Puttur: ಟಯರ್ ಜೋಡಿಸುತ್ತಿದ್ದ ವೇಳೆ ಸಿಡಿದ ರಿಂಗ್: ಓರ್ವ ಗಂಭೀರ
Team Udayavani, Jul 23, 2024, 9:15 PM IST
ಪುತ್ತೂರು: ಪರ್ಲಡ್ಕದ ಗೋಳಿಕಟ್ಟೆ ಮಸೀದಿ ಸನಿಹದ ರಸ್ತೆ ಬದಿ ಲಾರಿಗೆ ಟಯರ್ ಜೋಡಿಸುತ್ತಿದ್ದ ವೇಳೆ ಏಕಾಏಕಿಯಾಗಿ ಒಳಭಾಗದ ರಿಂಗ್ ರಭಸವಾಗಿ ಹೊರಚಿಮ್ಮಿದ್ದ ಪರಿಣಾಮ ದುರಸ್ತಿ ಮಾಡುತ್ತಿದ್ದ ಕೆಲಸಗಾರ ದೂರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಜು. 22ರಂದು ರಾತ್ರಿ ನಡೆದಿದೆ.
ಕರಾಯ ನಿವಾಸಿ ರಶೀದ್ ಗಾಯಗೊಂಡ ವ್ಯಕ್ತಿ. ಗೋಳಿಕಟ್ಟೆ ಮಸೀದಿ ಲಾರಿಯೊಂದರ ಟಯರ್ ಪಂಕ್ಚರ್ ಆಗಿತ್ತು. ಅದರ ಚಾಲಕ ಕರಾಯಕ್ಕೆ ತೆರಳಿ ಟಯರ್ ಪಂಕ್ಚರ್ ಹಾಕಿಸಿಕೊಂಡು ದುರಸ್ತಿ ಕೆಲಸಗಾರ ರಶೀದ್ ಜತೆ ವಾಪಸ್ ಪರ್ಲಡ್ಕಕ್ಕೆ ಬಂದಿದ್ದರು. ರಶೀದ್ ರಾತ್ರಿ ಟಯರ್ ಜೋಡಿಸುತ್ತಿದ್ದ ವೇಳೆ ಟಯರ್ನೊಳಗಿನ ರಿಂಗ್ ಸಿಡಿದು ಹೊರ ಚಿಮ್ಮಿದ್ದು, ಅದರ ರಭಸಕ್ಕೆ ಡಿಸ್ಕ್ ಸಹಿತ ರಶೀದ್ ಅವರು ರಸ್ತೆ ಬದಿಯ ಪಕ್ಕದ ಆವರಣ ಗೋಡೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ದುರಸ್ತಿ ಸಂದರ್ಭ ನಿಂತಿದ್ದ ಚಾಲಕನೂ ದೂರಕ್ಕೆ ಎಸೆಯಲ್ಪಟ್ಟಿದ್ದು, ಅವರಿಗೂ ಗಾಯವಾಗಿದೆ.
ಘಟನೆಯಿಂದ ತೀವ್ರ ಗಾಯಗೊಂಡಿದ್ದ ರಶೀದ್ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ
Eid Milad: ರ್ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ
Sullia: ಬೈಕ್ ಗಳ ನಡುವೆ ಅಪಘಾತ
ವಿಟ್ಲ: ಅಡಿಕೆ ಸುಲಿಯುವ ಯಂತ್ರ ಕಂಡು ಹಿಡಿದ ನರಸಿಂಹ ಭಟ್ ವಿಧಿವಶ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.