T20 ವಿಶ್ವಕಪ್; ಆಯೋಜನೆಯ ಕುರಿತು ಪರಿಶೀಲಿಸಲು ತ್ರಿಸದಸ್ಯರ ಸಮಿತಿ ರಚಿಸಿದ ಐಸಿಸಿ
ಹೆಚ್ಚಿನ ನಷ್ಟ... ಪಿಚ್ಗಳ ಕಳಪೆ ಗುಣಮಟ್ಟ...
Team Udayavani, Jul 22, 2024, 9:08 PM IST
ದುಬೈ: ಕಳೆದ ತಿಂಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಸಹ-ಆತಿಥ್ಯ ವಹಿಸಿದ್ದ T20 ವಿಶ್ವಕಪ್ನಲ್ಲಿ ಅನಗತ್ಯ ನಷ್ಟ, ಪಿಚ್ಗಳ ಕಳಪೆ ಗುಣಮಟ್ಟ ಸೇರಿ ಹಲವು ಆರೋಪಗಳು ಕೇಳಿ ಬಂದಿವೆ. ಈ ಕುರಿತು ಪರಿಶೀಲಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸೋಮವಾರ ತ್ರಿಸದಸ್ಯರ ಸಮಿತಿಯನ್ನು ರಚಿಸಿದೆ.
ಸಮಿತಿಯು ನ್ಯೂಜಿಲ್ಯಾಂಡ್ ನ ಮಾಜಿ ಬ್ಯಾಟ್ಸ್ ಮ್ಯಾನ್ ರೋಜರ್ ಟ್ವೆಸ್ ಮತ್ತು ಇತರ ಇಬ್ಬರು ನಿರ್ದೇಶಕರಾದ ಲಾಸನ್ ನೈಡೂ ಮತ್ತು ಐಸಿಸಿಯ ಉಪ ಅಧ್ಯಕ್ಷರಾಗಿರುವ ಇಮ್ರಾನ್ ಖ್ವಾಜಾ ಅವರನ್ನು ಒಳಗೊಂಡಿದೆ.
“ಐಸಿಸಿ ಟಿ 20 ವಿಶ್ವಕಪ್ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಐಸಿಸಿ ಮಂಡಳಿಯು ದೃಢಪಡಿಸಿದೆ. ಇದನ್ನು ಮೂವರು ನಿರ್ದೇಶಕರಾದ ರೋಜರ್ ಟೂಸೆ, ಲಾಸನ್ ನೈಡೂ ಮತ್ತು ಇಮ್ರಾನ್ ಖ್ವಾಜಾ ಅವರು ಮೇಲ್ವಿಚಾರಣೆ ಮಾಡುತ್ತಾರೆ, ಅವರು ವರ್ಷದ ನಂತರ ಮಂಡಳಿಗೆ ವರದಿ ನೀಡುತ್ತಾರೆ”ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ನ್ಯೂಯಾರ್ಕ್, ಫ್ಲೋರಿಡಾ ಮತ್ತು ಡಲ್ಲಾಸ್ನಲ್ಲಿ ಪಂದ್ಯಗಳನ್ನು ನಡೆಸುವುದಕ್ಕಾಗಿ ಐಸಿಸಿಯು USD 20 ಮಿಲಿಯನ್ಗಿಂತಲೂ ಹೆಚ್ಚಿನ ನಷ್ಟವನ್ನು ಅನುಭವಿಸಿದೆ ಎಂದು ತಿಳಿದು ಬಂದಿದೆ.
ಟೂರ್ನಮೆಂಟ್ನಲ್ಲಿ ಅಮೆರಿಕದಲ್ಲಿನ ಪಂದ್ಯಗಳಿಗೆ ನಿಗದಿಪಡಿಸಿದ ಬಜೆಟ್ ಸುಮಾರು 150 ಮಿಲಿಯನ್ ಡಾಲರ್ ಆಗಿತ್ತು. ಕೆಲವು ಪ್ರಭಾವಿ ಮಂಡಳಿಯ ಸದಸ್ಯರ ಕಾರಣದಿಂದ ಬಜೆಟ್ ಮೀರಿದೆ ಎಂದು ತಿಳಿದುಬಂದಿದೆ. ಡ್ರಾಪ್-ಇನ್ ಪಿಚ್ಗಳ ಕಳಪೆ ಗುಣಮಟ್ಟ, ಟಿಕೆಟಿಂಗ್ ವ್ಯವಸ್ಥೆ ಮತ್ತು ವ್ಯವಸ್ಥಾಪನಾ ಸಮಸ್ಯೆಗಳು ICC ಯ ಸಂಕಟಗಳಿಗೆ ಕಾರಣವಾಗಿದೆ. ವಿವಿಧ ಟೆಂಡರ್ಗಳನ್ನು ಹೇಗೆ ಹಸ್ತಾಂತರಿಸಲಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸದೇ ಇರುವುದು ಕಳವಳವನ್ನು ಹೆಚ್ಚಿಸಿದೆ. ಕೆಲವು ಐಸಿಸಿ ಉನ್ನತ ಅಧಿಕಾರಿಗಳ ಪಾತ್ರವನ್ನು ಸಹ ಸಮಿತಿಯು ಕೂಲಂಕಷವಾಗಿ ಪರಿಶೀಲಿಸುತ್ತದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.