Kargil@25: ಗಾಯಾಳು ಯೋಧರ ಜೀವ ಉಳಿಸಿದ “ಆಪರೇಷನ್‌’-ಕನ್ನಡಿಗ ಸೇನಾವೈದ್ಯ ಲೆ| ಜ| ಪ್ರಸಾದ್

ಯೋಧರು ಮತ್ತು ಹಿರಿಯ ಅಧಿಕಾರಿಗಳಿಗೆ ಚಿಕಿತ್ಸೆ ನೀಡುವ ತಂಡದ ವೈದ್ಯನಾಗಿದ್ದೆ.

Team Udayavani, Jul 26, 2024, 10:34 AM IST

Kargil@25: ಗಾಯಾಳು ಯೋಧರ ಜೀವ ಉಳಿಸಿದ “ಆಪರೇಷನ್‌’-ಕನ್ನಡಿಗ ಸೇನಾವೈದ್ಯ ಲೆ| ಜ| ಪ್ರಸಾದ್

ಕಾರ್ಗಿಲ್‌ ಕಾರ್ಯಾಚರಣೆ, ದೇಶದ ಪ್ರತಿ ಯೋಧನ ಮನಸ್ಸಿನಲ್ಲಿ ಅಚ್ಚಳಿಯದೆ ನೆನಪಲ್ಲಿ ಉಳಿಯುವ ಕಾರ್ಯಾಚರಣೆ. 1999ರ ಮೇ 3ರಿಂದ ಜು.26ರ ವರೆಗೆ ನಡೆದ ಕಾರ್ಯಾಚರಣೆಯೇ ಅತ್ಯಂತ ರೋಚಕವಾದದ್ದು. ನನ್ನ 4 ದಶಕಗಳ ಸೇನಾ ಜೀವನದಲ್ಲಿ ಅದೊಂದು ಹೆಮ್ಮೆಯ ಮತ್ತು ಸ್ಮರಣೀಯ ಕಾರ್ಯಾಚರಣೆ ಎಂದು ಭಾವಿಸುವೆ.

ಸೇನಾ ಜೀವನದ 28 ತಿಂಗಳ ಕಾಲ ಅಲ್ಲಿ ನಾನು ಕಾರ್ಯ ನಿರ್ವಹಿಸಿದ್ದೆ. ಈ ಸಂದರ್ಭದಲ್ಲಿ ಕಾರ್ಗಿಲ್‌ ಕಾರ್ಯಾಚರಣೆಯೂ ಒಂದು. ಅಲ್ಲಿ ಮೈಕೊರೆಯುವಂಥ ಚಳಿ. ತಾಪಮಾನ ಎಷ್ಟು ಕನಿಷ್ಠಕ್ಕೆ ಎಂದರೆ-50 ಡಿಗ್ರಿ ಸೆಲ್ಸಿಯಸ್‌ ವರೆಗೆ ಇಳಿಯಬಹುದು. ದ್ರಾಸ್‌, ಟೈಗರ್‌ಹಿಲ್ಸ್‌, ತೊಲೊಲಿಂಗ್‌ ಪರ್ವತ ಶ್ರೇಣಿಗಳಲ್ಲಿ ನನಗೆ ಕಾರ್ಯ ನಿರ್ವಹಿಸಬೇಕಾಗಿ ಬಂದಿತ್ತು.

ನಾನು ಮುಂಚೂಣಿ ನೆಲೆಯಲ್ಲಿ ನಿಂತು ಯುದ್ಧ ಮಾಡದೇ ಇದ್ದರೂ, ಪಾಕಿಸ್ಥಾನ ಸೇನೆಯ ಗುಂಡಿನಿಂದ ಗಾಯಗೊಂಡ ನಮ್ಮ ಯೋಧರಿಗೆ ಚಿಕಿತ್ಸೆ ನೀಡುವ ಪವಿತ್ರ ಕೆಲಸದಲ್ಲಿ ನಮ್ಮ ಸಿಬಂದಿಯ ಜತೆಗೆ ನಿರತನಾಗಿದ್ದೆ. ಅದು ನನಗೊಂದು ಹೆಮ್ಮೆಯ ವಿಚಾರವೇ ಸರಿ. ನಾನು ದ್ರಾಸ್‌ ಪರ್ವತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮೈಕೊರೆಯುವ ಚಳಿಯಲ್ಲಿ ಕೆಲಸ ಮಾಡುವ ಯೋಧರು ಮತ್ತು ಹಿರಿಯ ಅಧಿಕಾರಿಗಳಿಗೆ ಚಿಕಿತ್ಸೆ ನೀಡುವ ತಂಡ ವೈದ್ಯನಾಗಿದ್ದೆ.

ನಾನು ಕೆಲಸ ಮಾಡುತ್ತಿದ್ದ ಯೋಧರ ತಂಡ ಗಡಿ ನಿಯಂತ್ರಣ ರೇಖೆ ಮತ್ತು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಸಮೀಪ ಇರುವ ಸ್ಥಳದಲ್ಲಿ ಕಾವಲು ಕಾಯುವ ಕೆಲಸ ಮಾಡುತ್ತಿತ್ತು. ಆ 2 ತಿಂಗಳ ಅವಧಿಯಲ್ಲಿ ನಮ್ಮ ವೀರ ಯೋಧರಿಗೆ ಶತ್ರುಗಳನ್ನು ಮಟ್ಟ ಹಾಕಲು ಎಷ್ಟು ಕಷ್ಟ ಮತ್ತು ಸವಾಲಿನ ಕೆಲಸವಾಗಿತ್ತೋ, ಅಷ್ಟೇ ಸವಾಲಿನ ಕೆಲಸ ಸೇನೆಯ ವೈದ್ಯಾಧಿಕಾರಿಯಾಗಿ ನನಗೂ ನನ್ನ ತಂಡಕ್ಕೂ ಇತ್ತು. ಗುಂಡಿನ ಚಕಮಕಿಯ ನಡುವೆಯೇ ಗಾಯಗೊಂಡವರನ್ನು ಸಮರಾಂಗಣದಿಂದ ಸುರಕ್ಷಿತವಾಗಿ ಕರೆತಂದು ಅವರಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ನನ್ನ ಹಾಗೂ ತಂಡಕ್ಕೆ ಇತ್ತು.

ಕಾರ್ಗಿಲ್‌ನಿಂದ ಲೇಹ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಆಕ್ರಮಿಸಿಕೊಂಡು ಸಂಪರ್ಕ ಕಡಿದುಹಾಕಿ ಕುತ್ಸಿತ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಅವರು ಹೊಂದಿದ್ದರು. ಆದರೆ ಆ ಸಂಚನ್ನು ಮುಂಚೂಣಿ ನೆಲೆಯಲ್ಲಿ ನಿಂತು ಹೋರಾಟ ಮಾಡಿದ್ದ ನಮ್ಮ ಯೋಧರು ವಿಫ‌ಲಗೊಳಿಸಿದ್ದರು. ಪಾಕ್‌ ಸೈನಿಕರು ಮತ್ತು ನಮ್ಮ ಯೋಧರ ನಡುವಿನ ಭೀಕರ ಗುಂಡಿನ ಕಾಳಗ ನಡೆಯುತ್ತಿತ್ತು. ಆಗ ನಮ್ಮ ಯೋಧರು ನೀಡುವ ರಕ್ಷಣೆಯೊಂದಿಗೆ ಗಾಯಗೊಂಡಿರುವ ನಮ್ಮ ಯೋಧರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗಿತ್ತು.

ಅವರಿಗೆ ಮತ್ತಷ್ಟು ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದರೆ ಉಧಂಪುರ, ಶ್ರೀನಗರ, ಚಂಡೀಗಢ, ಹೊಸದಿಲ್ಲಿಯ ಆಸ್ಪತ್ರೆಗಳಿಗೆ ಯೋಧರನ್ನು ಕಳುಹಿಸುವ ವ್ಯವಸ್ಥೆಯನ್ನು ನಾವು ಮಾಡಬೇಕಾಗುತ್ತಿತ್ತು. ಮುಂಚೂಣಿ ನೆಲೆಯಲ್ಲಿ ಯೋಧರು ಹೋರಾಡಿ, ಕಾರ್ಗಿಲ್‌, ತೊಲೊಲಿಂಗ್‌, ಟೈಗರ್‌ ಹಿಲ್ಸ್‌, ದ್ರಾಸ್‌ಗಳಲ್ಲಿ ಗಾಯಗೊಂಡಿದ್ದ ಯೋಧರಿಗೆ ನಾವು ಚಿಕಿತ್ಸೆ ನೀಡಿ ಬದುಕಿಸಿದ್ದೇವೆ. ಕೋವಿ ಹಿಡಿದು ಯುದ್ಧರಂಗದಲ್ಲಿ ಯೋಧರು ಹೇಗೆ ಹೋರಾಡುತ್ತಾರೋ, ಸೇನೆಯಲ್ಲಿನ ವೈದ್ಯ ಕೂಡ ಅವರಿಗೆ ಬೆಂಬಲವಾಗಿ ಪರೋಕ್ಷವಾಗಿ ದೇಶವನ್ನು ಕಾಯುತ್ತಾನೆ.

ಕಾರ್ಗಿಲ್‌ ಯುದ್ಧ ಮುಕ್ತಾಯಗೊಂಡು 25 ವರ್ಷಗಳು ಪೂರ್ತಿಗೊಂಡಿವೆ. ಆ ಜಯ ಯಾವತ್ತಿದ್ದರೂ, ನಮ್ಮ ದೇಶದ ಯೋಧರಿಗೂ, ನನಗೂ ಹೆಮ್ಮೆಯ ನೆನಪು. ಆದರೆ, ನಾವೆಲ್ಲರೂ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ವಿಚಾರವೇನೆಂದರೆ, ಯೋಧರು ಕಾವಲು ಕಾಯುವ ಗಡಿ ಪ್ರದೇಶ ಯಾವತ್ತೂ ಅವರು ಜಾಗರೂಕರಾಗಿಯೇ ಇರಬೇಕಾಗುತ್ತದೆ ಎಂದು ತಿಳಿದುಕೊಳ್ಳಬೇಕು.

■ ಲೆ| ಜ| (ನಿ)ಬಿ.ಎನ್‌.ಬಿ.ಎಂ ಪ್ರಸಾದ್‌

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

1-modi-BG

Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ

1-shah

J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.