Govt., ಅನಕ್ಷರಸ್ಥ ಗ್ರಾ.ಪಂ. ಸದಸ್ಯರಿಗೆ ಅಕ್ಷರ ಕಲಿಸಲು “ಸಾಕ್ಷರ ಸಮ್ಮಾನ್‌’

ಪ್ರಸ್ತುತ ದಕ್ಷಿಣ ಕನ್ನಡದಲ್ಲಿ 53, ಉಡುಪಿಯಲ್ಲಿ 20 ಗ್ರಾ.ಪಂ. ಸದಸ್ಯರಿಗೆ ತರಬೇತಿಗೆ ಸಿದ್ಧತೆ

Team Udayavani, Jul 25, 2024, 6:45 AM IST

Govt., ಅನಕ್ಷರಸ್ಥ ಗ್ರಾ.ಪಂ. ಸದಸ್ಯರಿಗೆ ಅಕ್ಷರ ಕಲಿಸಲು “ಸಾಕ್ಷರ ಸಮ್ಮಾನ್‌’

ಮಂಗಳೂರು: ಸಾಕ್ಷರ ಸಮ್ಮಾನ್‌…. ಇದು ಇನ್ನೂ ಸಹಿ ಹಾಕಲಾಗದ ಅನಕ್ಷರಸ್ಥ ಗ್ರಾ.ಪಂ. ಸದಸ್ಯರನ್ನು ಸಾಕ್ಷರರನ್ನಾಗಿ ಮಾಡಲು ಆರಂಭಿಸಲಾಗುತ್ತಿರುವ ಹೊಸ ಯೋಜನೆ.

ರಾಜ್ಯದಲ್ಲೇ ಅತ್ಯಧಿಕ ಹೆಚ್ಚು ಸಾಕ್ಷರರಿರುವ ಜಿಲ್ಲೆಯೆಂಬ ಖ್ಯಾತಿಯ ದ.ಕ.ದಲ್ಲಿ ಇನ್ನೂ ಅನಕ್ಷರಸ್ಥರಿದ್ದಾರೆ. ಕರಾವಳಿಯ ಉಭಯ ಜಿಲ್ಲೆಗಳಲ್ಲೂ ಸಾಕ್ಷರತೆ ಕುರಿತು ನಿರಂತರ ಕಾರ್ಯಕ್ರಮಗಳು ಸರಕಾರದ ಪಟ್ಟಿಯಲ್ಲಿ ನಡೆಯುತ್ತಲೇ ಇವೆ. ಅದರಲ್ಲೂ ಅಚ್ಚರಿ ಎಂದರೆ ಉಭಯ ಜಿಲ್ಲೆಗಳಲ್ಲೂ ಗ್ರಾ.ಪಂ.ಗಳಿಗೆ ಆಯ್ಕೆಯಾದರಲ್ಲೂ ಅನಕ್ಷರಸ್ಥರು ದೊಡ್ಡ ಸಂಖ್ಯೆಯಲ್ಲಿದ್ದಾರೆ!

1990ರ ದಶಕದಲ್ಲಿ ಸಾಕ್ಷರತೆಯ ಆಂದೋಲನ ನಡೆದು ದಕ್ಷಿಣ ಕನ್ನಡವು ರಾಜ್ಯದಲ್ಲೇ ಅತ್ಯಧಿಕ ಸಾಕ್ಷರರಿರುವ ಜಿಲ್ಲೆ ಎಂದು ಘೋಷಣೆಯಾಗಿತ್ತು. 2011ರ ಜನಗಣತಿ ಪ್ರಕಾರವೂ ರಾಜ್ಯದ ನಂ.1 ಸಾಕ್ಷರ ಜಿಲ್ಲೆಯಾಗಿದ್ದು, ಸಾಕ್ಷರರ ಪ್ರಮಾಣ ಶೇ.88ರಷ್ಟಿದೆ.

ಬಯಲಾಗಿದ್ದು ಹೇಗೆ?
ಆದರೆ ಜಿಲ್ಲೆಯ ಹೆಮ್ಮೆಯ ಬಲೂನಿಗೆ ತೂತು ಬಿದ್ದದ್ದು ಗ್ರಾ.ಪಂ. ಸದಸ್ಯರ ತರಬೇತಿ ವೇಳೆ. ಮೈಸೂರಿನ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ತರಬೇತಿ ವೇಳೆ ವಿವಿಧ ಜಿಲ್ಲೆಗಳ ಸದಸ್ಯರ ಚಟುವಟಿಕೆಯನ್ನು ರಾಜ್ಯ ಗ್ರಾಮೀಣಾ ಭಿವೃದ್ಧಿ ಸಂಸ್ಥೆ (ಎಸ್‌ಐಆರ್‌ಡಿ)ಯವರು ದಾಖಲಿಸಿಕೊಂಡಿದ್ದು, ಆಗ ಸಹಿ ಬದಲಿಗೆ ಬೆರಳಚ್ಚು ಹಾಕಿದ್ದು ಗೊತ್ತಾಗಿದೆ. ಇದರ ಆಧಾರದಲ್ಲಿ ರಾಜ್ಯದ ಜಿಲ್ಲೆಗಳ ಗ್ರಾ.ಪಂ. ಸದಸ್ಯರಿಗೆ ಸಾಕ್ಷರತೆಯ ಪಾಠ ಹೇಳಿಕೊಡಲು ಸೂಚಿಸಲಾಗಿದೆ.

ದ.ಕ.ದಲ್ಲಿ 53 ಗ್ರಾ.ಪಂ.ಗಳಿಂದ 72 ಹಾಗೂ ಉಡುಪಿ ಜಿಲ್ಲೆಯಿಂದ 42 ಅನಕ್ಷಕರಸ್ಕ ಸದಸ್ಯರನ್ನು ಎಸ್‌ಐಆರ್‌ಡಿ ಸಂಸ್ಥೆ ಗುರುತಿಸಿದೆ. ಸಂಸ್ಥೆ ಕೊಟ್ಟ ಮಾಹಿತಿ ಅನ್ವಯ ದಕ್ಷಿಣ ಕನ್ನಡದ ಆಯಾ ಗ್ರಾಮಗಳ ಪಿಡಿಒ ಮೂಲಕ ಇದನ್ನು ದೃಢಪಡಿಸಲು ಮುಂದಾದಾಗ ಕೆಲವರು ಬಳಿಕ ಅಕ್ಷರ ಕಲಿತಿರುವ ಮಾಹಿತಿ ಸಿಕ್ಕಿದ್ದು, ಅಂಥ 19 ಮಂದಿಯನ್ನು ಬಿಟ್ಟು ಉಳಿದ 53 ಮಂದಿಗೆ ತರಬೇತಿ ನಡೆಸಲು ತೀರ್ಮಾನಿಸಲಾಗಿದೆ. ದ.ಕ.ದ ಮಂಗಳೂರು ಹಾಗೂ ಪುತ್ತೂರಿನಲ್ಲಿ ತರಬೇತಿಯನ್ನೂ ನಡೆಸ ಲಾ ಗುವುದು ಎಂದು ಜಿಲ್ಲಾ ಲೋಕಶಿಕ್ಷಣಾಧಿಕಾರಿ ಲೋಕೇಶ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 42 ಮಂದಿ ಅನಕ್ಷರಸ್ಥರ ಬಗ್ಗೆ ಪೂರ್ವ ಮಾಹಿತಿಯಿದ್ದು, ಅವರಲ್ಲಿ 20 ಮಂದಿ ಬಳಿಕ ಅಕ್ಷರ ಕಲಿತಿರುವುದರಿಂದ ಉಳಿದ 22 ಮಂದಿಗೆ ತರಬೇತಿ ನಡೆಯಲಿದೆ.

ಅನಕ್ಷರಸ್ಥರ ಗುರುತಿಸಲು
ಮನೆ ಮನೆ ಸಮೀಕ್ಷೆ
ಸಾಕ್ಷರತೆಯ ಮಟ್ಟ ಹೆಚ್ಚಿಸಲು ರಾಜ್ಯ-ಕೇಂದ್ರ ಸರಕಾರಗಳೆರಡೂ ಹಲವು ಕಾರ್ಯಕ್ರಮಗಳನ್ನು ಯೋಜಿಸುತ್ತಾ ಬಂದಿವೆ. ರಾಜ್ಯ ಸರಕಾರ 2022ರಲ್ಲಿ ಘೋಷಿಸಿದ 1,000 ಗ್ರಾ.ಪಂ. ಸಂಪೂರ್ಣ ಸಾಕ್ಷರ ಗ್ರಾ.ಪಂ. ಕಾರ್ಯಕ್ರಮದಡಿ ದ.ಕ. ಜಿಲ್ಲೆಯ 26 ಗ್ರಾಮ ಪಂಚಾಯತ್‌ಗಳ 11,047 ಅನಕ್ಷರಸ್ಥರನ್ನು ಗುರುತಿಸಲಾಗಿತ್ತು. ಇದರಲ್ಲಿ 1,390 ಮಂದಿಯನ್ನು ಮೊದಲು ಹಾಗೂ 227 ಮಂದಿಯನ್ನು ಅನಂತರದ ಹಂತದಲ್ಲಿ ಪತ್ತೆ ಮಾಡಿ ತರಬೇತಿ ಕೊಡಲಾಗಿದೆ. ಈಗ ಮತ್ತೆ ಅಭಿಯಾನ ರೂಪದಲ್ಲಿ ಅನಕ್ಷರಸ್ಥರನ್ನು ಗುರುತಿಸಲು ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಕೇಂದ್ರ ಸರಕಾರವೂ ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಯೋಜಿಸಿದ್ದು, ಅದರಲ್ಲೂ ಬ್ಲಾಕ್‌ ಸಂಪನ್ಮೂಲ ವ್ಯಕ್ತಿ, ಶಿಕ್ಷಕರು, ಶಿಕ್ಷಕ ಅಭ್ಯಾಸಿಗಳ ಮೂಲಕ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದೆ.

ಅನಕ್ಷರಸ್ಥ ಗ್ರಾ.ಪಂ.
ಸದಸ್ಯರಿರುವ ಟಾಪ್‌ ಜಿಲ್ಲೆಗಳು
ಬೆಳಗಾವಿ-727
ತುಮಕೂರು-328
ಚಿಕ್ಕಬಳ್ಳಾಪುರ-305
ರಾಮನಗರ-227
ಹಾಸನ-223

ಸಾಕ್ಷರ ಸಮ್ಮಾನ್‌ ತರಬೇತಿ ಹೇಗೆ ?
“ಈಚ್‌ ಒನ್‌, ಟೀಚ್‌ ಒನ್‌’ ಎಂದರೆ ಪ್ರತಿಯೊಬ್ಬನೂ ಇನ್ನೊಬ್ಬನಿಗೆ ಕಲಿಸುವುದು ಎನ್ನುವ ನೆಲೆ ಯಲ್ಲಿ ಆಯಾ ಗ್ರಾ.ಪಂ. ಸಿಬಂದಿಯೇ ತಮ್ಮಲ್ಲಿನ ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಕಲಿಸುವ ಕಾರ್ಯಕ್ರಮ ಸಾಕ್ಷರತಾ ಸಮ್ಮಾನ್‌. ಇದಕ್ಕಾಗಿ ಗ್ರಾ.ಪಂ. ಸಿಬಂದಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ.
-ಲೋಕೇಶ್‌, ಲೋಕಶಿಕ್ಷಣಾಧಿಕಾರಿ, ದ.ಕ

-ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

-ROHAN

Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.