Switzerland;ಆತ್ಮಹತ್ಯೆ ಪಾಡ್ ಬಳಕೆಗೆ ನಿರ್ಬಂಧ! ;ಬಳಕೆಗೆ ನಿಷೇಧ ಏಕೆ?
Team Udayavani, Jul 22, 2024, 6:49 AM IST
ಬರ್ನ್: ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಸಾವನ್ನು ಬರಮಾಡಿಕೊಳ್ಳಲು ಅವಕಾಶ ಕಲ್ಪಿಸುವ ದಯಾಮರಣ ಪಾಡ್ “ಸಾರ್ಕೋ’, ಮೊದಲ ವ್ಯಕ್ತಿಯನ್ನು ಬಲಿಪಡೆಯುವ ಮುನ್ನ ತಾನೇ “ಬಲಿ’ಯಾಗಿದೆ!
ಹೌದು, ಮೊದಲ ಬಳಕೆಗೆ ಕೆಲವೇ ವಾರಗಳು ಬಾಕಿಯಿರುವಂತೆಯೇ ಸ್ವಿಟ್ಸರ್ಲೆಂಡ್ ಸರಕಾರ ಈ “ಸುಸೈಡ್ ಪಾಡ್’ನ ಬಳಕೆಗೆ ನಿರ್ಬಂಧ ಹೇರಿದೆ.
ಕ್ಷಣಮಾತ್ರದಲ್ಲಿ ಸಾವು ಕಲ್ಪಿಸುವ ಈ ಪಾಡ್ ಬಗ್ಗೆ ಕಾನೂನಾತ್ಮಕ ಮತ್ತು ನೈತಿಕ ಪ್ರಶ್ನೆಗಳು ಎದ್ದು, ಜಾಗತಿಕವಾಗಿ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ದಯಾಮರಣ ಬಯಸುವ ರೋಗಿಗಳಿಗೆ ಕೆಲವೇ ಸೆಕೆಂಡುಗಳಲ್ಲಿ ಸಾಯಲು ಅವಕಾಶ ಕಲ್ಪಿಸುವ ಈ ಸಾಧನಕ್ಕೆ “ಸಾರ್ಕೋ’ ಎಂದು ಹೆಸರು. ಇದನ್ನು 2019ರ ವೆನೀಸ್ ಡಿಸೈನ್ ಫೆಸ್ಟಿವಲ್ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಡಾ| ಫಿಲಿಪ್ ನಿಶೆR (ಇವರನ್ನು ಡಾ| ಡೆತ್ ಎಂದೂ ಕರೆಯುತ್ತಾರೆ) ಎಂಬವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಬಳಕೆಗೆ 1,674 ರೂ. ಶುಲ್ಕ ವಿಧಿಸುವುದಾಗಿ ಅವರು ಹೇಳಿದ್ದರು. ಸ್ವಿಟ್ಸರ್ಲೆಂಡ್ನಲ್ಲಿ ಕೆಲವೇ ವಾರಗಳಲ್ಲಿ ಇದರ ಬಳಕೆ ಆರಂಭ ಆಗುವುದರಲ್ಲಿತ್ತು.
ಬಳಕೆಗೆ ನಿಷೇಧ ಏಕೆ?
ಕೆಲವೇ ಸೆಕೆಂಡುಗಳಲ್ಲಿ ದಯಾಮರಣ ಕಲ್ಪಿಸುವ ಈ ಸಾಧನ ಹೇಗೆ ಕೆಲಸ ಮಾಡುತ್ತದೆ ಎಂಬ ಬಗೆಗಿನ ಅನಿಶ್ಚಿತತೆ ಮತ್ತು ಅದರೊಳಗೆ ಆಗುವ ಸಾವುಗಳ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಇದರ ದುರ್ಬಳಕೆ ಆಗುವ ಸಾಧ್ಯತೆಯೂ ಇರುವುದರಿಂದ ಇಂಥದ್ದರ ಬಳಕೆ ಕಳವಳಕಾರಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಡೆತ್ ಪಾಡ್ಗೆ ನಿಷೇಧ ಹೇರಿದೆ.
ಏನಿದು ಡೆತ್ಪಾಡ್?
“ಸಾರ್ಕೋ’ ಎಂಬ ಹೆಸರಿನ ಈ ಡೆತ್ ಪಾಡ್ ಅನ್ನು ಶವಪೆಟ್ಟಿಗೆಯ ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಕ್ಷಣಮಾತ್ರದಲ್ಲಿ ನೋವಿಲ್ಲದೇ ಸಾಯಲು ಇದು ಅವಕಾಶ ಮಾಡಿಕೊಡುತ್ತದೆ. ಮೊದಲು ದಯಾಮರಣ ಬಯಸುವ ರೋಗಿಯು ಈ ಪಾಡ್ನೊಳಕ್ಕೆ ಪ್ರವೇಶಿಸಬೇಕು. ಅನಂತರ ಒಳಗಿರುವ ಬಟನ್ ಒತ್ತಿದರೆ ಸಾಕು, ಕೆಲವೇ ಸೆಕೆಂಡುಗಳಲ್ಲಿ ಆತನ ಪ್ರಾಣ ಪಕ್ಷಿ ಹಾರಿಹೋಗುತ್ತದೆ. ಬಟನ್ ಒತ್ತಿದಾಗ ಇಡೀ ಪಾಡ್ನೊಳಗೆ ನೈಟ್ರೋಜನ್ ಗ್ಯಾಸ್ ಆವರಿಸುತ್ತದೆ. ಆಮ್ಲಜನಕವಿಲ್ಲದೇ ವ್ಯಕ್ತಿ ಕ್ಷಣಮಾತ್ರದಲ್ಲಿ ಸಾವನ್ನಪ್ಪುತ್ತಾನೆ.
ಬಳಸಿದರೆ 5 ವರ್ಷ ಜೈಲು
ಯಾರಾದರೂ ಈ ಪಾಡ್ ಬಳಸಿ ಯಾರದ್ದಾದರೂ ಸಾವಿಗೆ ಕಾರಣವಾದರೆ ಅಥವಾ ನೆರವು ನೀಡಿದರೆ ಅಂಥವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ಸರಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.