Womens Asia Cup; ಸುಲಭದಲ್ಲಿ ಸೆಮಿ ಗೆದ್ದ ಭಾರತ; ಪ್ರಶಸ್ತಿ ಗೆಲ್ಲಲು ಇನ್ನೊಂದೇ ಹೆಜ್ಜೆ
Team Udayavani, Jul 26, 2024, 4:36 PM IST
ಡಂಬುಲಾ: ವನಿತಾ ಏಷ್ಯಾಕಪ್ 2024ರ ಕೂಟದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸುಲಭ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ವಿರುದ್ದ ನಡೆದ ಪಂದ್ಯದಲ್ಲಿ ಹರ್ಮನ್ ಬಳಗವು 10 ವಿಕೆಟ್ ಅಂತರದಿಂದ ಗೆದ್ದು ಫೈನಲ್ ಗೆ ಪ್ರವೇಶಿಸಿದೆ.
ರಣಗಿರಿ ಡಂಬುಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಭಾರತೀಯರ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ ಎಂಟು ವಿಕೆಟ್ ಕಳೆದುಕೊಂಡು ಕೇಲವ 80 ರನ್ ಮಾತ್ರ ಗಳಿಸಿತು. ಭಾರತ ತಂಡವು 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ಬಾಂಗ್ಲಾದೇಶ ವನಿತಾ ತಂಡವು ಬ್ಯಾಟಿಂಗ್ ನಲ್ಲಿ ಪರದಾಡಿತು. ನಾಯಕಿ ನಿಗರ್ ಸುಲ್ತಾನಾ 32 ರನ್ ಗಳಿಸಿದರೆ, ಶ್ರೋನಾ ಅಕ್ತರ್ ಅಜೇಯ 19 ರನ್ ಗಳಿಸಿದರು. ಉಳಿದ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ.
ಭಾರತದ ಪರ ರೇಣುಕಾ ಸಿಂಗ್ ಮತ್ತು ರಾಧಾ ಯಾದವ್ ಅವರು ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಬಾಂಗ್ಲಾ ನೀಡಿದ 81 ರನ್ ಗುರಿ ಭಾರತಕ್ಕೆ ಯಾವುದೇ ಸಮಸ್ಯೆ ತಂದೊಡ್ಡಲಿಲ್ಲ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಅವರು ಸುಲಭವಾಗಿ ಗುರಿ ಬೆನ್ನತ್ತಿದರು. ಸ್ಮೃತಿ ಅಜೇಯ 55 ರನ್ ಗಳಿಸಿದರೆ, ಶಫಾಲಿ ಅಜೇಯ 26 ರನ್ ಮಾಡಿದರು.
𝐈𝐧𝐭𝐨 𝐭𝐡𝐞 𝐟𝐢𝐧𝐚𝐥 🙌🙌
A formidable win against Bangladesh takes #TeamIndia into the Final and makes it 4⃣ wins in 4⃣ matches 👌👌
Scorecard ▶️ https://t.co/JwoMEaSoyn#INDvBAN | #WomensAsiaCup2024 | #ACC | #SemiFinal pic.twitter.com/2E1htJVcCp
— BCCI Women (@BCCIWomen) July 26, 2024
ಇದರೊಂದಿಗೆ ಭಾರತ ಮತ್ತೊಮ್ಮೆ ಏಷ್ಯಾ ಕಪ್ ಫೈನಲ್ ಪ್ರವೇಶ ಪಡೆದಿದೆ. ಎರಡನೇ ಸೆಮಿ ಫೈನಲ್ ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.