ಬೋರುಕಟ್ಟೆ: ಇಂಥವರಿದ್ದರೆ ತ್ಯಾಜ್ಯ ಸಮಸ್ಯೆಯೇ ಇಲ್ಲ!


Team Udayavani, Jul 25, 2024, 10:00 AM IST

Udayavani Kannada Newspaper

ಬಜಪೆ: ಕಂಡ ಕಂಡಲ್ಲಿ ಕಸ, ತ್ಯಾಜ್ಯ ಎಸೆಯುವವರೇ ಹೆಚ್ಚು. ಎಲ್ಲಾದರೂ ಒಂದು ಕಡೆ ಒಂದು ಪ್ಲಾಸ್ಟಿಕ್‌ ಕವರ್‌ ನಲ್ಲಿ ಯಾರಾದರೂ ಕಸ ಎಸೆದು ಹೋದರೆ, ಮರುದಿನ ಅಲ್ಲಿ ತ್ಯಾಜ್ಯದ ರಾಶಿಯೇ ಆಗಿ ಬಿಡುತ್ತದೆ. ಪಂಚಾಯತ್‌ ನವರು ಒಮ್ಮೆ ಕಸದ ರಾಶಿ ತೆಗೆದರೂ ಮರು ದಿನ ಮತ್ತೆ ಅದೇ ಪರಿಸ್ಥಿತಿ. ಕಸ ಹಾಕಬಾರದು ಎಂದು ಫಲಕ ಹಾಕಿ ದಂಡ ವಿಧಿಸುತ್ತೇವೆ ಎಂದು ಬೋರ್ಡ್‌ ಹಾಕಿದರೆ ಅದರ ಬುಡಕ್ಕೆ ಕಸ ಎಸೆದು ಹೋಗುವವರಿದ್ದಾರೆ. ಕೆಲವರು ಅಲ್ಲಿ ಬಿಟ್ಟು ಬೇರೆಡೆ ಎಸೆಯುತ್ತಾರೆ. ಅವರವರ ಊರನ್ನು ಅವರೇ ತಿಪ್ಪೆಗುಂಡಿ ಮಾಡುವ ಇವರನ್ನು ನಿಯಂತ್ರಿಸುವುದು ಹೇಗೆ? ಊರಿನ ಜನರೇ ಸೇರಿ ಇದಕ್ಕೊಂದು ಪರಿಹಾರ ಕಂಡುಕೊಂಡ ಅಪರೂಪದ ಘಟನೆ ಕುತ್ತೆತ್ತೂರಿನಲ್ಲಿ ನಡೆದಿದೆ. ಆ ಮೂಲಕ ಒಂದು ಸಮಿತಿ ಜನರ ಜವಾಬ್ದಾರಿ ಮತ್ತು ಬದ್ಧತೆಯ ಶಕ್ತಿಯನ್ನು ತೋರಿಸಿದೆ.

ಏನಾಗಿದೆ ಬೋರುಕಟ್ಟೆಯಲ್ಲಿ?
ಪೆರ್ಮುದೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ ಪ್ರದೇಶದಲ್ಲಿ ಹಲವಾರು ವರ್ಷಗಳಲ್ಲಿ ಕೆಲವರು ಬೇಕಾಬಿಟ್ಟಿ ತ್ಯಾಜ್ಯವನ್ನು ಎಸೆಯುತ್ತಿದ್ದರು. ಇದು ಈ ಪ್ರದೇಶದ ಬಹಳ ದೊಡ್ಡ ಸಮಸ್ಯೆಯಾಗಿತ್ತು. ಹಲವಾರು ಬಾರಿ ಈ ಪ್ರದೇಶದಲ್ಲಿ ವಿವಿಧ ಸಂಘ-ಸಂಸ್ಥೆಯ ವತಿಯಿಂದ ಹಾಗೂ ಪೆರ್ಮುದೆ ಗ್ರಾಮ ಪಂಚಾಯತ್‌ ವತಿಯಿಂದ ಸ್ವಚ್ಛತ ಕಾರ್ಯ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಸಮಸ್ಯೆ ಪರಿಹಾರವಾಗಿರಲಿಲ್ಲ. ಪೆರ್ಮುದೆ ಗ್ರಾಮ ಪಂಚಾಯತ್‌ ಇಲ್ಲಿ ಸ್ವಚ್ಛ ಮಾಡಿಮಾಡಿ ಸೋತು ಹೋಗಿತ್ತು. ಆಗ ಹುಟ್ಟಿಕೊಂಡ ಒಂದು ಸಮಿತಿ ಬೋರುಕಟ್ಟೆಯ ಕಸದ ಕಥೆಯನ್ನೇ ಬದಲಾಯಿಸಿತು. ಈಗ ಹಲವು ಪತ್ತೆ ಕಾರ್ಯ, ದಂಡನೆಗಳ ಜತೆಗೆ ಒಂದು ತಿಂಗಳಿಗೊಮ್ಮೆ ಈ ಪ್ರದೇಶವನ್ನು ಸಮಿತಿ ಸ್ವಚ್ಚ ಮಾಡುತ್ತಿದೆ.

ಯಾರಿದ್ದಾರೆ ಈ ಸಮಿತಿಯಲ್ಲಿ?
ಸಮಿತಿಯಲ್ಲಿ ಮಾಧವ ಭಟ್‌ ಕುಲ್ಲಂಗಾಲ್‌, ಪ್ರಸಾದ್‌ ಅಂಚನ್‌ ಕುತ್ತೆತ್ತೂರು, ನವೀನ್‌ ಶೆಟ್ಟಿ, ಶಶಿಧರ ಶೆಟ್ಟಿ ಸೂರಿಂಜೆ, ಜಯ ಪ್ರಕಾಶ್‌ ಸೂರಿಂಜೆ, ಸಚಿನ್‌ ಬೋರುಕಟ್ಟೆ, ವಿಘ್ನೇಶ್‌ ಸೂರಿಂಜೆ, ದಯಾನಂದ ಆಚಾರ್ಯ, ಕವಿತ, ಹೇಮಾವತಿ, ರವಿಚಂದ್ರ ಕುಲಾಲ್‌, ದೀಪಕ್‌ ಬೋರುಕಟ್ಟೆ, ಯೋಗೀಶ್‌ ದೇವಾಡಿಗ, ಹರೀಶ್‌ ಆದರ್ಶನಗರ, ದಿವಾಕರ ಶೆಟ್ಟಿ ಕುಲ್ಲಂಗಾಲ್‌ ಇದ್ದಾರೆ.

ಸಮಿತಿಗೆ ಪಂಚಾಯತ್‌ ಸಮ್ಮಾನ
ಈ ಪ್ರದೇಶದಲ್ಲಿ ಸ್ವಚ್ಛತ ಕಾರ್ಯ ಸಾಧ್ಯವಾಗದೇ ಇರುವಾಗ ಈ ಸಮಿತಿ ಆ ಪ್ರದೇಶದ ಮೇಲೆ ನಿಗಾ ಇಟ್ಟು ತ್ಯಾಜ್ಯ ಎಸೆಯುವುದುನ್ನು ತಡೆದಿರುವುದು ನಿಜಕ್ಕೂ ಆದರ್ಶ ಕೆಲಸ. ಇಂತಹ ಸಮಿತಿಗಳು ಗ್ರಾಮಗ್ರಾಮಗಳಲ್ಲಿ ಇದ್ದರೆ,
ಕಸ, ತ್ಯಾಜ್ಯ ಒಂದು ಸಮಸ್ಯೆಯೇ ಅಲ್ಲ. ಪೆರ್ಮುದೆ ಗ್ರಾ.ಪಂ.ಈ ಸಮಿತಿಯ ಸದಸ್ಯರನ್ನು ಸಮ್ಮಾನಿಸಿ ಗೌರವಿಸಿದೆ. ನಮಗೆ ಯಾವುದೇ ಪುರ ಸ್ಕಾರಗಳು ಬೇಕಿಲ್ಲ. ಊರು ಸ್ವಚ್ಛವಾಗಿದ್ದರೆ ಸಾಕು ಎನ್ನುತ್ತಾರೆ ಸಮಿತಿ ಸದಸ್ಯರು.

ಸ್ವಂತ ದುಡ್ಡಿನಿಂದ ಸಿಸಿ ಕೆಮರಾ!
ಮಾಧವ ಭಟ್ರು ಮತ್ತು ಆ ಪ್ರದೇಶದ ಜನರು ಸ್ವಂತ ದುಡ್ಡಿನಿಂದ ಸಿಸಿ  ಕೆಮರಾವನ್ನು ಅಳವಡಿಸಿದರು. ಕಸ ಹಾಕುವವರ ವಿವರವನ್ನು ಸಿ.ಸಿ. ಕೆಮರಾದಿಂದ ಸಂಗ್ರಹಿಸಿ ಪಂಚಾಯತ್‌‌ ಮೂಲಕ ದಂಡ ಕಟ್ಟಿಸುವ ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ. ಪಂಚಾಯತ್‌ ಒಂದು ವರ್ಷದಲ್ಲಿ ಒಟ್ಟು 12 ಸಾವಿರ ರೂಪಾಯಿ ದಂಡ ವಸೂಲು ಮಾಡಿದೆ. ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿ, ನಾಲ್ಕು ಪ್ರಕರಣವನ್ನು ದಾಖಲಿಸಿದೆ.

ಒಂದು ತಿಂಗಳು ನಿಗಾ ಇಟ್ಟ ಸಮಿತಿ
ಬೋರುಕಟ್ಟೆಯ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವ ದೃಷ್ಟಿಯಿಂದ ಈ ಪ್ರದೇಶದ ಜನರು ಮಾಧವ ಭಟ್‌ ಅವರ ನೇತೃತ್ವದಲ್ಲಿ ಬೋರುಕಟ್ಟೆ ಆದರ್ಶನಗರ ಸ್ವ ತಾ ಸಮಿತಿಯನ್ನು ರಚಿಸಿದರು. ಈ ಸಮಿತಿಯ ವತಿಯಿಂದ ಜನರಿಗೆ ತಿಳುವಳಿಕೆಯನ್ನು ನೀಡಲು ಬೃಹತ್‌ ಸ್ವಚ್ಛತಾ ಕಾರ್ಯಕ್ರಮಗಳನ್ನು ಆ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು. ಟನ್‌ ಗಟ್ಟಲೆ ಕಸವನ್ನು ಸಂಗ್ರಹಿಸಲಾಯಿತು. ಜನಜಾಗೃತಿ , ಜಾಥಾ, ಪೋಸ್ಟರ್‌ ಅಳವಡಿಸುವುದು. ಈ ರೀತಿಯ ವಿವಿಧ ಪ್ರಯೋಗವನ್ನು ಕೂಡ ಮಾಡಲಾಯಿತು.ಅಲ್ಲದೇ ಕಸ ,ತ್ಯಾಜ್ಯ ಎಸೆಯುವವರು ಯಾರೆಂದು ತಿಳಿಯಲು ಸುಮಾರು ಒಂದು ತಿಂಗಳು 4 ಪ್ರದೇಶದ
ಸಮಿತಿಯ ಜನರು 24 ಗಂಟೆ ಈ ಪ್ರದೇಶದಲ್ಲಿ ಕಾದು ಕುಳಿತು ಕಸ ಹಾಕುತ್ತಿದ್ದವರನ್ನು ಹಿಡಿದರು. ಬಳಿಕ ಪಂಚಾಯತ್‌ ಮುಖಾಂತರ ದಂಡವನ್ನು ವಿಧಿಸಲಾಯಿತು.

*ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

-ROHAN

Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.