರೆ ನಾನು ಇಷ್ಟು ಸಾಧನೆ ಮಾಡೋಕೆ ಆಗ್ತಿರಲಿಲ್ಲ. ಹಾಗಾಗಿ ಅವರೂ ಗುರುಗಳೇ.

-ಮಂಡ್ಯ ರಮೇಶ್‌, ರಂಗಕರ್ಮಿ, ನಟ

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

14

Kannada Sahitya Ranga: ಅಮೆರಿಕದಲ್ಲಿ ವಸಂತೋತ್ಸವ; ಕನ್ನಡ‌ ಸಾಹಿತ್ಯ ರಂಗದ ಸಾರ್ಥಕ ಸೇವೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.